ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದುಕ್ಕೆ ಸುಣ್ಣ ಹಾಕಲು ನಮ್ಮದು ಕಾಂಗ್ರೆಸ್ ಸರ್ಕಾರವಲ್ಲ : ಸಿ.ಟಿ. ರವಿ
1 min readಚಿಕ್ಕಮಗಳೂರು : ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪ್ರೇರಿತವಾಗಿ ತಪ್ಪು ಅಭಿಪ್ರಾಯ ಮೂಡಿಸುವಂತ ಕೆಲಸ ಮಾಡುತ್ತಾರೆ. ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದುಕ್ಕೆ ಸುಣ್ಣ ಹಾಕಲು ನಮ್ಮದು ಕಾಂಗ್ರೆಸ್ ಸರ್ಕಾರವಲ್ಲ ಎಲ್ಲರಿಗೂ ನ್ಯಾಯ ಕೊಡುತ್ತೇವೆ ಎಂದು ಶಾಸಕ ಸಿ.ಟಿ. ರವಿ ಹೇಳಿದರು.
ರಾಜ್ಯದಲ್ಲಿ ಒಳ ಮೀಸಲಾತಿ ವಿವಾದದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಚುನಾವಣೆ ಸಂದರ್ಭದಲ್ಲಿ ಕೆಲವರು ತಪ್ಪು ಅಭಿಪ್ರಾಯ ಮೂಡಿಸಲು ಪ್ರಯತ್ನಿಸುತ್ತಾರೆ. ಸದಾಶಿವ ಆಯೋಗ ನಿಗದಿ ಮಾಡಿದ್ದೇ 3 ಪರ್ಸೆಂಟ್, ನಾವು ಕೊಟ್ಟಿರೋದು ನಾಲ್ಕುವರೆ ಪರ್ಸೆಂಟ್. ಹಿಂದಿನ ಕಾಂಗ್ರೆಸ್ ಸರ್ಕಾರ 2.50 ಯಿಂದ 3 ಪರ್ಸೆಂಟ್ ಕೊಡಬೇಕೆಂದು ಡ್ರಾಫ್ಟ್ ರೆಡಿ ಮಾಡಿತ್ತು. ನಾವು 4.50 ಪರ್ಸೆಂಟ್ ಕೊಟ್ಟಿದ್ದೇವೆ, ಆತಂಕ ಪಡುವ ಅಗತ್ಯವಿಲ್ಲ. ಸದಾಶಿವ ಆಯೋಗ ಕೊಟ್ಟಿದ್ದಕ್ಕಿಂತ ಜಾಸ್ತಿ ಕೊಟ್ಟಿದ್ದೇವೆ. ಯಾರಿಗಾದರೂ ಅನ್ಯಾಯವಾಗಿದೆ ಎನಿಸಿದರೆ ನ್ಯಾಯ ಕೊಡಲು ಸರ್ಕಾರ ಬದ್ಧವಾಗಿದೆ. ಬಿ.ಎಸ್.ವೈ. ಹಾಗೂ ಬೊಮ್ಮಾಯಿ ಸಾರ್ವಜನಿಕವಾಗೇ ಹೇಳಿದ್ದಾರೆ, ಆತಂಕ ಪಡುವ ಅಗತ್ಯವಿಲ್ಲ. ಬಂಜಾರ-ಭೋವಿ ಸಮಾಜ ಬಿಜೆಪಿ ಜೊತೆಗಿದೆ, ನಾವು ಅವರ ಜೊತೆ ಇದ್ದೇವೆ. ಯಾರನ್ನು ಬಿಟ್ಟು ಕೊಡುವುದಿಲ್ಲ, ಯಾರನ್ನು ಕಡೆಗಣಿಸುವುದೂ ಇಲ್ಲ ಎಂದು ಹೇಳಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g