ದೇವರಗದ್ದೆಯಲ್ಲಿ ಸಾವಿರಾರು ಜನರಿಂದ ಸಂಪ್ರದಾಯಿಕ ಶೈಲಿಯಲ್ಲಿ ಭತ್ತದ ನಾಟಿ
1 min read
ದಿನದಿಂದ ದಿನಕ್ಕೆ ಪಾಶ್ಚಿಮಾತ್ಯ ಸಂಸ್ಕøತಿಯನ್ನ ಮೈಗೂಡಿಸಿಕೊಳ್ಳುತ್ತಿರೋ ಆಧುನಿಕ ಸಮಾಜದ ಮಧ್ಯೆ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಪುರಾತನ ಸಂಸ್ಕøತಿಯ ಮೂಲಕ ಗದ್ದೆ ನಾಟಿ ಮಾಡಿ ಗಮನ ಸೆಳೆದಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹೊರನಾಡಿನ ದೊಡ್ಡಮನೆ ರಾಜೇಂದ್ರ ಪ್ರಸಾದ್ ಹೆಗ್ಗಡೆಯವರ ದೇವರಗದ್ದೆಯಲ್ಲಿ ಭತ್ತದ ಗದ್ದೆಯಲ್ಲಿ ಸುಮಾರು 1000ಕ್ಕೂ ಹೆಚ್ಚು ಜನ ಏಕಕಾಲದಲ್ಲಿ ಭತ್ತದ ಗದ್ದೆ ನಾಟಿ ಮಾಡಿದ್ದಾರೆ. ಮೂಡಿಗೆರೆ, ಕಳಸ, ಕೊಪ್ಪ, ಶೃಂಗೇರಿ, ಎನ್.ಆರ್.ಪುರ, ಬಲಿಗೆ, ಬಾಳೆಹೊನ್ನೂರು, ಬಸರೀಕಟ್ಟೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಿಂದ ಬಂದಿದ್ದ ಸಾವಿರಾರು ಜನ ನೂರಾರು ಎಕರೆ ಪ್ರದೇಶದ ಭತ್ತದ ಗದ್ದೆಯಲ್ಲಿ ಏಕಕಾಲದಲ್ಲಿ ನಾಟಿ ಮಾಡಿದ್ದಾರೆ. ಸಂಪ್ರಾದಾಯಿಕ ಶೈಲಿಯಲ್ಲಿ ಜನಪದ ಗೀತೆ ಹಾಡುತ್ತಾ ಸಾವಿರಾರು ಪರುಷರು-ಮಹಿಳೆಯರು ನಾಟಿ ಮಾಡಿದ್ದಾರೆ. ರಾಜೇಂದ್ರ ಪ್ರಸಾದ್ ಹೆಗ್ಗಡೆಯವರ ಗದ್ದೆಯಲ್ಲಿ ನಾಟಿ ಮಾಡಿದ ಬಳಿಕವೇ ಸುತ್ತಮುತ್ತಲಿನ ಗದ್ದೆಗಳಲ್ಲಿ ನಾಟಿ ಕಾರ್ಯ ಆರಂಭ ಮಾಡೋದು. ಎಲ್ಲರೂ ತಮ್ಮ ಗದ್ದೆಯನ್ನ ಹದ ಮಾಡಿ ರೆಡಿ ಮಾಡಿರುತ್ತಾರೆ. ಆದರೆ, ನಾಟಿ
ಮಾಡಿರುವುದಿಲ್ಲ. ರಾಜೇಂದ್ರ ಪ್ರಸಾದ್ ಅವರ ಗದ್ದೆಯಲ್ಲಿ ನಾಟಿ ಮಾಡಿದ ಬಳಿಕವೇ ತಮ್ಮ ಗದ್ದೆಗಳಲ್ಲಿ ನಾಟಿ ಕಾರ್ಯ ಮಾಡೋದು. ಇಲ್ಲಿಗೆ ಬಂದಂತಹಾ ಯಾರೊಬ್ಬರು ಕೂಡ ಒಂದೇ ಒಂದು ರೂಪಾಯಿ ಹಣ ಪಡೆದಿಲ್ಲ. ಬಂದಂತಹಾ ಎಲ್ಲರಿಗೂ ದೊಡ್ಡಮನೆ ಕುಟುಂಬ ಊಟದ ವ್ಯವಸ್ಥೆ ಕಲ್ಪಿಸಿತ್ತು. ಈ ಗದ್ದೆಯಲ್ಲಿ ಬೆಳೆದ ಭತ್ತವನ್ನ ಹೊರನಾಡು ಅನ್ನಪೂಣೇಶ್ವರಿ ದೇಗುಲದಲ್ಲಿ ದೇವಿಯ ನೈವೇದ್ಯಕ್ಕೆ ಬಳಸುತ್ತಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g