ಅಡಿಕೆ ಎಲೆ ಚುಕ್ಕೆ ರೋಗಕ್ಕೆ ಔಷಧ ಅಗತ್ಯ; ತುಳಸೇಗೌಡ
1 min readಚಿಕ್ಕಮಗಳೂರು: ಮಲೆನಾಡಿನಲ್ಲಿ ಅಡಿಕೆ ಮರಗಳನ್ನು ಬಾಧಿಸುತ್ತಿರುವ ಎಲೆ ಹಳದಿ ಮತ್ತು ಎಲೆ ಚುಕ್ಕೆ ರೋಗಕ್ಕೆ ಸರ್ಕಾರವು ಔಷಧಿಯನ್ನು ಕಂಡುಹಿಡಿದು ಮಲೆನಾಡಿನ ವಾಣಿಜ್ಯ ಬೆಳೆಯ ರಕ್ಷಣೆಯನ್ನು ಮಾಡಬೇಕು ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ತುಳಸೇಗೌಡ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲೆನಾಡಿನ ಶೃಂಗೇರಿ, ಕೊಪ್ಪ, ಎನ್. ಆರ್. ಪುರ ಭಾಗದ ರೈತರ ಪ್ರಸಿದ್ಧ ವಾಣಿಜ್ಯ ಬೆಳೆಯಾದ ಅಡಿಕೆಯನ್ನು ಬಾಧಿಸುತ್ತಿರುವ ರೋಗಗಳಲ್ಲಿ ಎಲೆ ಚುಕ್ಕೆ ರೋಗ ಪ್ರಮುಖವಾಗಿದ್ದು, ಇದರಿಂದ ಎಷ್ಟೋ ತೋಟಗಳು ಕೂಡ ನಾಶವಾಗಿದೆ. ಇದು ಮಲೆನಾಡಿನೆಲ್ಲೆಡೆ ವ್ಯಾಪಕವಾಗಿ ಹರಡುತ್ತಿದೆ. ಈ ಭಾಗದ ಬೆಳೆಗಾರರಲ್ಲಿ ಹೆಚ್ಚು ಆತಂಕಕ್ಕೂ ಇದು ಕಾರಣವಾಗಿದೆ. ಈ ರೋಗದಿಂದಾಗಿ ಆಡಿಕೆಯಲ್ಲಿ ಇಳುವರಿ ಕುಂಠಿತವಾಗಿದೆ. ಇದರಿಂದ ರೈತರು ಕಂಗಾಲಾಗುವಂತ ಪರಿಸ್ಥಿತಿ ಉಂಟಾಗಿದೆ.
ಸರ್ಕಾರವು ಎಲೆ ಚುಕ್ಕೆ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಔಷಧಿಯನ್ನು ಕಂಡುಹಿಡಿದು ಮಲೆನಾಡಿನ ವಾಣಿಜ್ಯ ಬೆಳೆಯ ರಕ್ಷಣೆಯನ್ನು ಮಾಡಬೇಕು. ಲಕ್ಷಾಂತರ ರೈತರು ಈ ಬೆಳೆಯನ್ನೇ ನಂಬಿಕೊಂಡು ಇದಕ್ಕೆ ಅವಲಂಬಿನಂತಾರಾಗಿದ್ದಾರೆ. ಔಷಧಿ ಸಿಂಪಡಿಸುವಂತಹ ಮಾರ್ಗವನ್ನು ಸರ್ಕಾರ ಆದಷ್ಟು ಶೀಘ್ರದಲ್ಲಿ ಮಾಡಬೇಕಿದೆ. ಈಗಾಗಲೇ ರೈತರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಹೀಗೆ ಮುಂದುವರೆದರೆ ಆತ್ಮಹತ್ಯೆ ದಾರಿಯನ್ನು ಕೂಡ ಹಿಡಿಯುತ್ತಾರೆ. ಆದ್ದರಿಂದ ಔಷಧಿಯನ್ನು ಕಂಡು ಹಿಡಿದು ರೈತರಿಗೆ ಅನುಕೂಲವಾಗುವಂತೆ ಮಾಡಬೇಕು ಎಂದು ಆಗ್ರಹಿಸಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g