ಹೊಸವರ್ಷದ ಹಿನ್ನೆಲೆ: ಕಾಫಿನಾಡಿಗೆ ಮುಗಿಬಿದ್ದ ಪ್ರವಾಸಿಗರು,ಕೊರೊನಾಗೆ ಡೋಂಟ್ ಕೇರ್
1 min read
ಚಿಕ್ಕಮಗಳೂರು: ಹೊಸ ವರ್ಷದ ಹಿನ್ನೆಲೆಯಲ್ಲಿ ಪ್ರವಾಸಿಗರ ಸ್ವರ್ಗ ಕಾಫಿನಾಡಿನ ಪ್ರಾಕೃತಿಕ ತಾಣಗಳು ಸೇರಿದಂತೆ ಪ್ರಸಿದ್ಧ ಪ್ರವಾಸಿತಾಣಗಳಿಗೆ ಶನಿವಾರ ಪ್ರವಾಸಿಗರ ದಂಡು ಸಾಗರೋಪಾದಿಯಲ್ಲಿ ಹರಿದು ಬಂದಿದ್ದು ಹೊಸ ವರ್ಷವನ್ನು ಕೊರೊನಾ ಮಾರ್ಗಸೂಚಿಗಳ ನಡುವೆಯೂ ಸಂಭ್ರಮದಿಂದ ಆಚರಣೆ ಮಾಡಿದರು
ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಬರುವ ಮುಳ್ಳಯ್ಯನಗಿರಿ, ದತ್ತಪೀಠ, ಹೊನ್ನಮ್ಮನ ಹಳ್ಳ, ಸಗೀರ್ ಫಾಲ್ಸ್ ಸೇರಿದಂತೆ ಕೆಮ್ಮಣ್ಣುಗುಂಡಿ, ಕಲ್ಲತ್ತಿಗಿರಿ ಭಾಗದಲ್ಲಿಯೂ ಸಹ ಶನಿವಾರ ರಾಜ್ಯ, ಹೊರ ರಾಜ್ಯಗಳಿಂದಲೂ ಸೇರಿದಂತೆ ಸಾವಿರಾರು ಜನ ಪ್ರವಾಸಿಗರು ಆಗಮಿಸಿ ಗಿರಿಪ್ರದೇಶದ ಸ್ವಚ್ಚಂದ ಪರಿಸರದಲ್ಲಿ ಹೊಸವರ್ಷಾಚರಣೆಯನ್ನು ಸಂಭ್ರಮದಿಂದ ಆಚರಣೆ ಮಾಡಿದರು. ಉಳಿದಂತೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್, ದೇವರಮನೆ ಬೆಟ್ಟ, ಕುದುರೆಮುಖ, ಮಲ್ಲಂದೂರು ಗುಡ್ಡ, ಕಾಮೇನಹಳ್ಳಿ ಫಾಲ್ಸ್, ಉಕ್ಕುಂದ ಜಲಪಾತ, ಸಿರಿಮನೆ ಫಾಲ್ಸ್ ಪ್ರವಾಸಿತಾಣಗಳಿಗೂ ಭೇಟಿ ನೀಡಿದ್ದಾರೆ
ಗಿರಿಪ್ರದೇಶಕ್ಕೆ ಸಾಗುವ ರಸ್ತೆಗಳಲ್ಲಿ ಶನಿವಾರ ಇಡೀ ದಿನ ಪ್ರವಾಸಿಗರು ಟ್ರಾಫಿಕ್ ಜಾಮ್ಗೆ ಸಿಲುಕಿ ಹೈರಾಣಾದ್ರು. ಕೈಮರ ಚೆಕ್ಪೋಸ್ಟ್ನಿಂದ ಗಿರಿಭಾಗಕ್ಕೆ 414 ದ್ವಚಕ್ರವಾಹನ, 1148 ನಾಲ್ಕು ಚಕ್ರದ ವಾಹನಗಳು(ಕಾರ್) ಸೇರಿದಂತೆ 89 ಟಿಟಿ, ಮಿನಿಬಸ್ಗಳಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಗಿರಿಪ್ರದೇಶಕ್ಕೆ ತೆರಳಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಗಂಟೆಗೊಮ್ಮ ಟ್ರಾಫಿಕ್ ಜಾಮ್ ಉಂಟಾಗಿ ಪ್ರವಾಸಿಗರು ಹೈರಾಣಾದ್ರು
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g