“ಡ್ರೋನ್ ಕ್ಯಾಮರಕ್ಕೂ ಚಳ್ಳೆ ಹಣ್ಣು ತಿನ್ನಿಸುತ್ತಿರೋ ಮೂಡಿಗೆರೆ ಭೈರ”
1 min read
ಚಿಕ್ಕಮಗಳೂರು. ಜಿಲ್ಲೆಯ ಮಲೆನಾಡು ಭಾಗದಲ್ಲಿ ದಿನದಿಂದ ದಿನಕ್ಕೆ ಆನೆ ಹಾವಳಿ ಹೆಚ್ಚುತ್ತಿದ್ದು ಸದ್ಯಕ್ಕೆ ಕಾಡಾನೆಗಳ ಹಾವಳಿ ತಣ್ಣಗಾಗುವಂತೆ ಕಾಣುತ್ತಿಲ್ಲ. ಕಳೆದ ಮೂರು ತಿಂಗಳಲ್ಲಿ ಕಾಡಾನೆ ಹಾವಳಿಗೆ ಮೂರು ಜನ ಪ್ರಾಣ ಕಳೆದಕೊಂಡಿದ್ದಾರೆ. ಮೂರರಲ್ಲಿ ಅಧಿಕಾರಿಗಳು ಒಂದನ್ನ ಸೆರೆ ಹಿಡಿದು ಮಡಿಕೇರಿಯ ಆನೆ ದುಬಾರೆಗೆ ಸ್ಥಳಾಂತರಿಸಿದ್ದಾರೆ. ಈ ಮಧ್ಯೆ ತಾಲೂಕಿನ ಆಲ್ದೂರಿನ ಸುತ್ತಮುತ್ತ ಮತ್ತೆ ಮೂರು ಕಾಡಾಣೆಗಳು ಸಂಚರಿಸುತ್ತಿದ್ದು ಸ್ಥಳಿಯರು ಕಂಗಲಾಗಿ ಮನೆಯಿಂದ ಹೊರಬರದಂತಹಾ ಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಆಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಸೇಮಕ್ಕಿ, ತೋಟದೂರು, ಮಾವಿನಗುಣಿ, ಉಕ್ಕುಂದ ಸೇರಿದಂತೆ ಹತ್ತಾರು ಹಳ್ಳಿಗಳಲ್ಲಿ ಅಧಿಕಾರಿಗಳು ಮೈಕಿನಲ್ಲಿ ಅನೌನ್ಸ್ ಮಾಡಿದ್ದಾರೆ. ಕಾಡಂಚಿನ ಕಾಫಿತೋಟದಲ್ಲಿ ಮೂರು ಕಾಡಾನೆಗಳು ಬೀಡು ಬಿಟ್ಟಿವೆ. ಗ್ರಾಮಸ್ಥರು, ತೋಟಗಳಿಗೆ ಕೆಲಸಕ್ಕೆ ಹೋಗುವವರು ಎಚ್ಚರಿಕೆಯಿಂದ ಇರಬೇಕೆಂದು ಮನವಿ ಮಾಡಿದ್ದಾರೆ. ಕಾಡಾನೆಗಳು ಮಾವಿನಗುಣಿ ಗ್ರಾಮದೊಳಕ್ಕೆ ಎಂಟ್ರಿ ಕೊಟ್ಟಿದ್ದರಿಂದ ಮಾವಿನಗುಣಿ ಗ್ರಾಮದಲ್ಲಿರುವ ಸುಮಾರು 40 ಮನೆಗಳಲ್ಲಿ ಯಾರು ಮನೆಯಿಂದ ಹೊರಬಂದಿರಲಿಲ್ಲ. ಎಲ್ಲರೂ ಮನೆಯಲ್ಲೇ ಕಾಲ ಕಳೆಯುವಂತಹಾ ಸ್ಥಿತಿಯೂ ನಿರ್ಮಾಣವಾಗಿದೆ. ಇನ್ನೂ ತೋಟಕ್ಕೆ ಕೆಲಸಕ್ಕೆ ಹೋಗೋದಕ್ಕೂ ಕೂಡ ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ಈಗಾಗಲೇ ಮೂರು ಕಾಡಾನೆಗಳನ್ನ ಹಿಡಿಯಲು ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆ ಅಧಿಕಾರಿಗಳು ಕಳೆದ ನಾಲ್ಕೈದು ದಿನದಿಂದ ಆನೆ ಸೆರೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.
ಆದರೆ, ಮೊದಲ ದಿನವೇ ಒಂದು ಆನೆಯನ್ನ ಸೆರೆಹಿಡಿದ ಅಧಿಕಾರಿಗಳು ಮತ್ತೆ ಯಾವುದೇ ಆನೆ ಹಿಡಿದಿಲ್ಲ. ಈಗಾಗಲೇ ಇಬ್ಬರನ್ನ ಬಲಿ ಪಡೆದಿರುವ ಮೂಡಿಗೆರೆ ಬೈರ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಡ್ರೋನ್ ಕ್ಯಾಮರಕ್ಕೂ ಚಳ್ಳೆ ಹಣ್ಣು ತಿನ್ನಿಸುತ್ತಾ ಕಾಡಿನಲ್ಲಿ ಮಿಂಚಿನ ವೇಗದಲ್ಲಿ ಕಣ್ಮರೆಯಾಗುತ್ತಿದೆ. ಇದರಿಂದ ಕಾಡಾನೆಯನ್ನ ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಹೈರಾಣಾಗಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಮೂಡಿಗೆರೆ ಒಂದು ಭಾಗದಲ್ಲಿ ಆನೆ ಹಿಡಿಯಲು ಹೋರಾಡುತ್ತಿದ್ದರೆ ಮತ್ತೊಂದು ಭಾಗದಲ್ಲಿ ಮತ್ತೆ ಮೂರು ಕಾಡಾನೆಗಳು ಕಾಣಿಸಿಕೊಂಡಿದ್ದು ಸ್ಥಳಿಯರ ಜೊತೆ ಅರಣ್ಯ ಇಲಾಖೆಗೂ ಆತಂಕ ಹುಟ್ಟಿಸಿದೆ. ಹಾಗಾಗಿ, ಸ್ಥಳಿಯರು ದಿನದಿಂದ ದಿನಕ್ಕೆ ಆನೆ ಹಾವಳಿ ಮಿತಿ ಮೀರುತ್ತಿದೆ. ಕಾಡಂಚು ಹಾಗೂ ಗ್ರಾಮದ ಅಂಚಿಗೂ ಆನೆಗಳು ಓಡಾಟಕ್ಕೆ ಸಾಧ್ಯವಾಗದಂತಹಾ ದೊಡ್ಡ ಕಂದಕವೇ ಇದಕ್ಕೆ ಪರಿಹಾರ ಅಂತಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g