May 14, 2024

MALNAD TV

HEART OF COFFEE CITY

ಶಾಸಕರಿಗೆ ನಗರಸಭೆಯಲ್ಲಿ ಮತ ಚಲಾಯಿಸುವ ಹಕ್ಕು ಇಲ್ಲ: ಬಿಜೆಪಿ ಮುಖಂಡ ಟಿ.ರಾಜಶೇಖರ್ ಪ್ರತಿಪಾದನೆ

1 min read

ಚಿಕ್ಕಮಗಳೂರು: ಶಾಸಕ ಎಚ್.ಡಿ ತಮ್ಮಯ್ಯಗೆ ನಗರಸಭೆಯ ಯಾವುದೇ ವಿಚಾರವಾಗಿ ಮತ ಚಲಾಯಿಸುವ ಹಕ್ಕು ಇಲ್ಲ ಎಂದು ಬಿಜೆಪಿ ನಗರಸಭೆ ಸದಸ್ಯ ಟಿ. ರಾಜಶೇಖರ ಪ್ರತಿಪಾದಿಸಿದರು.

ನಗರದ ಪ್ರೆಸ್ ಕ್ಲಬ್ ನಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ಹಾಗೂ ಜೆಡಿಎಸ್ ನಗರಸಭೆ ಸದಸ್ಯರು ಶಾಸಕ ಎಚ್.ಡಿ ತಮ್ಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.ನಗರಸಭೆಯ ಯಾವುದೇ ವಿಷಯದ ಮೇಲೆ ಪರ-ವಿರೋಧ ಮತದಾನ ಚಲಾಯಿಸಲು ಶಾಸಕರಿಗೆ ಮತದಾನದ ಹಕ್ಕು ಇಲ್ಲ ಎಂದು ನಗರಸಭೆ ಬಿಜೆಪಿ ಸದಸ್ಯ ಟಿ. ರಾಜಶೇಖರ್ ಹೇಳಿದ್ದಾರೆ. ಕರ್ನಾಟಕ ಮುನ್ಸಿಪಲ್ ಆಕ್ಟ್ 1964 ರ ಪ್ರಕಾರ ಮತದಾನದ ಹಕ್ಕು ಇಲ್ಲ ಈ ಕಾನೂನು ತಿಳಿಯದೇ ಶಾಸಕರು ವರ್ತಿಸಿದ್ದಾರೆ.

ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಕಾಂಗ್ರೆಸ್ ನ ಕೈಗೊಂಬೆಯಾಗಿದ್ದು ಕೋಟಿ ಕೋಟಿ ಲೂಟಿ ಮಾಡಲು ಹುನ್ನಾರ ನಡೆಸಿದ್ದಾರೆ ಎಂದು ಟಿ. ರಾಜಶೇಖರ ಆರೋಪಿಸಿದರು. ಮೊನ್ನೆ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ತರಾತುರಿಯಲ್ಲಿ ಬಿಲ್ ಪಾಸ್ ಮಾಡಲು ಹೊರಟಿರುವುದು ಕಮಿಷನ್ ಹೊಡೆಯಲು ಹೊರಟಿದ್ದಾರೆ. ನಗರಸಭೆಯಲ್ಲಿ ಹಣವೇ ಇಲ್ಲದೇ 3 ಕೋಟಿ ಟೆಂಡರ್ ಕರೆದಿರುವುದು ತನ್ನ ಮನೆಯ ಆಸ್ತಿ ಯಂತೆ ಕಾನೂನು ಮೀರಿ ವರ್ತಿಸುತ್ತಿದ್ದಾರೆ ಎಂದು ರಾಜಶೇಖರ ಆರೋಪಿಸಿದರು. ಕಾಂಗ್ರೆಸ್ ಸದಸ್ಯರಿಗೆ ಕಿಕ್ ಬ್ಯಾಕ್ ಹೋಗುತ್ತಿದೆಯಾ ಎಂದು ಗುಮಾನಿ ಇದೆ ಶಾಸಕ ನಗರಸಭೆ ಸದಸ್ಯರ ರೀತಿಯಲ್ಲಿ ವರ್ತಿಸಿದ್ದು ಬೇಸರವಿದೆ ಎಂದು ಟಿ ರಾಜಶೇಖರ್ ಈ ಸಂಪೂರ್ಣ ಚಿತ್ರಣದ ಹಿಂದೆ ಶಾಸಕ ನ ಬೆಂಬಲ ಇದೆ. ವರಸಿದ್ದಿ ಹಾಳಾಗಲು ಕಾಂಗ್ರೆಸ್ ಕುಮ್ಮಕ್ಕು ಇದೆ ಎಂದು ಎನಿಸುತ್ತದೆ. 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!