ಮುಸ್ಲಿಂ ವಸತಿ ನಿಲಯಕ್ಕೆ ಅನುದಾನ ಮಂಜೂರು ಮಾಡಿಸಿಕೊಟ್ಟ ಶಾಸಕರಿಗೆ ಸನ್ಮಾನ
1 min readನಗರದ ಬೇಲೂರು ರಸ್ತೆಯಲ್ಲಿರುವ ಸಾಹುಕಾರ್ ಮಹಮ್ಮದ್ ಹುಸೇನ್ ಮೆಮೋರಿಯಲ್ ಮುಸ್ಲಿಂ ವಸತಿ ನಿಲಯ ನಿರ್ಮಾಣಕ್ಕೆ ಪ್ರಧಾನ ಮಂತ್ರಿ ಜನವಿಕಾಸ್ ಕಾರ್ಯಕ್ರಮದ ಯೋಜನೆಯಡಿಯಲ್ಲಿ ೧೨.೪೦ ಕೋಟಿ ರೂ. ಅನುದಾನ ಮಂಜೂರಾಗಲು ಸಹಕರಿಸಿದ ಶಾಸಕ ಸಿ.ಟಿ.ರವಿ ಅವರಿಗೆ ಸಾಹುಕಾರ್ ಮಹಮ್ಮದ್ ಹುಸೇನ್ ಮೆಮೋರಿಯಲ್ ಮುಸ್ಲಿಂ ಕಮಿಟಿಯ ಪದಾಧಿಕಾರಿಗಳು ಇಂದು ಸನ್ಮಾನಿಸಿ ಗೌರವಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರದಿಂದ ೧೨.೪೦ ಕೋಟಿ ರೂ.ವೆಚ್ಚದಲ್ಲಿ ವಸತಿ ನಿಲಯಕ್ಕೆ ಹಣ ಬಿಡುಗಡೆಯಾಗಿದೆ. ಬೇಲೂರು ರಸ್ತೆಯಲ್ಲಿರುವ ಅಲ್ ಅಮೀನ್ ಶಾಲೆ ಪಕ್ಕದಲ್ಲಿರುವ ಜಾಗದಲ್ಲಿ ಕಟ್ಟಡ ನಿರ್ಮಾಣಗೊಳಿಸಲು ಮುಂದಾಗಲಿದೆ ಎಂದರು. ಮೊದಲು ನಗರದ ಹೊರವಲಯದಲ್ಲಿ ವಸತಿ ನಿಲಯಕ್ಕೆ ಜಾಗ ನೀಡಲು ಮನವಿ ಮಾಡಿದ್ದರು ಆದರೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಗರದ ಬೇಲೂರುರಸ್ತೆಯಲ್ಲಿ ಜಾಗ ಗುರುತಿಸಿದ್ದು ಆ ಜಾಗಕ್ಕೆ ಅನುದಾನ ಬಿಡುಗಡೆಗೊಳಿಸಿರುವ ಮುಖ್ಯಮಂತ್ರಿಗಳಿಗೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವರಿಗೆ ಧನ್ಯವಾದಗಳನ್ನು ತಿಳಿಸಿದರು. ಉತ್ತಮ ವಸತಿ ನಿಲಯ ನಿರ್ಮಾಣವಾಗಬೇಕು ಹಾಗೂ ಗುಣಮಟ್ಟದಿಂದ ಕೂಡಿರಬೇಕು ಎನ್ನುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಮುಂದಿನ ದಿನಗಳಲ್ಲಿ ಕಾಲಾವಕಾಶದೊಳಗೆ ವಸತಿ ನಿಲಯ ಪೂರ್ಣಗೊಳಿಸಲು ಸೂಚನೆ ನೀಡಲಿದ್ದೇವೆ ಎಂದು ತಿಳಿಸಿದರು.
ಈ ವೇಳೆ ಸಾಹುಕಾರ್ ಮಹಮ್ಮದ್ ಹುಸೇನ್ ಮೆಮೋರಿಯಲ್ ಮುಸ್ಲಿಂ ಕಮಿಟಿಯ ಉಪಾಧ್ಯಕ್ಷ ಬಿ.ಕೆ.ರೆಹಮಾನ್, ಕಾರ್ಯದರ್ಶಿ ದಾವೂದ್ ಅಲಿ ಜಂಶೀದ್, ಖಜಾಂಚಿ ವಾಸೀಂ ಜಮೀಲ್, ಸದಸ್ಯರುಗಳಾದ ಅಬ್ದುಲ್ ಕಬೀರ್, ಮಹಮ್ಮದ್ ಸಮೀವುಲ್ಲಾ, ಮುಷರಪ್, ದಾವೂದ್, ಫೈರೋಜ್ ಅಹ್ಮದ್, ಶಬ್ಬೀರ್ ಅಹ್ಮದ್, ನೂರ್ ಹುಸೇನ್ ಮತ್ತಿತರರು ಹಾಜರಿದ್ದರು
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g