ಅಯ್ಯನಕೆರೆಗೆ ಶಾಸಕ ಸಿಟಿ ರವಿ ಗಂಗಾ ಪೂಜೆ ಸಲ್ಲಿಸಿ ಭಾಗಿನ ಅರ್ಪಣೆ
1 min readಚಿಕ್ಕಮಗಳೂರು. ಐತಿಹಾಸಿಕ ಪ್ರಸಿದ್ಧ ತಾಲೂಕಿನ ಸಖರಾಯಪಟ್ಟಣದ ಅಯ್ಯನಕೆರೆ ಕೋಡಿ ಬಿದ್ದ ಹಿನ್ನೆಲೆ ಸ್ವಾಮಿಜಿಗಳ ಸಮ್ಮುಖದಲ್ಲಿ ಶಾಸಕ ಸಿಟಿ ರವಿ ಅವರು ಕೋಡಿ ಬಿದ್ದ ಅಯ್ಯನಕೆರೆಗೆ ಗಂಗಾಪೂಜೆ ಸಲ್ಲಿಸಿ ಭಾಗಿನ ಅರ್ಪಿಸಿದರು.
ಕೋಡಿ ಬಿದ್ದ ಅಯ್ಯನ ಕೆರೆಗೆ ಗಂಗಾಪೂಜೆ ಸಲ್ಲಿಸಿ ಭಾಗಿನ ಅರ್ಪಿಸಿ ಮಾತನಾಡಿದ ಶಾಸಕ ಸಿಟಿ ರವಿ. ಭಾರತ ವಿಶಿಷ್ಟದ ಸಭ್ಯತೆ ಸಂಸ್ಕೃತಿ ಹೊಂದಿರುವ ದೇಶ ನಾವು ಪ್ರಕೃತಿಯನ್ನ ತಾಯಿ ಎಂದು ಭಾವಿಸುತ್ತೇವೆ. ಅದಕ್ಕೆ ಭೂಮಿ ನಮಗೆ ತಾಯಿ, ಗಂಗೆ ನಮಗೆ ತಾಯಿ ಪ್ರತಿಯೊಂದರಲ್ಲೂ ಭಗವಂತನ ಕಾಣುವ ಒಂದು ಸನಾತನ ಹಿನ್ನೆಲೆಗೆ ಸೇರಿದವರು ನಾನು ನಮಗೆ ಉಪಕಾರಿಯಾಗುವ ಎಲ್ಲದನ್ನು ದೇವರು ಎಂದು ಭಾವಿಸುತ್ತೇವೆ. ಆಗಾಗಿ ಇಂದು ಗಂಗಾ ಪೂಜೆ ಸಲ್ಲಿಸಲಾಗಿದೆ. ನೀರು ಇಲ್ಲದೆ ಯಾರು ಬದುಕುತ್ತಾರೆ. ಈ ಭೂಮಿ, ನೀರು ಎಲ್ಲರಿಗೂ ಒಂದೇ ನಾನು ಬೇರೆ ಹೆಸರಿನಿಂದ ಕರೆಯುತ್ತೇವೆ ಆದರೆ ಆ ತಾಯಿಯ ಗುಣ ಒಂದೇ ಗಂಗೆ ಕೃತಜ್ಞತೆ ಸಲ್ಲಿಸಲು ಗಂಗಾ ಪೂಜೆ ಮಾಡುತ್ತಿದ್ದೇವೆ.
ಸ್ವಾಮಿಜಿಗಳ ಸಮ್ಮುಖದಲ್ಲಿ ಗಂಗಾ ಪೂಜೆ ನೆರವೇರಿಸಿದ್ದೇವೆ. ಪ್ರತಿ ವರ್ಷವೂ ಒಳ್ಳೆಯ ಮಳೆ ಕೊಡು ಸಮೃದ್ಧಯಿಂದ ಜನ ಕ್ಷೇಮವಾಗಿಡು ಎಂದು ಗಂಗಾ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿದರು.
ಮನುಷ್ಯನ ಪ್ರಕೃತಿಯನ್ನ ದುರಸೆಗೆ ಬಳಸದೆ ಪ್ರಕೃತಿ ಉಪಯೋಗಿಸ ಬೇಕು ಎಂದು ತಿಳಿಸಿದರು. ಅಯ್ಯನ ಕೆರೆ ಅಭಿವೃದ್ದಿಗೆ 4 ಕೋಟಿ 85 ಲಕ್ಷ ನೀಡಲಾಗಿದೆ. ಸಖರಾಯಪಟ್ಟಣ ಒಂದು ಗ್ರಾಮ ಪಂಚಾಯತಿಗೆ ಎರಡು ವರ್ಷದ ಅವಧಿಯಲ್ಲಿ 26 ಕೋಟಿ ವಿವಿಧ ಅಭಿವೃದ್ಧಿಗೆ ಮಂಜೂರು ಮಾಡಲಾಗಿದೆ. ನಾನು ಅಭಿವೃದ್ಧಿ ರಾಜಕಾರಣ ಮಾಡೋಣ ಎಂದು ಶಾಸಕ ಸಿಟಿ ತಿಳಿಸಿದರು.
ಇನ್ನು ಈ ವೇಳೆ ವಿಧಾನ ಪರಿಷತ್ ಉಪಸಭಾಪತಿ ಎಂಕೆ ಪ್ರಾಣೇಶ್. ವಿಧಾನ ಪರಿಷತ್ ಸದಸ್ಯ ಬೋಜೇಗೌಡ. ಗ್ರಾಮ ಪಂಚಾಯತಿ ಅಧ್ಯಕ್ಷೆ ಶಕುಂತಲಾ. ನೀರು ಅಚ್ಚಕಟ್ಟು ಕಾರರ ಸಮಿತಿ ಅಧ್ಯಕ್ಷ ಕಲ್ಮಾಡಪ್ಪ, ಸೇರಿದಂತೆ ಬಿಜೆಪಿ ಕಾರ್ಯಕರ್ತು ಭಾಗವಹಿಸಿದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g