ರಾಜಕಾರಣ ಎಂದರೇ ಹರಿಯುವ ನೀರಿದ್ದಂತೆ ವಿರೋಧ ಪಕ್ಷಕ್ಕೆ ಶಾಸಕ ಎಚ್.ಡಿ. ತಮ್ಮಯ್ಯ ಟಾಂಗ್
1 min readಚಿಕ್ಕಮಗಳೂರು: ರಾಜಕಾರಣ ಎಂದರೇ ಹರಿಯುವ ನೀರಿದ್ದಂತೆ, ಯಾವುದೇ ಪಕ್ಷ ಸತತವಾಗಿ ಶಾಶ್ವತ ಆಳ್ವಿಕೆ ನಡೆಸಿಲ್ಲ, ರಾಜ್ಯ ಮತ್ತು ದೇಶದಲ್ಲಿ ಅಧಿಕಾರದಲ್ಲಿದ್ದ ಸರ್ಕಾರ ರೈತರಿಗಾಗಿ ಏನು ಮಾಡಿದ್ದಾರೆ, ಇಡೀ ರಾಜ್ಯದಲ್ಲಿ ಡ್ಯಾಮ್ ನಿರ್ಮಿಸಿ ರೈತರಿಗಾಗಿ ನೀರಾವರಿ ಯೋಜನೆ ನೀಡಿದ್ದು ಕಾಂಗ್ರೆಸ್ ಸರ್ಕಾರ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ನಗರದ 24ನೇ ವಾರ್ಡಿನ ಜ್ಯೋತಿ ನಗರದ ಅಂಗನವಾಡಿ ಕೇಂದ್ರಕ್ಕೆ ಶಂಕುಸ್ಥಾಪನೆ ನೆರೆವೇರಿಸಿ ವಿರೋದ ಪಕ್ಷದ ಆರೋಪಗಳಿಗೆ ಉತ್ತರಿಸಿದ ಅವರು ರಾಜಕಾರಣ ಎಂದರೇ ಹರಿಯುವ ನೀರಿದಂತೆ, ಯಾವುದೇ ಪಕ್ಷ ಸತತವಾಗಿ ಶಾಶ್ವತ ಆಳ್ವಿಕೆ ನಡೆಸಿಲ್ಲ, ರಾಜ್ಯ ಮತ್ತು ದೇಶದಲ್ಲಿ ಅಧಿಕಾರದಲ್ಲಿದ್ದ ಸರ್ಕಾರ ರೈತರಿಗಾಗಿ ಏನು ಮಾಡಿದ್ದಾರೆ, ಇಡೀ ರಾಜ್ಯದಲ್ಲಿ ಡ್ಯಾಮ್ ನಿರ್ಮಿಸಿ ರೈತರಿಗಾಗಿ ನೀರಾವರಿ ಯೋಜನೆ ನೀಡಿದ್ದು ಕಾಂಗ್ರೆಸ್ ಸರ್ಕಾರ, 2004 ರಿಂದ 19 ವರ್ಷ ಅಧಿಕಾರದಲ್ಲಿದ್ದು, ಅಂದು ಮತ್ತು ಇಂದಿಗೂ ಕ್ಷೇತ್ರದ ಅಭಿವೃದ್ಧಿಯಲ್ಲಿ ಏನು ಬದಲಾವಣೆ ಆಗಿದೆ ಎಂದು ಬಿಜೆಪಿ ಪಕ್ಷದ ವಿರುದ್ಧ ಕಿಡಿಕಾರಿದರು.
19 ವರ್ಷಗಳು ಬೇಕಾಯಿತೇ ಜಿಲ್ಲೆಗೆ ಮೆಡಿಕಲ್ ಕಾಲೇಜ್ ತರಲು..? ಕರಗಡ ಯೋಜನೆ, ಯಗಚಿ ನೀರಾವರಿ ಯೋಜನೆ ಯಾರ ಅಧಿಕಾರ ಅವಧಿಯಲ್ಲಿ ಪ್ರಾರಂಭವಾಗಿದ್ದು..? ಇನ್ನು ಹಲವಾರು ವಿಷಯಗಳಿವೆ ಹೇಳುತ್ತಾ ಹೋದರೆ ಸಮಯ ಬಂದಾಗ ಎಲ್ಲದಕ್ಕೂ ಉತ್ತರ ನೀಡುತ್ತೇನೆ ಎಂದು ವಿರೋಧ ಪಕ್ಷಕ್ಕೆ ಟಾಂಗ್ ನೀಡಿದ್ದಾರೆ. ವಿಶ್ವಗುರು ಮಹಾ ಗುರು ಎಂದೆಲ್ಲಾ ಹೇಳುತ್ತಾರಲ್ಲ ದೇಶದಲ್ಲಿ 3 ರೇ ಮೂರು ವಿಮಾನ ನಿಲ್ದಾಣಗಳಾಗಿವೆ ಅದು ಶಿವಮೊಗ್ಗ ಸೇರಿದಂತೆ ಇನ್ನುಳಿದ ವಿಮಾನ ನಿಲ್ದಾಣಗಳು ಹಾಗಾದರೆ ಮಾಡಿದವರು ಯಾರು? ರೈತರಿಗಾಗಿ ಡ್ಯಾಮ್ ಕಟ್ಟಿದವರು ಯಾರು? ಎಂದು ಪ್ರಶ್ನಿಸಿದ ಅವರು ಶಂಕುಸ್ಥಾಪನೆ ಮಾಡಿದಂತಹ ಯೋಜನೆಗಳಿಗೆ ಉದ್ಘಾಟನೆಯನ್ನು ಯಾರು ಅಧಿಕಾರದಲ್ಲಿರುತ್ತಾರೋ ಅವರು ಮಾಡುತ್ತಾರೆ ಅದು ತಪ್ಪು ಕೂಡ ಅಲ್ಲ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಆಯುಕ್ತ ಬಸವರಾಜ್, ಸದಸ್ಯರಾದ ಗುರುಮಲ್ಲಪ್ಪ, ಕಾಂಗ್ರೆಸ್ ಪಕ್ಷದ ಮುಖಂಡರಾದ ರೇಖಾಹುಲಿಯಪ್ಪಗೌಡ, ಮಂಜೇಗೌಡ್ರು, ಮಲ್ಲಿಕಾರ್ಜುನ್, ಪುನೀತ್, ಸೂರ್ಯ, ಕುಮಾರಣ್ಣ, ಸ್ಥಳಿಯರಾದ ಮಂಜುನಾಥ್, ರಾಕೇಶ್ ಮತ್ತಿತರರು ಉಪಸ್ಥಿತರಿದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g