ಶೋಭಾ ಕರಂದ್ಲಾಜೆ ವಿರುದ್ಧ ಭುಗಿಲೆದ್ದ ಗೋ ಬ್ಯಾಕ್ ಆಕ್ರೋಶ
1 min readಚಿಕ್ಕಮಗಳೂರು ಬಿಜೆಪಿ ಕಚೇರಿಯಲ್ಲಿ ಇಂದು ಗೋ ಬ್ಯಾಕ್ ಬ್ಯಾಕ್ ಘೋಷಣೆ ಮುಗಿಲು ಮಟ್ಟಿತ್ತು , ಅಪ್ಪಟ ಬಿಜೆಪಿಯ ಕಾರ್ಯಕರ್ತರಿಂದಲೇ ಗೋ ಬ್ಯಾಕ್ ನಡೆದಿತ್ತು, ಟಿಕೆಟ್ ಅನೌನ್ಸ್ ಆಗಿಲ್ಲ, ಬಿಎಸ್ ವೈ ಶೋಭಾ ಕರಂದ್ಲಾಜೆಗೆ ಟಿಕೆಟ್ ಎಂದು ಅನೌನ್ಸ್ ಮಾಡಿದ್ರು
ಯಡಿಯೂರಪ್ಪ ಹಾದಿಬೀದಿಯಲ್ಲಿ ಶೋಭಾ ಕರಂದ್ಲಾಜೆಗೆ ಟಿಕೆಟ್ ಮಾಡಿದ್ದು ಏಕೆ ಎಂದು ಕಾರ್ಯಕರ್ತರು ಪ್ರಶ್ನಿಸಿದರು. ಶೋಭಾ ಕರಂದ್ಲಾಜೆಗೆ ಟಿಕೆಟ್ ಬೇಡವೇ ಬೇಡ ಎಂದು ಕೂಗಾಡಿದ ಮುಖಂಡರು ಶೋಭಾ ವಿರುದ್ಧ ಬಿಜೆಪಿ ಕಾರ್ಯಕರ್ತರ ಆಕ್ರೋಶ ವ್ಯಕ್ತಪಡಿಸಿದರು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಐದು ಎಂ.ಎಲ್.ಎ. ಸೋಲಲು ಶೋಭಾ ಕಾರಣ
ಕಳೆದ 15 ವರ್ಷಗಳಿಂದ
ಉಡುಪಿ ಮೂಲದವರೇ ಸಂಸದರಾಗಿದ್ದಾರೆ. ಉಡುಪಿಯಲ್ಲಿ ಐವರು ಶಾಸಕರಿದ್ದಾರೆ, ಚಿಕ್ಕಮಗಳೂರಲ್ಲಿ ಯಾರೂ ಇಲ್ಲ ಈ ಬಾರಿ ಚಿಕ್ಕಮಗಳೂರಿನವರಿಗೆ ಟಿಕೆಟ್ ಕೊಡಬೇಕು
ಯಾರಿಗಾದ್ರು ಕೊಡಿ ಎಂದು ಘೋಷಣೆ ಕೂಗಿದರು. ಲೋಕಸಭಾ ಚುನಾವಣೆ ಸಂಬಂಧ ಸಭೆ ನಡೆಸಲು ಆಗಮಿಸಿದ್ದ ಚುನಾವಣಾ ನಿರ್ವಹಣಾ ಸಮಿತಿ ವಿರುದ್ದ ಕೂಡಾ ಕಾರ್ಯಕರ್ತರು ಅಕ್ರೋಶ ಹೊರಹಾಕಿದರು. ಲೋಕಸಭಾ ಕ್ಷೇತ್ರದ ಉಸ್ತುವಾರಿ ಮಾಜಿ ಸಚಿವ ಅರಗ ಜ್ಞಾನೇಂದ್ರ. ಚುನಾವಣಾ ಉಸ್ತುವಾರಿ ಸಂಚಾಲಕ ಭಾನುಪ್ರಕಾಶ್ ಮುಂದೆ ಘೋಷಣೆ ಹಾಕಿದರು
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g