May 4, 2024

MALNAD TV

HEART OF COFFEE CITY

ಮೇಕೆದಾಟು ಪಾದಯಾತ್ರೆ ಕೇವಲ ರಾಜಕೀಯ_ಸಿ.ಟಿ ರವಿ

1 min read

 

ಚಿಕ್ಕಮಗಳೂರು: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಯ ಉದ್ದೇಶ ರಾಜಕೀಯ ಬಿಟ್ಟು ಬೇರೆ ಏನೂ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ ರವಿ ಹೇಳಿದರು.ನಗರದಲ್ಲಿ ಈ ಕುರಿತು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಆರು ವರ್ಷ ಅಧಿಕಾರದಲ್ಲಿದ್ದಾಗ ಮೇಕೆದಾಟು ಬಗ್ಗೆ ಚಕಾರ ಎತ್ತಿಲ್ಲ, ಕೇಂದ್ರ ಸರ್ಕಾರ ತಾತ್ವಿಕ ಅನುಮೋದನೆ ನೀಡಿದೆ, ರಾಜ್ಯ ಸರ್ಕಾರ ಈ ವಿಚಾರದಲ್ಲಿ ತನ್ನ ಬದ್ಧತೆ ಪ್ರದರ್ಶನ ಮಾಡಿದೆ. ಆದರೆ ಯೋಜನೆಗೆ ಅಡ್ಡಿಯಾಗಿರುವುದು ತಮಿಳುನಾಡು ಸರ್ಕಾರ. ಅಲ್ಲಿ ಕಾಂಗ್ರೆಸ್ ಬೆಂಬಲದ ಡಿಎಂಕೆ ಸರ್ಕಾರ ಇದೆ. ಕಾಂಗ್ರೆಸ್ ಇಲ್ಲಿ ಪಾದಯಾತ್ರೆ ನಾಟಕ ಮಾಡುವ ಬದಲಾಗಿ ಅಲ್ಲಿನ ಸರ್ಕಾರದ ಮನವೊಲಿಸುವ ಕೆಲಸ ಮಾಡಲಿ ಎಂದರು.

ಈ ವಿಚಾರವಾಗಿ ಸಿದ್ದರಾಮಯ್ಯ. ಡಿ.ಕೆ ಶಿವಕುಮಾರ್ ದೇಹಲಿಗೆ ನಿಯೋಗ ಕರೆದುಕೊಂಡು ಹೋಗಿ ಚಿದಂಬರಂ, ಡಿಎಂಕೆಯ ಸ್ಟಾಲೀನ್ ಅವರನ್ನು ಒಪ್ಪಿಸಿ, ಅವರು ಯಾವುದೇ ಆಕ್ಷೇಪಣೆ ಇಲ್ಲ ಅಂದ್ರೆ ನಮಗೆ ಎಲ್ಲಾ ರೀತಿಯ ಅಡತಡೆಗಳು ನಿವಾರಣೆಯಾಗುತ್ತದೆ. ಈ ಕೆಲಸವನ್ನು ಕಾಂಗ್ರೆಸ್ ಮಾಡುವ ಬದಲು, ಇಲ್ಲಿ ಪಾದಯಾತ್ರೆ ಮಾಡಿದರೆ ಅದು ದೈಹಿಕ ಕಸರತ್ತು ನೀಡಬಹುದು ಎಂದು ಕುಟುಕಿದರು.ಅಂತಿಮವಾಗಿ ತಮಿಳುನಾಡಿನ ಆಕ್ಷೇಪಣೆ ಇದ್ದಾಗ ನ್ಯಾಯಾಲಯದಲ್ಲಿ ಅಂತಿಮ ತೀರ್ಪು ಬರುವವರೆಗೆ ಕಾಯಬೇಕಾಗುತ್ತದೆ ಅಥವಾ ತಮಿಳುನಾಡು ಸರ್ಕಾರವನ್ನು ಒಪ್ಪಿಸಬೇಕಾಗುತ್ತದೆ ಆ ತಾಕತ್ತು ಸಿದ್ದರಾಮಯ್ಯ ಅವರಿಗೆ ಇದೆ. ಅವರು ಗುಟ್ರು ಹಾಕಿದರೆ ಸೋನಿಯಾ ಗಾಂಧಿ ಇಲ್ಲ ಅನ್ನಲ್ಲ ಎಂದು ವ್ಯಂಗ್ಯವಾಡಿದರು.

ಇದೇ ವೇಳೆ ಹಿಜಾಬ್ ವಿಚಾರದ ಕುರಿತು ಮಾತನಾಡಿದ ಅವರು, ನ್ಯಾಯಾಲಯ ಮಧ್ಯಂತರ ಆದೇಶದಲ್ಲಿ ಬೇರೆ ಡ್ರೆಸ್‍ಗೆ ಅವಕಾಶ ಇಲ್ಲ ಎಂದು ಹೇಳಿದ್ದು ಅದನ್ನು ಪಾಲಿಸಬೇಕು. ಇದನ್ನು ಹೊರತಾಗಿ ನಮಗೆ ಅದೇ ಬೇಕು ಎಂಬ ಮಾನಸಿಕತೆ ನಾವೇ ಬೇರೆ, ನೀವೆ ಬೇರೆ ಎಂಬುದನ್ನು ಹುಟ್ಟು ಹಾಕುತ್ತದೆ. ಶಾಲೆಯಲ್ಲಿ ಸಮವಸ್ತ್ರ ಇರಬೇಕು ಎಂದು ಹತ್ತಾರು ಬಾರಿ ಹೇಳಿದ್ದೇವೆ. ಈ ವಿಚಾರದಲ್ಲಿ ಜಾತ್ಯಾತೀತ ಎಂದು ಕರೆಸಿಕೊಳ್ಳುವ ಕಾಂಗ್ರೆಸ್ ತನ್ನ ಮತೀಯ ರೂಪವನ್ನು ಪ್ರಕಟಗೊಳಿಸಿದೆ. ಹಿಂದೂಗಳನ್ನು ಮೋಸ ಮಾಡಲು ಜಾತ್ಯಾತೀತ ಎಂಬುದನ್ನು ಬಳಸಿಕೊಂಡಿದ್ದಾರೆ ಎಂದು ಟೀಕಿಸಿದರು. ಈ ಮೂಲಕ ಕಾಂಗ್ರೆಸ್. ತನ್ನ ಮತೀಯವಾದ, ಅಲ್ಪಸಂಖ್ಯಾತಿತನವನ್ನು ಪ್ರಕಟಗೊಳಿಸಿದೆ. ಸಿದ್ದರಾಮಯ್ಯ ಒಬ್ಬ ಮತೀಯವಾದಿ ಹಾಗೂ ತಾಲೀಬಾನಿಗೂ ಕಡಿಮೆ ಇಲ್ಲದ ಮನಸ್ಥಿತಿಯವರು ಎಂದು ಕಿಡಿಕಾರಿದ್ರು.

ಪಂಚರಾಜ್ಯ ಚುನಾವಣೆಯಲ್ಲಿ ನಾವು ದೇಶ ಹಾಗೂ ಆಯಾ ರಾಜ್ಯಗಳ ಅಭಿವೃದ್ಧಿಯ ದೃಷ್ಟಿಯಲ್ಲಿ ಕೆಲಸ ಮಾಡಿದ್ದೇವೆ. ಅದನ್ನೇ ಜನರ ಮುಂದೆ ಇಟ್ಟು ಮತಯಾಚಿಸಿದ್ದು ಕಷ್ಟಪಟ್ಟವರಿಗೆ ಫಲ ಸಿಗುತ್ತದೆ ಎಂಬ ನಂಬಿಕೆ ಇದ್ದು ಐದು ರಾಜ್ಯಗಳಲ್ಲಿಯೂ ಸಹ ಗೆಲ್ಲುವ ವಿಶ್ವಾಸ ವ್ಯಕ್ಯಪಡಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!