ಕತ್ತಿಯಿಂದ ಸಹೋದರನ ಹಲ್ಲೆ: ಆರೋಪಿಗೆ ಜೈಲು-ದಂಡ
1 min readಚಿಕ್ಕಮಗಳೂರು: ಹಳೆಯ ದ್ವೇಷದಿಂದ ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿದ ಆರೋಪಿಗೆ ಜಿಲ್ಲಾ ನ್ಯಾಯಾಲಯ 5 ವರ್ಷಗಳ ಕಠಿಣ ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ.
ಮಲ್ಲಂದೂರು ಠಾಣಾ ವ್ಯಾಪ್ತಿಯ ನಿಡಗೋಡು ಗ್ರಾಮದ ಶರತ್ಕುಮಾರ್ ಶಿಕ್ಷೆಗೊಳಗಾದವರು. ಆರೋಪಿಯ ತಂದೆಗೆ ಇಬ್ಬರು ಹೆಂಡತಿಯರಿದ್ದು, ಮೊದಲನೇ ಹೆಂಡತಿಯ ಮಗ ಸುಂದ್ರೇಶ್ ಹಾಗೂ ಎರಡನೇ ಹೆಂಡತಿಯ ಮಗ ಕುಮಾರ್ ತಂದೆಯ ಆಸ್ತಿಯನ್ನು ಭಾಗ ಮಾಡಿಕೊಂಡು ಬೇರೆ ಬೇರೆ ವಾಸವಾಗಿದ್ದರು. 2015ರ ಡಿಸೆಂಬರ್ 21 ರಂದು ಸುಂದ್ರೇಶ್ ತನ್ನ ತೋಟಕ್ಕೆ ಹೋಗಲು ಆರೋಪಿಯ ಮನೆ ಮುಂದೆ ಹೋದಾಗ ಆರೋಪಿ ಕುಮಾರ್, ಆಸ್ತಿ ವಿಚಾರದಲ್ಲಿ ಪೂರ್ವದ್ವೇಷದ ಹಿನ್ನೆಲೆಯಲ್ಲಿ ಜಗಳ ತೆಗೆದು ಕತ್ತಿಯಿಂದ ಮಾರಣಾಂತಿಕ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಮಲ್ಲಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶುಭ ಗೌಡರ್ ಅವರು, ಅಪರಾಧ ಮಾಡಿರುವುದು ಸಾಭೀತಾದ ಹಿನ್ನೆಲೆಯಲ್ಲಿ ಆರೋಪಿ ಶರತ್ಕುಮಾರ್ಗೆ 5 ವರ್ಷಗಳ ಕಠಿಣ ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ ಫೆ.18ರಂದು ತೀರ್ಪು ನೀಡಿದ್ದಾರೆ. ದಂಡದ ಮೊತ್ತದಲ್ಲಿ ಗಾಯಾಳು ಸುಂದ್ರೇಶ್ ಅವರಿಗೆ 20 ಸಾವಿರ ಪರಿಹಾರ ನೀಡಲು ಆದೇಶಿಸಲಾಗಿದೆ.
ಪ್ರಕರಣದಲ್ಲಿ ಸಿ.ಪಿ.ಐ ಕೆ.ಎಂ.ಯೋಗೇಶ್ ಮತ್ತು ಪಿಎಸ್ಐ ಜಯ ಅವರು ತನಿಖಾಧಿಕಾರಿಗಳಾಗಿದ್ದರು. ಸರ್ಕಾರದ ಪರವಾಗಿ ಅಭಿಯೋಜಕರಾದ ವಿ.ಜಿ.ಯಳಗೇರಿ ಮತ್ತು ಭಾವನ ಅವರು ಸಾಕ್ಷ್ಯ ವಿಚಾರಣೆ ನಡೆಸಿ, ವಾದ ಮಂಡಿಸಿದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g