ಕಾಂಡು ಹಂದಿ ಬೇಟೆ ಮಾಡಿ ಮಾಂಸ ಸಾಗಾಟ, ಐದು ಜನರ ಬಂಧನ
1 min read
ಚಿಕ್ಕಮಗಳೂರು:ತಾಲ್ಲೂಕಿನ ಲಕ್ಯಾ ಹೋಬಳಿ, ಲಕ್ಷ್ಮೀಪುರ ಸಮೀಪ ಲಕ್ಯಾ ಕ್ರಾಸ್ ಬಳಿ,ಕಾರ್ ನಂ:ಕೆ.ಎ.18-ಎಂ- 8573 ರಲ್ಲಿ ಕಾಡು ಹಂದಿ ಮಾಂಸ ಸಾಗಾಣಿಕೆ ಮಾಡುತ್ತಿದ್ದ ಐದು ಜನ ಆಸಾಮಿಗಳನ್ನು ಚಿಕ್ಕಮಗಳೂರು ಅರಣ್ಯ ಸಂಚಾರಿ ದಳದ ಅಧಿಕಾರಿ ಸಿಬ್ಬಂದಿಗಳು ಬಂಧಿಸಿ, ಅವರುಗಳ ವಿರುದ್ಧ ವನ್ಯ ಜೀವಿ ಕಾಯಿದೆ ಅನ್ವಯ ಪ್ರಕರಣ ದಾಖಲಿಸಿದ್ದಾರೆ
ಬಂಧಿತ ಆರೋಪಿಗಳು, 1.ಮದುಕುಮಾರ್, 2.ಈರೇಶ, 3.ಜಯಪ್ಪ, 4,ವಿಜಯಕುಮಾರ್. 5.ಕೃಷ್ಣ ಇವರುಗಳು ಚಿಕ್ಕಮಗಳೂರು ತಾಲ್ಲೂಕು, ಕಸಬಾ ಹೋಬಳಿ, ಹೆಡದಾಳು ಗ್ರಾಮದ ವಾಸಿಗಳಾಗಿರುತ್ತಾರೆ. ಆರೋಪಿಗಳಿಂದ ಪರವಾನಗಿ ಇರುವ ಎರಡು ಬಂದೂಕುಗಳು, ಐದು ಸಜೀವ ಕಾಟೇಜಳು, ಕಾಡು ಹಂದಿಯ ಮಾಂಸ 23 ಕೆ.ಜಿ. ಹಾಗೂ ಮೂರು ಕತ್ತಿಗಳೊಂದಿಗೆ ಒಂದು ಆಲ್ಲೂ ಕಾರ್ ಅನ್ನು ಅಮಾನತ್ತು ಪಡಿಸಿಕೊಳ್ಳಲಾಗಿದ್ದು ತನಿಖೆ ನಡೆಸಲಾಗಿದೆ
ಕಾರ್ಯಚರಣೆಯಲ್ಲಿ ಚಿಕ್ಕಮಗಳೂರು ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀಯುತ, ಕೆ.ಆರ್.ಸತೀಶ್ ಸರ್ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀಯುತ ಕೆ.ಸಿ.ಜಯೇಶ್ ಸರ್ ಇವರುಗಳ ಮಾರ್ಗದರ್ಶನದಲ್ಲಿ ವಲಯ ಅರಣ್ಯ ಅಧಿಕಾರಿ ಆರ್. ವೆಂಕಟೇಶ್, ಉಪ ವಲಯ ಅರಣ್ಯಾಧಿಕಾರಿಗಳಾದ, ನಂಧೀಶ್, ನಾರಾಯಣ್, ದಿನೇಶ್, ವೆಂಕಟೇಶ್, ಅಶ್ವಥ್, ಹಾಗೂ ಅರಣ್ಯ ರಕ್ಷಕರುಗಳಾದ, ಕುಮಾರಸ್ವಾಮಿ, ಹೇಮಂತ್, ಈಶ್ವರ್, ವೆಂಕಟೇಶ್, ಜಯ್ ಪ್ರಕಾಶ್, ಹಾಗೂ ವಾಹನ ಚಾಲಕ ಸುನೀಲ್ ಕುಮಾರ್, ಭಾಗವಹಿಸಿದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g