May 5, 2024

MALNAD TV

HEART OF COFFEE CITY

ಋಷಿಕುಮಾರ ಸ್ವಾಮೀಜಿಗೆ ಬೆದರಿಕೆ, ಭದ್ರತೆಗೆ ಒತ್ತಾಯ

1 min read

 

ಚಿಕ್ಕಮಗಳೂರು: ಕಾಳಿ ಮಠದ ಮಠಾಧಿಪತಿಗಳಾದ ಋಷಿಕುಮಾರ ಸ್ವಾಮಿಜಿಯವರಿಗೆ ಬೆದರಿಕೆ ಕರೆಗಳು ಬರುತ್ತಿದ್ದು ಈ ಹಿನ್ನೆಲೆ ಅವರಿಗೆ ಭದ್ರತೆ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಕಚೇರಿ ಮೂಲಕ ವರಿಷ್ಟಾಧಿಕಾರಿಗಳಿಗೆ ಶ್ರೀರಾಮ ಸೇನೆ ವತಿಯಿಂದ ಗುರುವಾರ ಮನವಿ ಸಲ್ಲಿಸಿ ಒತಾಯಿಸಲಾಗಿದೆ.

ಸಖರಾಯಪಟ್ಟಣ ಹೋಬಳಿಯಲ್ಲಿರುವ ಸುಕ್ಷೇತ್ರ ಕಾಳಿ ಮಠದ ಮಠಾಧಿಪತಿ ಶ್ರೀ ಋಷಿಕುಮಾರ ಸ್ವಾಮಿಜಿ, ಹಿಂದು ಧರ್ಮದ ಪರವಾದ ಅನೇಕ ಹೋರಾಟಗಳಲ್ಲಿ ತೊಡಗಿಸಿ ಕೊಂಡಿದ್ದು ಇವರಿಗೆ ಅನ್ಯ ಧರ್ಮಿಯರಿಂದ ಅನೇಕ ಬೆದರಿಕೆ ಕರೆಗಳು ಬರುತ್ತಿದೆ ಹಾಗೂ ಮಠದ ಸುತ್ತ ಮುತ್ತ ಕಳೆದ ಕೆಲ ದಿನಗಳಿಂದ ಮಧ್ಯರಾತ್ರಿಯಲ್ಲಿ ಅಪರಿಚಿತ ವಾಹನಗಳು ಓಡಾಡುತ್ತಿವೆ. ಜೊತೆಗೆ ಕಾಳಿಮಠದಲ್ಲಿ ಅಮೂಲ್ಯವಾದ ದತ್ತಾತ್ರೇಯರ ಮೂಲ ವಿಗ್ರಹ ಕೂಡ ಇದ್ದು ಯಾವುದೇ ತೊಂದರೆಯಾಗದಂತೆ ಸ್ವಾಮಿಜಿಯವರಿಗೆ ಮತ್ತು ಮಠಕ್ಕೆ ಸೂಕ್ತ ಭದ್ರತೆ ನೀಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ವೇಳೆ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ರಂಜೀತ್ ಶೆಟ್ಟಿ, ತಾಲೂಕು ಅಧ್ಯಕ್ಷ ನವೀನ್, ಜಿಲ್ಲಾ ಉಪಾಧ್ಯಕ್ಷ ದಿಲೀಪ್ ಶೆಟ್ಟಿ, ಜ್ಞಾನೇಂದ್ರ, ಯಶ್ವಂತ್, ಅಭಿ, ಮಹೇಶ್, ಮಂಜು ಸೇರಿದಂತೆ ಹಲವರು ಇದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!