ರಸಗೊಬ್ಬರ ಮಾರಾಟ ಮಳಿಗೆಗಳ ಮೇಲೆ ಕೃಷಿ ಅಧಿಕಾರಿಗಳಿಂದ ದಾಳಿ
1 min readಚಿಕ್ಕಮಗಳೂರು ತಾಲ್ಲೂಕು ಗಡಿ ಭಾಗದಲ್ಲಿರುವ ಕೃಷಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಚಿಲ್ಲರೆ ರಸಗೊಬ್ಬರ ಮಾರಾಟ ಮಳಿಗೆಗಳ ಮೇಲೆ ಜಿಲ್ಲಾ ಜಾಗೃತ ದಳದ ಸಹಾಯಕ ಕೃಷಿ ನಿರ್ದೇಶಕರಾದ ಶ್ರೀ ಎಸ್ ವೆಂಕಟೇಶ ಚವ್ಹಾಣ್ ಹಾಗೂ ಖಾಂಡ್ಯ ಹೋಬಳಿಯ ಕೃಷಿ ಅಧಿಕಾರಿಗಳಾದ ಶ್ರೀ ಎಸ್.ವಿ.ಎಸ್ ಶರ್ಮಾರವರ ತಂಡ ದಾಳಿ ನಡೆಸಿದ್ದಾರೆ.ಚಿಕ್ಕಮಗಳೂರು ತಾಲ್ಲೂಕಿನ ಖಾಂಡ್ಯ ಹೋಬಳಿಯ ಹುಯಿಗೆರೆ ಪಿ.ಎ.ಸಿ.ಎಸ್ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ಸೊಸೈಟಿಯವರು ಅಧಿಕೃತ ಪರವಾನಗಿ ಇಲ್ಲದೆ ರಸಗೊಬ್ಬರವನ್ನು ಮಾರಾಟ ಮಾಡುತ್ತಿದ್ದು ಕಂಡು ಬಂದಿರುವ ಕಾರಣ ದಾಸ್ತಾನು ಇರಿಸಲಾದ ರಸಗೊಬ್ಬರಗಳನ್ನು ೨೧ ದಿನಗಳ ಕಾಲ ಮಾರಾಟ ಮಾಡದಂತೆ ಮಾರಾಟ ತಡೆ ನೋಟಿಸ್ ಜಾರಿಗೊಳಿಸಿ, ಮಾರಾಟ ಮಳಿಗೆಯನ್ನು ಬಂದ್ ಮಾಡಿಸಲಾಯಿತು.
ಕಡವಂತಿ ಪಿ.ಎ.ಸಿ.ಎಸ್ ನಲ್ಲಿ ಪರವಾನಿಗೆಯಲ್ಲಿ ರಸಗೊಬ್ಬರಗಳ ಸರಬರಾಜು ಮೂಲ ಪ್ರಮಾಣ ಪತ್ರಗಳನ್ನು ಸೇರಿಸದೆ ಇದ್ದ ಕಾರಣ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿ, ಪರವಾನಗಿಯನ್ನು ರದ್ದುಪಡಿಸುವುದಾಗಿ ಎಚ್ಚರಿಕೆ ನೀಡಲಾಯಿತು.ರುವ ಕೃಷಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಚಿಲ್ಲರೆ ರಸಗೊಬ್ಬರ ಮಾರಾಟ ಮಳಿಗೆಗಳ ಮೇಲೆ ಜಿಲ್ಲಾ ಜಾಗೃತ ದಳದ ಸಹಾಯಕ ಕೃಷಿ ನಿರ್ದೇಶಕರಾದ ಶ್ರೀ ಎಸ್ ವೆಂಕಟೇಶ ಚವ್ಹಾಣ್ ಹಾಗೂ ಖಾಂಡ್ಯ ಹೋಬಳಿಯ ಕೃಷಿ ಅಧಿಕಾರಿಗಳಾದ ಶ್ರೀ ಎಸ್.ವಿ.ಎಸ್ ಶರ್ಮಾರವರ ತಂಡ ದಾಳಿ ನಡೆಸಿದ್ದಾರೆ.ಚಿಕ್ಕಮಗಳೂರು ತಾಲ್ಲೂಕಿನ ಖಾಂಡ್ಯ ಹೋಬಳಿಯ ಹುಯಿಗೆರೆ ಪಿ.ಎ.ಸಿ.ಎಸ್ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ಸೊಸೈಟಿಯವರು ಅಧಿಕೃತ ಪರವಾನಗಿ ಇಲ್ಲದೆ ರಸಗೊಬ್ಬರವನ್ನು ಮಾರಾಟ ಮಾಡುತ್ತಿದ್ದು ಕಂಡು ಬಂದಿರುವ ಕಾರಣ ದಾಸ್ತಾನು ಇರಿಸಲಾದ ರಸಗೊಬ್ಬರಗಳನ್ನು ೨೧ ದಿನಗಳ ಕಾಲ ಮಾರಾಟ ಮಾಡದಂತೆ ಮಾರಾಟ ತಡೆ ನೋಟಿಸ್ ಜಾರಿಗೊಳಿಸಿ, ಮಾರಾಟ ಮಳಿಗೆಯನ್ನು ಬಂದ್ ಮಾಡಿಸಲಾಯಿತು.
ಕಡವಂತಿ ಪಿ.ಎ.ಸಿ.ಎಸ್ ನಲ್ಲಿ ಪರವಾನಿಗೆಯಲ್ಲಿ ರಸಗೊಬ್ಬರಗಳ ಸರಬರಾಜು ಮೂಲ ಪ್ರಮಾಣ ಪತ್ರಗಳನ್ನು ಸೇರಿಸದೆ ಇದ್ದ ಕಾರಣ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿ, ಪರವಾನಗಿಯನ್ನು ರದ್ದುಪಡಿಸುವುದಾಗಿ ಎಚ್ಚರಿಕೆ ನೀಡಲಾಯಿತು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g