ರಾಜ್ಯಮಟ್ಟದ ವಿಜ್ಞಾನ ಸ್ಪರ್ಧೆ : ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ
1 min readಚಿಕ್ಕಮಗಳೂರು, ಫೆಬ್ರವರಿ 28ರಂದು ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪೂರ್ವಭಾವಿಯಾಗಿ ಜಿಲ್ಲೆಯ ಆಯ್ದ ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ’ಮಕ್ಕಳಿಗಾಗಿ ವಿಜ್ಞಾನ’ ಹಾಗೂ ’ವಿಜ್ಞಾನ ಒಗಟು’ ಬಿಡಿಸುವ ಸ್ಪರ್ಧೆಗಳನ್ನು ಆನ್ಲೈನ್ ಮೂಲಕ ಆಯೋಜಿಸಲಾಗಿತ್ತು. ಚಿಕ್ಕಮಗಳೂರು ಜಿಲ್ಲೆಯಿಂದ “ಮಕ್ಕಳಿಗಾಗಿ ವಿಜ್ಞಾನ” ಕಾರ್ಯಕ್ರಮದಲ್ಲಿ ನೋಂದಾಯಿಸಿದ ಒಟ್ಟು 150 ವಿದ್ಯಾರ್ಥಿಗಳು ಹಾಗೂ “ವಿಜ್ಞಾನ ಒಗಟು ಬಿಡಿಸುವ ಸ್ಪರ್ಧೆ”ಯಲ್ಲಿ ನೋಂದಾಯಿಸಿದ ಒಟ್ಟು 150 ವಿದ್ಯಾರ್ಥಿಗಳಲ್ಲಿ ತಲಾ 4 ವಿದ್ಯಾರ್ಥಿಗಳನ್ನು ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಲಾಗಿತ್ತು.
ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಭಾರತ ಸರ್ಕಾರದ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ ಸಂಯುಕ್ತ ನೆರವಿನಿಂದ ರಾಜ್ಯಾದ್ಯಂತ ನಡೆಸಲಾದ ಈ ಸ್ಪರ್ಧೆಗಳ ಫಲಿತಾಂಶವನ್ನು ಫೆಬ್ರವರಿ 28 ರಂದು ನಡೆದ “ರಾಷ್ಟ್ರೀಯ ವಿಜ್ಞಾನ ದಿನಾಚರಣೆ” ದಿನದಂದು ಘೋಷಣೆ ಮಾಡಲಾಗಿದೆ.
“ಮಕ್ಕಳಿಗಾಗಿ ವಿಜ್ಞಾನ”ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಸುಮಯ ಟಿರ್ ಡಾಸ್, ವಿಸ್ಮಯ ಹೆಚ್.ವಿ, ಸುಪ್ರಭ್ ಪಿ ಕಾಂಡ್ರೆ, ಸಂಜನಾ ರಾವ್ ಹಾಗೂ “ಮಕ್ಕಳಿಗಾಗಿ ಒಗಟು ಬಿಡಿಸುವ”ಸ್ಪರ್ಧೆಯಲ್ಲಿ ಸುಪ್ರಭ್ ಪಿ ಕಾಂಡ್ರೆ, ಅಬ್ದುಲ್ ರಾಜಿಕ್ , ಆಯಿಷಾ ಅರಮೈನ್, ಪೂಜಾ ಎಂ.ಆರ್ ವಿಜೇತರಾಗಿದ್ದಾರೆ. ರಾಜ್ಯಮಟ್ಟದಲ್ಲಿ ಸುಪ್ರಭ್ ಪಿ ಕಾಂಡ್ರೆ, ಸ್ವಾಗತ್ ಕೆ.ಜಿ ಹಾಗೂ ಸುಚಿತ್ರ ಹೆಚ್.ಆರ್ ವಿಜೇತರಾಗಿದ್ದಾರೆ.
ಈ ಸಲುವಾಗಿ ಜಿಲ್ಲಾಮಟ್ಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಯ್ಕೆ ಆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಜೂನ್ 3ರಂದು ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಿ. ಪ್ರಭು ಅವರು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g