May 18, 2024

MALNAD TV

HEART OF COFFEE CITY

ವಿದ್ಯುತ್ ಕಂಬಕ್ಕೆ ಬೈಕ್ ಢಿಕ್ಕಿ : ಇಬ್ಬರು ಬಜರಂಗದಳ ಕಾರ್ಯಕರ್ತರ ಸಾವು

1 min read

ರಸ್ತೆ ಅಪಘಾತದಲ್ಲಿ ಇಬ್ಬರು ಯುವ ಬಜರಂಗದಳ ಕಾರ್ಯಕರ್ತರು ಮೃತಪಟ್ಟ ಘಟನೆ ಎನ್ ಆರ್ ಪುರ ತಾಲೂಕಿನಲ್ಲಿ ನಡೆದಿದೆ.

ನರಸಿಂಹರಾಜಪುರದ ಭದ್ರಾವತಿ ಜಂಕ್ಷನ್ ಸರ್ಕಲ್ ಬಳಿ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಇಬ್ಬರು ಭಜರಂಗದಳ ಕಾರ್ಯಕರ್ತರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಮೃತರನ್ನು ಉತ್ತಮ್ ಹಾಗೂ ಮನೋಜ್ ಎಂದು ಗುರುತಿಸಲಾಗಿದೆ. ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ

ಹಿಂದೂ ಸಂಘಟನೆಗಳು ನಾವು ಕಳೆದುಕೊಂಡಿದ್ದು ವ್ಯಕ್ತಿಗಳನ್ನು ಅಲ್ಲ ನರಸಿಂಹರಾಜಪುರ ಸಂಘಟನಾ ಶಕ್ತಿಗಳನ್ನು..ಉತ್ತಮ ಮತ್ತು ಮನೋಜ್ ಬೆಳೆಯುತ್ತಿದ್ದ ಸಂಘಟನಾ ವ್ಯಕ್ತಿಗಳು ಇದರಿಂದ ಹಿಂದೂ ಸಮಾಜ ತುಂಬಾ ನಷ್ಟವನ್ನು ಅನುಭವಿಸುವಂತಾಗಿದೆ, ಮುಂದೆ ಆದರೂ ಕಾರ್ಯಕರ್ತರು ವಾಹನ ಚಲಾಯಿಸುವಾಗ ಮತ್ತು ಬೇರೆ ಬೇರೆ ಸಮಯದಲ್ಲಿ ಜಾಗ್ರತೆಯಿಂದ ಇರುವುದು ಅನಿವಾರ್ಯವಾಗಿದ್ದು ಇವರ ಅಗಲಿಕೆ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನ ಅವರ ಮನೆಗಳಿಗೆ ಮತ್ತು ಸಂಘಟನೆಗಳಿಗೆ ದೇವರು ನೀಡಲಿ ಅವರ ಆತ್ಮಕ್ಕೆ ಶಾಂತಿಯನ್ನು ವಿಶ್ವ ಹಿಂದೂ ಪರಿಷತ್ ಭಜರಂಗದಳ ಕೋರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!