ವಿಜೃಂಭಣೆಯಿಂದ ನಡೆಯಿತು ಕಡೂರಿನ ಕಲ್ಲೇಶ್ವರ ಸ್ವಾಮಿ ರಥೋತ್ಸವ, 25 ಸಾವಿರ ಭಕ್ತರು ಭಾಗಿ
1 min read
ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಸಿಂಗಟಗೆರೆ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಕಲ್ಲೇಶ್ವರ ಸ್ವಾಮಿಯ ಉತ್ಸವ ಸುಮಾರು 25 ಸಾವಿರಕ್ಕೂ ಅಧಿಕ ಭಕ್ತರ ಸಮ್ಮುಖದಲ್ಲಿ ವಿಜೃಂಬಣೆಯಿಂದ ನಡೆಯಿತು. ಕಳೆದ ವರ್ಷ ನಡೆದ ಸ್ವಾಮಿಯ ತೆಪ್ಪೋತ್ಸವ ಕಾರ್ಯಕ್ರಮದಲ್ಲೂ ಸುಮಾರು 1 ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು. ಇಂದಿನ ಜಾತ್ರಾ ಮಹೋತ್ಸವದಲ್ಲಿ ಸಂಪ್ರಾದಾಯಿತಿ ವಿಧಿ-ವಿಧಾನಗಳೊಂದಿಗೆ ಕಲ್ಲೇಶ್ವರ ಸ್ವಾಮಿಯ ವಿಶೇಷ ಪೂಜಾದಿಗಳು ನಡೆದು ಸ್ವಾಮಿಯ ಉತ್ಸವ ಮೂರ್ತಿಯನ್ನ ಸಕಲ ವಾದ್ಯಗಳ ಸಮೇತ ಅಲಂಕೃತ ರಥದಲ್ಲಿ ಪ್ರತಿಷ್ಟಾಪಿಸಲಾಯಿತು. ಬಲಿಪೂಜೆಯ ಬಳಿಕ ನೆರೆದಿದ್ದ ಸುಮಾರು 25 ಸಾವಿರಕ್ಕೂ ಅಧಿಕ ಭಕ್ತರು ಜಯಘೋಷಗಳೊಂದಿಗೆ ಸ್ವಾಮಿಯ ರಥವನ್ನ ಭಕ್ತಿ-ಭಾವದಿಂದ ಎಳೆದು ಸಂಭ್ರಮಿಸಿದರು. ಹರಕೆ ಹೊತ್ತ ಭಕ್ತರು ಉರುಳು ಸೇವೆ ಮಾಡಿ ಹರಕೆ ತೀರಿಸಿದರು. ಕಳೆದ ಎರಡು ವರ್ಷಗಳಿಂದ ಕೊರೋನಾದಿಂದ ದೇವರ ರಥೋತ್ಸವ ನಡೆದಿರಲಿಲ್ಲ. ಈ ಮಧ್ಯೆಯೂ ಕಳೆದ ಡಿಸೆಂಬರ್ನಲ್ಲಿ ಕಲೇಶ್ವರ ಸ್ವಾಮಿಯ ಅಣತಿಯಂತೆ ತೆಪೆÇ್ಪೀತ್ಸವ ನಡೆದಿತ್ತು. ಈ ಬಾರಿಯೂ ರಥೋತ್ಸವಕ್ಕೆ 25 ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದು ವಿಶೇಷ. ರಥದ ಸುತ್ತಲೂ ಪಾನಕದ ಗಾಡಿಗಳನ್ನು ಪ್ರದಕ್ಷಿಣೆ ಮಾಡಿಸಿದ್ದು ಜಾತ್ರೆಯ ವಿಶೇಷವಾಗಿದ್ದು, ನೋಡುಗರ ಕಣ್ಮನ ಸೆಳೆಯಿತು. ಭಕ್ತರಿಗೆ ಅನ್ನಸಂತರ್ಪಣೆಯನ್ನೂ ಕೂಡ ಏರ್ಪಡಿಸಲಾಗಿತ್ತು. ರಥೋತ್ಸವದಲ್ಲಿ ಕಡೂರಿನ ಶಾಸಕ ಬೆಳ್ಳಿಪ್ರಕಾಶ್ ಕಲ್ಲೇಶ್ವರ ಸ್ವಾಮಿಯ ದರ್ಶನ ಪಡೆದು ಪೂಜೆ ನೆರವೇರಿಸಿದರು.
ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಗಿರೀಶ್ ಉಪ್ಪಾರ್ ಸೇರಿದಂತೆ ಸ್ಥಳಿಯ ಮುಖಂಡರು ಭಾಗಿಯಾಗಿದ್ದರು. ದೇವಾಲಯ ಸಮಿತಿಯ ಅಧ್ಯಕ್ಷ ಬಿ.ಕೆ.ನಾಗರಾಜಪ್ಪ, ಸದಸ್ಯರಾದ ರಮೇಶ್, ಎಸ್.ಕೆ.ಕೆ.ಎಂ.ಮೂರ್ತಿ, ಕುಮಾರ್, ಶಿವಣ್ಣ, ದೇವರಾಜ್ ಪಾಲ್ಗೊಂಡು ಕಲ್ಲೇಶ್ವರ ಸ್ವಾಮಿಯ ದರ್ಶನ ಪಡೆದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g