May 3, 2024

MALNAD TV

HEART OF COFFEE CITY

ಶ್ರೀ ಕೋದಂಡರಾಮಚಂದ್ರ ಸ್ವಾಮಿ ದೇಗುಲ ಜೀರ್ಣೋದ್ಧಾರಕ್ಕೆ ಚಾಲನೆ

1 min read

ಚಿಕ್ಕಮಗಳೂರು-ಪಕ್ಷ ಹಾಗೂ ಕ್ಷೇತ್ರದ ಶಾಸಕರ ಹೆಸರಿಗೆ ಚ್ಯುತಿ ಬಾರದಂತೆ ಚಿಕ್ಕಮಗಳೂರು ನಗರವನ್ನು ಸರ್ವ ವಿಧದಲ್ಲೂ ಅಭಿವೃದ್ಧಿ ಪಥದತ್ತ ಕೊಂಡೊಯ್ಯುವುದಾಗಿ ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಸಂಕಲ್ಪ ಮಾಡಿದರು.
ನಗರದ ಹೊರವಲಯದ ಹಿರೇಮಗಳೂರಿನ ಶ್ರೀ ಕೋದಂಡರಾಮಚಂದ್ರ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾರ್ಯದ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಇಲ್ಲಿನ ಶ್ರೀ ಕೋದಂಡರಾಮಚಂದ್ರ ಸ್ವಾಮಿ ದೇವಾಲಯವು ಪುರಾತನ ಇತಿಹಾಸ ಹೊಂದಿದ್ದು ಇಲ್ಲಿಗೆ ಸಾವಿರಾರು ಪ್ರವಾಸಿಗರು, ಭಕ್ತರು ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ. ಹಳೆಯ ದೇಗುಲದ ಕಾರಣ ಮೇಲ್ಚಾವಣಿ, ಹಾಗೂ ಗೋಡೆಗಳು ಶಿಥಿಲಗೊಂಡಿದ್ದು ಇದೀಗ 1.50 ಕೋಟಿ ರೂ ವೆಚ್ಚದಲ್ಲಿ ದೇವಾಲಯದ ಜೀರ್ಣೋದ್ಧಾರ ಕಾರ್ಯ ಕೈಗೊಳ್ಳಲಾಗಿದ್ದು, ಕಾಮಗಾರಿಯನ್ನು ಗುಣಮಟ್ಟದಿಂದ ನಿರ್ಮಾಣ ಮಾಡುವಂತೆ ತಿಳಿಸಿದರು.

ನಗರಸಭೆ ಚುನಾವಣೆಯಲ್ಲಿ ಪಕ್ಷ ಹಾಗೂ ಮುಖಂಡರು ನನ್ನ ಮೇಲೆ ನಂಬಿಕೆಯಿಟ್ಟು ಟಿಕೆಟ್ ನೀಡಿದ್ದು ಜನರ ಆರ್ಶಿವಾದದಿಂದ ನಗರಸಭೆ ಅಧ್ಯಕ್ಷನಾದ ಬಳಿಕ ಶ್ರೀರಾಮ ದೇವಾಲಯದ ಜೀರ್ಣೋದ್ಧಾರದ ಮೂಲಕ ಮೊದಲ ಕಾಮಗಾರಿ ಕಾರ್ಯಾರಂಭ ಮಾಡಲಾಗಿದೆ. ಕ್ಷೇತ್ರದ ಶಾಸಕರು ಹಾಗೂ ಪಕ್ಷಕ್ಕೆ ಯಾವುದೇ ಚ್ಯುತಿ ಬಾರದಂತೆ ಚಿಕ್ಕಮಗಳೂರು ನಗರವನ್ನು ಸರ್ವ ವಿಧದಲ್ಲೂ ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಾಗುವುದು ಎಂದು ಭರವಸೆ ನೀಡಿದರು.
ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಡಿ.ತಮ್ಮಯ್ಯ ಮಾತನಾಡಿ ಹಿರೇಮಗಳೂರು ಗ್ರಾಮದ ಜನರಿಗೆ ಇಂದು ಸುದಿನ. ಸುಮಾರು 1.50 ಕೋಟಿ ವೆಚ್ಚದಲ್ಲಿ ಇಲ್ಲಿನ ಶ್ರೀಕೋದಂಡರಾಮಚಂದ್ರ ಸ್ವಾಮಿ ದೇವಾಲಯ ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದ ಅವರು ಕ್ಷೇತ್ರದ ಶಾಸಕರನ್ನು ಟೀಕೆ ಮೂಲಕ ಅಪಹಾಸ್ಯ ಮಾಡುವ ಟೀಕಕಾರರು 2004 ರಲ್ಲಿ ಇದ್ದ ನಗರದ ಅಭಿವೃದ್ಧಿ ಹಾಗೂ ಇಂದಿನ ನಗರದಲ್ಲಾಗಿರುವ ಅಭಿವೃದ್ಧಿ ಕಾರ್ಯಗಳನ್ನು ಒಮ್ಮೆ ಹೋಲಿಕೆ ಮಾಡಲಿ ಎಂದರು.

ಕ್ಷೇತ್ರದ ಜನತೆ ಸಿ.ಟಿ ರವಿ ಅವರನ್ನು 4 ಬಾರಿ ಶಾಸಕರನ್ನಾಗಿ ಆರಿಸಿದ್ದು, ಅದರಂತೆ ನಗರದ ಮೂಲೆ ಮೂಲೆಗಳಲ್ಲೂ ಅಭಿವೃದ್ಧಿ ಕಾರ್ಯಗಳಾಗುತ್ತಿವೆ. ರಸ್ತೆ, ಚರಂಡಿ ಹೊರತುಪಡಿಸಿ ಹಿರೇಮಗಳೂರಿನಲ್ಲಿ ಯಾತ್ರಿ ನಿವಾಸ ನಿರ್ಮಾಣಕ್ಕೆ 2 ಕೋಟಿ ಅನುದಾನ ಬಿಡುಗಡೆಗೊಳಿಸಿದ್ದಾರೆ. ಕಲ್ಯಾಣಿ ಅಭಿವೃದ್ಧಿಗೆ 1 ಕೋಟಿ ಹೀಗೆ ನಗರದ ಸಮಗ್ರ ಏಳಿಗೆಗೆ ಶಾಸಕರು ಶ್ರಮಿಸುತ್ತಿದ್ದಾರೆ ಎಂದು ಕೊಂಡಾಡಿದರು.
ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕೆ ಬಿಜೆಪಿ ಮುಖಂಡರಾದ ಪಲ್ಲವಿ ಸಿ.ಟಿರವಿ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕೋದಂಡರಾಚಂದ್ರ ಸ್ವಾಮಿ ದೇವಾಲಯ ಪ್ರಧಾನ ಅರ್ಚಕರಾದ ಹಿರೇಮಗಳೂರು ಕಣ್ಣನ್, ನಗರಸಭೆ ಸದಸ್ಯರಾದ ವಿದ್ಯಾಬಸವರಾಜ್, ಜಗದೀಶ್, ಸಿಡಿಎ ಸದಸ್ಯ ರಾಜ್‍ಕುಮಾರ್, ನಗರಸಭೆ ಮಾಜಿ ಸದಸ್ಯ ಜಾನಯ್ಯ,ನಾಗಶ್ರೀ ತ್ಯಾಗರಾಜ್ ಸಂಜು, ಕೇಶವಮೂರ್ತಿ. ಜಗದೀಶ್‍ಸೇರಿದಂತೆ ಮತ್ತಿತರರು ಇದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!