May 3, 2024

MALNAD TV

HEART OF COFFEE CITY

ಚರಂಡಿಗಳ ಮೇಲಿನ ಸ್ಲ್ಯಾಬ್ ತೆರವುಗೊಳಿಸಿ: ವರಸಿದ್ಧಿ ವೇಣುಗೋಪಾಲ್

1 min read

 

ಚಿಕ್ಕಮಗಳೂರು: ನಗರಸಭೆ ವ್ಯಾಪ್ತಿಯ ಚರಂಡಿಗಳ ಮೇಲೆ ಅಂಗಡಿ ಮಾಲೀಕರು ಸ್ಲ್ಯಾಬ್ ಹಾಕಿ ಮುಚ್ಚಿದ್ದು, ಸ್ವಚ್ಚತೆಯ ಸಲುವಾಗಿ ಅಂಗಡಿ ಮಾಲೀಕರು ಸ್ಲ್ಯಾಬ್ ತೆರವು ಮಾಡಿಕೊಡಬೇಕು ಎಂದು ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಮನವಿ ಮಾಡಿದರು.

ನಗರದಲ್ಲಿ ಸ್ವಚ್ಛತೆಯ ಸಲುವಾಗಿ ಹಲವು ವಾರ್ಡ್‍ಗಳಲ್ಲಿ ಸಂಚರಿಸಿ ವೀಕ್ಷಣೆ ಮಾಡುವ ವೇಳೆ ಬಹುತೇಕ ಅಂಗಡಿ ಮಾಲೀಕರು ಚರಮಡಿಯ ಮೇಲೆ ಸ್ಲ್ಯಾಬ್ ಹಾಕಿ ಸಂಪೂರ್ಣ ಮುಚ್ಚಿರುವುದರಿಂದ ಚರಂಡಿಗಳನ್ನು ಸ್ವಚ್ಛತೆ ಮಾಡಲು ಆಗುತ್ತಿಲ್ಲ ಈ ಹಿನ್ನೆಲೆಯಲ್ಲಿ ತೆರವು ಮಾಡಿಕೊಡುವಂತೆ ಮನವಿ ಮಾಡಿದರು.

ಈಗಾಗಲೇ ನಗರಸಭೆ ವತಿಯಿಂದ ನಗರದ ಸ್ವಚ್ಛತೆಗೆ ಮಹತ್ವವನ್ನು ನೀಡಿ ಪ್ರತಿ ವಾರ್ಡ್‍ಗಳಲ್ಲಿ ಸ್ವಚ್ಚತಾ ಕಾರ್ಯ ನಡೆಸಲಾಗುತ್ತಿದ್ದು ಈ ವೇಳೆ ಚರಂಡಿಗಳಲ್ಲಿ ಸಿಲ್ಟ್ ಕಟ್ಟಿಕೊಂಡು ಸರಾಗಾ ನೀರು ಹರಿಯಲು ತೊಂದರೆಯಾಗಿರುವ ಜೊತೆಗೆ ಅಲ್ಲಿ ಸ್ವಚ್ಛತೆಯ ಕೊರತೆಯು ಕಂಡು ಬರುತ್ತಿದೆ ಈ ಹಿನ್ನೆಲೆ ಇಂದಿನಿಂದ ಅಂಗಡಿ ಮಾಲೀಕರು ಸ್ಲ್ಯಾಬ್ ತೆರವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!