ಪಿಎಸ್ಐ ನೇಮಕಾತಿ ಹಗರಣ ಗೃಹ ಸಚಿವರೇ ನೇರ ಹೊಣೆ: ಡಿ.ಕೆ ಶಿವಕುಮಾರ್
1 min read
ಚಿಕ್ಕಮಗಳೂರು: ಪಿ.ಎಸ್.ಐ ಅಕ್ರಮವನ್ನು ಕಾಂಗ್ರೆಸ್ ಹೊರ ತಗೆದು ಜನರ ಗಮನಕ್ಕೆ ತಂದಿದ್ದೇವೆ. ಕಾನೂನು ರೀತಿಯಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ನಮ್ಮ ನಾಯಕರು ಹೋರಾಟ ಮಾಡುತ್ತಿದ್ದಾರೆ. ಪಿಎಸ್ಐ ಅಕ್ರಮಕ್ಕೂ ಕಾಂಗ್ರೆಸ್ಗೂ ಏನು ಸಂಬಂಧ.? ರಾಜ್ಯದಲ್ಲಿ ಇರುವುದು ಬಿಜೆಪಿ ಸರ್ಕಾರ. ಇದಕ್ಕೆ ನೇರ ಹೊಣೆಗಾರರು ಗ್ರಹ ಮಂತ್ರಿಗಳೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕಮಾರ್ ಆರೋಪಿಸಿದರು
ಕೊಪ್ಪ ತಾಲೂಕಿನ ಹರಿಹರಪುರದಲ್ಲಿ ನಡೆಯುತ್ತಿರುವ ಕುಂಭಾಭಿಷೇಕಕ್ಕೆ ಆಗಮಿಸಿದ ವೇಳೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು. ಪ್ರಕರಣದಲ್ಲಿ ಯಾರೋ ಗನ್ ಮೆನ್ ಇದ್ದ, ಮಾಜಿ ಬ್ಲಾಕ್ ಅಧ್ಯಕ್ಷ, ಇನ್ನೊಬ್ಬ ಇದ್ದರು ಎಂಬುದಲ್ಲ ನಿಮ್ಮ ಸರ್ಕಾರದ ಆಡಳಿತದ ವೈಫಲ್ಯ ಹಾಗೂ ಅವ್ಯವಹಾರಗಳು ಹೊರ ಬರುತ್ತಿದೆ. ನೇಮಕಾತಿಯಲ್ಲಿ ಈ ರೀತಿ ಅವ್ಯವಹಾರ ನಡೆಸಿರುವುದು ಎಷ್ಟು ಸರಿ ಬಿಜೆಪಿ ಇದನ್ನೆ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಅಸೆಂಬ್ಲಿಯಲ್ಲಿ ಗೃಹ ಸಚಿವರು ನಾನೇನು ಮಾಡಿಲ್ಲ ಎಂದು ಹೇಳಿ ನಂತರ ಏಕೆ ಸಿಓಡಿ ತನಿಖೆಗೆ ಮುಂದಾದ್ರು ಇದಕ್ಕೆ ಗೇಹ ಸಚಿವರೇ ಜವಾಬ್ದಾರಿ ಎಂದರು.
ಒಬ್ಬ ಶಾಸಕರೇ ಅಶ್ವಥ್ ನಾರಾಯಣ್, ಯೋಗೀಶ್ವರ್ ಅನೇಕ ಶಾಸಕರು ತಮ್ಮ ಮನೆಗೆ ಹಣ ತಂದು ಕೊಟ್ಟರು ಎಂದು ಅಸೆಂಬ್ಲಿಯಲ್ಲಿ ಹೇಳಿದ್ದಾರೆ ಎಂದು ಆರೋಪಿಸಿದರು. ಭ್ರಷ್ಟಾಚಾರದ ಈ ಸರ್ಕಾರದ ಜನ್ಮದಿನ ನಡೆಯುತ್ತಿದೆ. ಯಾವ ಎಕ್ಸಾಂ ಬರಿ, ಪೆÇೀಸ್ಟಿಂಗ್ ತಗೋ, ಯಾವ ಕೆಲಸ ತಗೋ ಎಲ್ಲಾ ಕಡೆ ಭ್ರಷ್ಟಾಚಾರ
ಎಂದು ಟೀಕಿಸಿದರು. ಪ್ರತಿ ಕೆಲಸದಲ್ಲಿಯೂ ಇಷ್ಟು ಹಣ ಫಿಕ್ಸ್ ಎಂದು ಹಿಂದಿನ ಕಮಿಷನರ್ ಹೇಳಿದ್ದಾರೆ. ಸರ್ಕಾರ ಕ್ರಮ ಕೈಗೊಳ್ಳಬೇಕು.ಇಲ್ಲ ಒಪ್ಪಿಕೊಳ್ಳಬೇಕು ಎಂದು ಹೇಳಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g