ಲೇ ಔಟ್ ನಿರ್ಮಿಸಲು 2 ಲಕ್ಷ ಲಂಚ, ಎಸಿಬಿ ದಾಳಿ
1 min readಚಿಕ್ಕಮಗಳೂರು: ನಗರಾಭಿವೃದ್ಧಿ ಪ್ರಾಧಿಕಾರದ(ಸಿಡಿಎ) ಸಹಾಯಕ ಯೋಜನಾಧಿಕಾರಿ ಎಂ.ಸಿ ಶಿವಕುಮಾರ್.ಎರಡು ಲಕ್ಷ ರೂ. ಹಣ ಪಡೆಯುವ ವೇಳೆ ಎಸಿಬಿ
ಬಲೆಗೆ ಬಿದ್ದಿದ್ದಾರೆ.
ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಪಕ್ಕದಲ್ಲೇ ಹಣ ಪಡೆಯುತ್ತಿರುವ ವೇಳೆ ದಾಳಿ.ನಡೆಸಿದ ಎಸಿಬಿ ಪೊಲೀಸರು ಹಣವನ್ನು ವಶಕ್ಕೆ.ಪಡೆದು ಶಿವಕುಮಾರ್ ಬಂಧಿಸಿ ಈತನ ವಿರುದ್ಧ ಪ್ರಕರಣ ದಾಖಲಿಸಿ ಪರಿಶೀಲನೆ ನಡೆಸಿದ್ದಾರೆ.ಗೋಪಿನಾಥ್ ಎಂಬುವರು ಲೇಔಟ್ ನಿರ್ಮಿಸಲು.ಮುಂದಾಗಿದ್ದು ಬ್ರೋಕರ್ ರಮೇಶ್ ಎಂಬುವರ
ಮೂಲಕ ಶಿವಕುಮಾರ್ ಅವರನ್ನು ಸಂಪರ್ಕಿಸಿದ್ದರು. ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮತಿ ನೀಡಲು ಎಂಟುವರೆ ಲಕ್ಷ ರೂ.ನೀಡುವಂತೆ ಶಿವಕುಮಾರ್ ಬೇಡಿಕೆ ಇಟ್ಟಿದ್ದರು.
ಅದರಂತೆ ಶುಕ್ರವಾರ ಸಂಜೆ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಸಮೀಪಮುಂಗಡ ಹಣವಾಗಿ 2ಲಕ್ಷ ರೂ. ನೀಡುತ್ತಿದ್ದ ವೇಳೆಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎಸಿಬಿ ಇನ್ಸಪೆಕ್ಟರ್ಅನಿಲ್ ರಾಥೋಡ್ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಈಸಂಬಂಧ ಪ್ರಕರಣ ದಾಖಲಿಸಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g