ಸ್ಫರ್ಧಾಳುಗಳ ಕ್ರಿಯಾಶೀಲತೆ-ಚಾಕಚಕ್ಯತೆ ಆಟದಿಂದ ಥ್ರೋಬಾಲ್ ಸ್ಫರ್ಧೆ ಯಶಸ್ವಿ
1 min readಚಿಕ್ಕಮಗಳೂರು: ವಿವಿಧ ಜಿಲ್ಲೆಗಳಿಂದ ಸ್ಪರ್ಧಾಳುಗಳು ಆಗಮಿಸಿದ್ದು, ಅತ್ಯಂತ ಕ್ರಿಯಾಶೀಲತೆ ಹಾಗೂ ಚಾಕಚಕ್ಯತೆಯಿಂದ ಆಟದಲ್ಲಿ ತೊಡಗಿದ್ದು ಆಟವನ್ನು ಯಶಸ್ವಿಗೊಳಿಸಿದ್ದೀರಿ ಎಂದು ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷೆ ಸವಿತಾ ರಮೇಶ್ ಹರ್ಷ ವ್ಯಕ್ತಪಡಿಸಿದರು.
ಜಿಲ್ಲಾ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಮಹಿಳಾ ಥ್ರೋಬಾಲ್ ಸ್ಪರ್ಧೆ ವಿಜೇತ ತಂಡಗಳಿಗೆ ಸೋಮವಾರ ಬಹುಮಾನ ವಿತರಣೆ ಮಾಡಿ ಮಾತನಾಡಿ, ಥ್ರೋಬಾಲ್ ಸ್ಪರ್ಧೆಗೆ ಚಿಕ್ಕಮಗಳೂರು, ಮೂಡಿಗೆರೆ, ಹುಯಿಗೆರೆ, ಬೆಂಗಳೂರು, ಮಂಡ್ಯ, ಕೊಡಗು, ಹಾಸನ, ಬೇಲೂರು, ಶಿವಮೊಗ್ಗ, ಮಂಗಳೂರು ಜಿಲ್ಲೆಯವರಾಗಿದ್ದಾರೆ.
ಯಾವುದೇ ಕ್ರೀಡೆಗಳಲ್ಲಿ ಸೋಲು-ಗೆಲುವು ಸಾಮಾನ್ಯ, ಆದರೆ ಸ್ಪರ್ಧಾ ಮನೋಭಾವನೆಯನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು, ಮಹಿಳಾ ಸಂಘದಿಂದ ಆಯೋಜಿಸಿದ ಮೊದಲ ರಾಜ್ಯಮಟ್ಟದ ಕ್ರೀಡೆ ಇದಾಗಿದ್ದು ಲೋಪದೋಷಗಳು ಇದ್ದಲ್ಲಿ ಅವುಗಳನ್ನು ಸರಿಪಡಿಸಿಕೊಂಡು ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮವಾಗಿ ಆಯೋಜಿಸಲಾಗುವುದು ಎಂದು ತಿಳಿಸಿದರು.
ಸ್ಪರ್ಧಾ ಆಯೋಜನೆಗೆ ಸಂಘದ ಸದಸ್ಯರು ಉತ್ತಮ ಸಹಕಾರ ನೀಡಿದ್ದು ಎಲ್ಲರಿಗೂ ಅಭಿನಂದನೆಗಳನ್ನು ಸಮರ್ಪಿಸಿದರು. ಕ್ರೀಡಾಕೂಟದಲ್ಲಿ ಪ್ರಥಮ ಬಹುಮಾನ ಪಡೆದ ಮಂಗಳೂರಿನ ಸುಳ್ಯಾ ತಂಡಕ್ಕೆ 15 ಸಾವಿರ ರೂ ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಪಿ, ದ್ವಿತೀಯ ಬಹುಮಾನ ಪಡೆದ ಬೆಂಗಳೂರು ತಂಡಕ್ಕೆ 10 ಸಾವಿರ ನಗದು ಮತ್ತು ಪಾರಿತೋಷಕ, ತೃತೀಯ ಬಹುಮಾನ ಪಡೆದ ಮೂಡಿಗೆರೆಯ ಹಳೇಕೋಟೆ ತಂಡಕ್ಕೆ 5 ಸಾವಿರು ನಗದು ಹಾಗೂ ಪಾರಿತೋಷಕ, ಇನ್ನು ನಾಲ್ಕನೇ ಸ್ಥಾನ ಪಡೆದ ಹಾಸನ ತಂಡಕ್ಕೆ ಸಮಾಧಾನಕಾರ ನೀಡಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿ ತಂಡಕ್ಕೂ ಪ್ರಮಾಣಪತ್ರವನ್ನು ಬಹುಮಾನ ಆಯೋಜಕರ ಮೂಲಕ ನೀಡಲಾಯಿತು.
ಜಿಲ್ಲಾ ಒಕ್ಕಲಿಗ ಸಂಘದ ಅಧ್ಯಕ್ಷ ಟಿ.ರಾಜಶೇಖರ್, ಕಾರ್ಯದರ್ಶಿ ಎಂ.ಸಿ.ಪ್ರಕಾಶ್. ಉಪಾಧ್ಯಕ್ಷ ಲಕ್ಷ್ಮಣಗೌಡ ಮಹಿಳಾ ಸಂಘದ ಉಪಾಧ್ಯಕ್ಷೆ ಸ್ಮಿತಾಸುರೇಶ್, ಕಾರ್ಯದರ್ಶಿ ಜಾಹ್ನವಿಜಯರಾಂ, ಸಹಕಾರ್ಯದರ್ಶಿ ಶಿಲ್ಪಾವಿಜಯ್, ನಿರ್ದೇಶಕರುಗಳಾದ ಕೃಷ್ಣವೇಣಿರಮೇಶ್, ಚಂಪಸುದರ್ಶನ್, ನಾಗರತ್ನಜಗದೀಶ್, ವೇದಶ್ರೀಸತೀಶ್, ಶಾಲಿನಿಸುಬ್ರಹ್ಮಣ್ಯ, ಅಂಜನಾರವಿ, ಭಾಗ್ಯಮಹೇಂದ್ರ, ಸುಭದ್ರನಾರಾಯಣ್, ಅನ್ವಿತಚರಣ್, ಮಂಜುಳಮಂಜುನಾಥ್ಗೌಡ, ಸಂದ್ಯಾನಾಗೇಶ್ ಇದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g