ಮಂತ್ರಿಮಂಡಲದಲ್ಲಿ ಮಲೆನಾಡು ಭಾಗವನ್ನ ಕಡೆಗಣಿಸಲಾಗಿದೆ
1 min readಶೃಂಗೇರಿ: ಮಂತ್ರಿಮಂಡಲದಲ್ಲಿ ಮಲೆನಾಡು ಭಾಗವನ್ನ ಕಡೆಗಣಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಗೆ ಪ್ರಾತಿನಿಧ್ಯ ಕೊಟ್ಟಿಲ್ಲ ಎಂದು ಶೃಂಗೇರಿ ಶಾಸಕ ರಾಜೇಗೌಡ ಪ್ರತಿಕ್ರಿಯಿಸಿದ್ದಾರೆ.
ಬಸವರಾಜ್ ಬೊಮ್ಮಾಯಿ ಅವರ ಮುಖ್ಯಮಂತ್ರಿ ಆಯ್ಕೆಗೆ ಅಭಿನಂದನೆಗಳು. ಮಂತ್ರಿ ಮಂಡಲದಲ್ಲಿ ನಮ್ಮ ಜಿಲ್ಲೆಗೆ ಮಂತ್ರಿ ಮಂಡಲ ನೀಡಿಲ್ಲ. ಮೂಡಿಗೆಗೆ ಭಾಗದ ಶಾಸಕ ಕುಮಾರಸ್ವಾಮಿ ಇದ್ರು. ಚಿಕ್ಕಮಗಳೂರು ಶಾಸಕ ಸಿಟಿ ರವಿ ಅವರು ಇದ್ರು. ಆದ್ರೆ ಯಾರಿಗೂ ಮಂತ್ರಿ ಮಂಡಲ ಕೊಟ್ಟಿಲ್ಲ. ಬಯಲು ಸೀಮೆ ಭಾಗದಲ್ಲೂ ಅವಕಾಶ ನೀಡಿಲ್ಲ. ಚಿಕ್ಕಮಗಳೂರನ್ನ ಮಂತ್ರಿಮಂಡಲದಿಂದ ಕಡೆಗಣಿಸಲಾಗಿದೆ. ಪರಕೀಯರು ನಮ್ಮ ಜಿಲ್ಲೆಯ ಉಸ್ತುವಾರಿಯಾಗಿರೋದು ಕಾಣುತ್ತಿದೆ. ಮಲೆನಾಡು ಭಾಗದ ಪ್ರಾತಿನಿಧ್ಯರಕೊಟ್ಟಿಲ್ಲ. ನಮ್ಮನ್ನು ಎಲ್ಲದಕ್ಕೂ ಬಳಕೆ ಮಾಡಿಕೊಳ್ಳುತ್ತಿದೆ, ಆದ್ರೆ ಸರ್ಕಾರ ನಮ್ಮ ಜಿಲ್ಲೆಯನ್ನ ಕಡೆಗಣಿಸಲಾಗಿದೆ ಎಂದು ಶೃಂಗೇರಿ ಶಾಸಕ ರಾಜೇಗೌಡ ಪ್ರತಿಕ್ರಿಯಿಸಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g