ಕೆರೆ ಡ್ಯಾಮೇಜ್, ವಾಟರ್ ಫ್ಲೋ
1 min readಭಾರೀ ಮಳೆಯಿಂದ ಕೆರೆ ಕೋಡಿ ಹೊಡೆದು ಕೆರೆ ನೀರು ಲೇಔಟ್ಗೆ ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ದೋಗಿಹಳ್ಳಿಯಲ್ಲಿ ನಡೆದಿದೆ. ಕಳೆದ ನಾಲ್ಕೈದು ದಿನದಿಂದ ಕಡೂರು ತಾಲೂಕಿನಲ್ಲಿ ರಾತ್ರಿ ವೇಳೆ ಭಾರೀ ಮಳೆಯಾಗುತ್ತಿದೆ. ಕಳೆದ ರಾತ್ರಿಯೂ ಸುಮಾರು ಎರಡು ಗಂಟೆಗಳ ಕಾಲ ಧಾರಾಕಾರ ಮಳೆ ಸುರಿದದೆ. ಭಾರೀ ಸುರಿದ ಪರಿಣಾಮ ಕಡೂರು ತಾಲೂಕಿನ ದೋಗಿಹಳ್ಳಿಯಲ್ಲಿ ಗಾಳಿಹಳ್ಳಿ ಕೆರೆ ಕೋಡಿ ಹೊಡೆದು ಲೇಔಟ್ಗೆ ನೀರು ನುಗ್ಗಿದೆ. ಲೇಔಟ್ನ ರಸ್ತೆಗಳಲ್ಲಿ ಸುಮಾರು ಒಂದು ಅಡಿ ಎತ್ತರದಲ್ಲಿ ನೀರು ಹರಿದ ಪರಿಣಾಮ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಜನ ರಸ್ತೆಗಳಲ್ಲಿ ಓಡಾಡಲು ಪರದಾಟ ನಡೆಸಿದ್ದಾರೆ. ಕೆರೆ ಕೋಡಿ ಹೊಡೆದು ಅಪಾರ ಪ್ರಮಾಣದ ನೀರು ಹರಿದ ಪರಿಣಾಮ ರೈತರ ಬೆಳೆಗಳಿಗೂ ನೀರು ನುಗ್ಗಿದ್ದು ರೈತರ ಬೆಳೆ ಕೂಡ ಹಾಳಾಗಿದೆ. ಇನ್ನು ಮಳೆ ನೀರು ಭಾರೀ ಪ್ರಮಾಣದಲ್ಲಿ ನುಗ್ಗಿದ ಪರಿಣಾಮ ಕೂಲಿ ಕಾರ್ಮಿಕರು ನಿರ್ಮಿಸಿಕೊಂಡಿದ್ದ ಶೆಡ್ಗಳಿಗೂ ನೀರು ನುಗ್ಗಿದ್ದು ಶೆಡ್ಗಳು ಕೂಡ ಸಂಪೂರ್ಣ ಜಲಾವೃತಗೊಂಡಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g