ಕೆರೆಯಲ್ಲಿ ಈಜಲು ಹೋದ ಬಾಲಕ ನೀರು ಪಾಲು
1 min readಕೆರೆಯಲ್ಲಿ ಈಜಲು ಹೋಗಿದ್ದ ಆರನೇ ತರಗತಿ ವಿದ್ಯಾರ್ಥಿ ನೀರಲ್ಲಿ ಮುಳುಗಿ ಸಾವನ್ನಪ್ಪಿರೋ ಘಟನೆ ಚಿಕ್ಕಮಗಳೂರು ತಾಲೂಕಿನ ಚಂದ್ರಕಟ್ಟೆ ಗ್ರಾಮದಲ್ಲಿ ನಡೆದಿದೆ. ಮೃತನನ್ನ 12 ವರ್ಷದ ಸುಹಾಸ್ ಎಂದು ಗುರುತಿಸಲಾಗಿದೆ.
ಮೃತ ಬಾಲಕ ಶಾಲೆಗೆ ಹೋಗುತ್ತೇನೆ ಎಂದು ಬ್ಯಾಗ್ ತೆಗೆದುಕೊಂಡು ಹೋಗಿದ್ದನು. ಶಾಲೆಗೆ ಹೋಗುತ್ತೇನೆ ಎಂದು ಹೊರಟ ಬಾಲಕ ಕೆಂಪನಹಳ್ಳಿಯ ಮತ್ತಿಬ್ಬರು ಹುಡುಗರ ಜೊತೆ ಕೆರೆಗೆ ಈಜಲು ಹೋಗಿದ್ದನು. ಕಳೆದ ಹದಿನೈದು ದಿನದಿಂದ ಚಿಕ್ಕಮಗಳೂರು ಭಾರೀ ಮಳೆ ಸುರಿಯುತ್ತಿದೆ. ಭಾರೀ ಮಳೆಯಿಂದ ಕೆರೆಯೂ ತುಂಬಿತ್ತು. ಈಜಲು ಹೋದ ಬಾಲಕ ಕೆರೆ ತುಂಬಿದ್ದರಿಂದ ನೀರಿನಲ್ಲಿ ಈಜಲಾಗದೆ ಸಾವನ್ನಪ್ಪಿದ್ದಾನೆ. ಅವನ ಜೊತೆ ಇದ್ದ ಹುಡುಗರ ಆತನನ್ನ ಎಳೆದುಕೊಳ್ಳುವ ಪ್ರಯತ್ನ ನಡೆಸಿದರು ಸಾಧ್ಯವಾಗಿಲ್ಲ. ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಮೃತ ಬಾಲಕ ಮೂಲತಃ ಚಿಕ್ಕಮಗಳೂರು ತಾಲೂಕಿನ ಲಕ್ಯಾ ನಿವಾಸಿ. ಪೋಷಕರು ಲಕ್ಯಾದಲ್ಲೇ ಇದ್ದಾರೆ. ಈತನನ್ನ ಓದಲು ಎಂದು ತಾತನ ಮನೆಯಲ್ಲಿ ಬಿಟ್ಟಿದ್ದರು. ಇಂದು ಈ ದುರ್ಘಟನೆ ಸಂಭವಿಸಿದೆ. ವಿಷಯ ತಿಳಿದ ಕೂಡಲೇ ಚಿಕ್ಕಮಗಳೂರಿನ ಬಸವನಹಳ್ಳಿ ಠಾಣಾ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ನೀರಿಗಿಳಿದು ಮೃತದೇಹವನ್ನ ಮೇಲಕ್ಕೆ ಎತ್ತಿದ್ದಾರೆ. ಕೆರೆ ದಡದ ಬಳಿ ಮೃತ ಬಾಲಕನ ಪೋಷಕರು ಆಕ್ರಂದನ ಮುಗಿಲುಮುಟ್ಟಿತ್ತು. ಬಸವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g