ಕಂಡವರ ಮಕ್ಕಳನ್ನು ನಮ್ಮ ಮಕ್ಕಳು ಎನ್ನಬಾರದು : ತಮ್ಮಯ್ಯ ವಿರುದ್ಧ ಸಿ.ಟಿ ರವಿ ಕಿಡಿ
1 min readಕಂಡವರ ಮಕ್ಕಳನ್ನು ನಮ್ಮ ಮಕ್ಕಳು ಎಂದು ಹೇಳಿಕೊಳ್ಳಬಹುದು ಆದರೆ DNA ಟೆಸ್ಟ್ ನಲ್ಲಿ ಯಾರು ಯಾರ ಮಕ್ಕಳು ಎಂದು ಪ್ರೂವ್ ಆಗುತ್ತದೆ ಎಂದು ಮಾಜಿ ಶಾಸಕ ಸಿ.ಟಿ ರವಿ ಪರೋಕ್ಷವಾಗಿ ಶಾಸಕ ತಮ್ಮಯ್ಯ ಶಂಕುಸ್ಥಾಪನೆ, ಗುದ್ದಲಿ ಪೂಜೆ ನೆರವೇರಿಸುತ್ತಿರುವ ಕೆಲಸಗಳ ಬಗ್ಗೆ ಟಾಂಗ್ ಕೊಟ್ಟಿದ್ದಾರೆ.
ಕಳೆದ ಬಿಜೆಪಿ ಸರ್ಕಾರದಿಂದ ತಂದ ಅನುದಾನದಲ್ಲಿ ನಡೆಯುತ್ತಿರುವ ಕೆಲಸಗಳಿಗೆ ನಿತ್ಯ ಶಂಕುಸ್ಥಾಪನೆ, ಉದ್ಘಾಟನೆ ಕಾಂಗ್ರೆಸ್ ಮಾಡುತ್ತಿದೆ ಎಂಬುದನ್ನು ಮಾಜಿ ಶಾಸಕ ಸಿ.ಟಿ ರವಿ ವಿಭಿನ್ನ ಹೇಳಿಕೆ ಮೂಲಕ ಚಾಟಿ ಬೀಸಿದ್ದಾರೆ.
ಕಂಡವರಿಗೆ ಹುಟ್ಟಿದ ಮಕ್ಕಳನ್ನು ನಮ್ಮ ಮಕ್ಕಳು ಎಂದು ಮಾತಿಗೆ ಹೇಳಬಹುದು ಆದರೆ DNA ಟೆಸ್ಟ್ ಮಾಡಿಸಿದಾಗಲೇ ಗೊತ್ತಾಗುವುದು ಎನ್ನುವ ಮೂಲಕ ಶಾಸಕ ಎಚ್.ಡಿ ತಮ್ಮಯ್ಯ ಉದ್ಘಾಟನೆ ಮಾಡುತ್ತಿರುವ ಕಾಮಗಾರಿಗಳೆಲ್ಲ ನಾನೇ ಅನುದಾನ ತಂದಿದ್ದು ಎಂಬ ಅರ್ಥದಲ್ಲಿ ಹೇಳಿದರು. ಕಾಂಗ್ರೆಸ್ ನವರು ಯೋಗ್ಯತೆಗೆ ಒಂದು ರೂಪಾಯಿ ಅನುದಾನ ತಂದಿಲ್ಲ ನಡೆಯುತ್ತಿದ್ದ ಬಸವನಹಳ್ಳಿ ಕೆರೆ ಕಾಮಗಾರಿ ನಿಲ್ಲಿಸಿದ್ದೆ ಇವರ ಸಾಧನೆ ಎಂದು ಸಿ.ಟಿ ರವಿ ಟೀಕಾಸ್ತ್ರ ಪ್ರಯೋಗಿಸಿದ್ದಾರೆ. ಕೆ.ಪಿ.ಸಿ.ಸಿ ವಕ್ತಾರ ಎಚ್.ಎಚ್ ದೇವರಾಜ್ ಆರೋಪಕ್ಕೆ ತಿರುಗೇಟು ನೀಡಿದ ರವಿ ಪೂರ್ವಾಗ್ರಹ ಪೀಡಿತರಂತೆ ಮಾತನಾಡುವ, ವಲ್ಲದ ಗಂಡನಿಗೆ ಮೊಸರಿನಲ್ಲಿ ಕಲ್ಲು ಎಂಬಂತೆ, ಕಣ್ಣಿದ್ದು ಕುರುಡರಂತೆ ವರ್ತಿಸುವ ಬದಲು ನಾನು ತಂದಿರುವ ಅನುದಾನದಲ್ಲಿ ನಡೆಯುತ್ತಿರುವ ಕೆಲಸಗಳನ್ನು ಬಂದು ಒಮ್ಮೆ ನೋಡಲಿ ಎಂದು ಸವಾಲು ಹಾಕಿದರು. ಮೆಡಿಕಲ್ ಕಾಲೇಜ್ ಕಾಮಗಾರಿ ವೀಕ್ಷಿಸಿ ಮಾತನಾಡಿದ ಸಿ.ಟಿ ರವಿ 638 ಕೋಟಿಯಲ್ಲಿ ಕೆಲಸ ನಡೆಯುತ್ತಿದ್ದು ರಾಜ್ಯ ಸರ್ಕಾರ ತನ್ನ ಪಾಲಿನ ಹಣ ಬಿಡುಗಡೆಗೊಳಿಸಲು ಪರ್ಸೆಂಟೇಜ್ ಸೆಟಲ್ಮೆಂಟ್ ಗಾಗಿ ಕಾಯುತ್ತಿದ್ದು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಇದರಲ್ಲೂ ದುಡ್ಡು ಹೊಡೆಯುವುದು ಸರಿಯಲ್ಲ ಈ ಕನಸಿನ ಯೋಜನೆ ನೆನೆಗುದಿಗೆ ಬಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g