ಚಲಿಸುತ್ತಿದ್ದ ಬಸ್ಸ್ನಲ್ಲಿ ಪ್ರತ್ಯಕ್ಷನಾದ ಕಾಳಿಂಗ
1 min readಕೊಪ್ಪ : ಚಲಿಸುತ್ತಿದ್ದ ಬಸ್ಸಿನಲ್ಲಿ ಅಡಗಿ ಕುಳಿತಿದ್ದ ಕಾಳಿಂಗ ಸರ್ಪವನ್ನು ಕಂಡು ಬಸ್ಸನ್ನು ಚಲಾಯಿಸುತ್ತಿದ್ದ ಚಾಲಕ ಗಮನಿಸಿ, ತನ್ನ ಪ್ರಾಣಕ್ಕೆ ಸಂಚಕಾರ ತರುತ್ತಿದ್ದ ಕಾಳಿಂಗ ಸರ್ಪದಿಂದ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಕೊಪ್ಪ ತಾಲೂಕಿನ ಜಯಪುರದಲ್ಲಿ ನಡೆದಿದೆ.
ಎಂದಿನಂತೆ ಶೃಂಗೇರಿ ಮಾರ್ಗವಾಗಿ ಬೆಂಗಳೂರಿಗೆ ಹೋಗುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ಸನ್ನು ಚಲಾಯಿಸುವ ವೇಳೆ ಮಾರ್ಗ ಮಧ್ಯೆ ಕಾಳಿಂಗ ಸರ್ಪ ಪ್ರತ್ಯಕ್ಷವಾಗಿದೆ. ಮಳೆಗಾಲದ ಸಮಯವಾದ್ದರಿಂದ ಶೀತ ರಕ್ತದ ಬೃಹತ್ ಕಾಳಿಂಗ ಸರ್ಪ ಬೆಚ್ಚನೆಯ ಸ್ಥಳ ಅರಸಿ ಬಸ್ಸಿನೊಳಗೆ ಬಂದಿದೆ. ಜಯಪುರದಿಂದ ಹೊರಡಬೇಕಾದ ಬಸ್ಸನ್ನು ಚಲಾಯಿಸಲು ಚಾಲಕನು ಎಕ್ಸಿಲೇಟರ್ ಪೆಡಲನ್ನು ಒತ್ತಿದಾಗ ಮರೆಯಲಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪ ಅನಿರೀಕ್ಷಿತವಾಗಿ ಬಸ್ಸಿನಲ್ಲಿ ತನ್ನ ಎಡೆ ಬಿಚ್ಚಿ ಪ್ರತ್ಯಕ್ಷನಾಗಿದ್ದಾನೆ. ಬೃಹತ್ ಗಾತ್ರ ಕಾಳಿಂಗ ಸರ್ಪವನ್ನು ಕಂಡ ಚಾಲಕ ಬದುಕಿದೆ ಬಡ ಜೀವವೆ ಎಂದು ಜೀವಾಪಾಯದಿಂದ ಪಾರಾಗಿದ್ದಾರೆ. ಏಕಾಏಕಿ ಬಸ್ಸಿನಲ್ಲಿ ಕಾಳಿಂಗ ಸರ್ಪವನ್ನು ಕಂಡು ಬಸ್ಸಿನಲ್ಲಿದ್ದ ಪ್ರಯಾಣಿಕರು ತಬ್ಬಿಬ್ಬುಗೊಂಡಿದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g