ಚಿಕ್ಕಮಗಳೂರು ನಗರದ ಸಮೀಪವೇ ಕಾಣಿಸಿಕೊಂಡ ಕಾಡಾನೆ ಬೀಟಮ್ಮ & ಟೀಂ
1 min readಚಿಕ್ಕಮಗಳೂರು: ಬೇಲೂರಿನ ಕಾಡಾನೆ ಬೀಟಮ್ಮ ಅಂಡ್ ಟೀಂ ಇನ್ನೇನು ಚಿಕ್ಕಮಗಳೂರು ನಗರದ ಸಮೀಪಕ್ಕೆ ದಾವಿಸುತ್ತಿದ್ದು, ಕದ್ರಿಮಿದ್ರಿ , ಮೂಗ್ತಿಹಳ್ಳಿ ಸುತ್ತಮುತ್ತಲಿನ ಹತ್ತಾರು ಸರ್ಕಾರಿ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ನಾಲ್ಕು ದಿನಗಳ ಹಿಂದೆ ಬೇಲೂರು ಮಾರ್ಗವಾಗಿ ಗಡಿಭಾಗ ಕೆ.ಆರ್ ಪೇಟೆ ಪ್ರವೇಶಿಸಿದ್ದ ಬೃಹತ್ ಕಾಡಾನೆ ಬೀಟಮ್ಮ ಗುಂಪು ಇದೀಗ ಚಿಕ್ಕಮಗಳೂರು ನಗರದ ಅತ್ಯಂತ ಸಮೀಪವೇ ಕಾಣಿಸಿಕೊಂಡಿವೆ. ಬರೋಬ್ಬರಿ 30 ಕ್ಕೂ ಹೆಚ್ಚು ಕಾಡಾನೆಗಳ ತಂಡ ಇದೀಗ ನಗರದ ಹತ್ತಿರ ಕದ್ರಿಮಿದ್ರಿ ಅರಣ್ಯ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿವೆ. ಬೀಟಮ್ಮ ಆನೆ ಜೊತೆ ಭೀಮ ಟಸ್ಕರ್ ಸೇರಿದಂತೆ ಮರಿಗಳು ಕೂಡಿ ಇಡೀ ತಂಡ ಜೊತೆಯಲ್ಲಿ ಸಂಚರಿಸುತ್ತಿರುವುದು ಸಾರ್ವಜನಿಕ ರಿಗೆ ಗೋಚರಿಸಿದೆ. ಮೊನ್ನೆಯಿಂದ ಪಟಾಕಿ ಸಿಡಿಸಿ ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆಯಲ್ಲಿ ಇಲಾಖೆ ತೊಡಗಿತ್ತು, ಆದರೆ ರಾತ್ರೋರಾತ್ರಿ ಕದ್ರಿಮಿದ್ರಿ ಕಡೆಗೆ ಬೀಟಮ್ಮ ಟೀಂ ಬಂದಿದೆ. ಕಾಡಾನೆಗಳು ಓಡಾಡುತ್ತಿರುವ ಹಿನ್ನೆಲೆಯಲ್ಲಿ ಹತ್ತಾರು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕದ್ರಿಮಿದ್ರಿಯ ಸರ್ಕಾರಿ ಶಾಲೆ, ರಾಂಪುರ ಶಾಲೆ ಸಾಯಿ ಎಂಜಲ್ಸ್, ಸೆಂಟ್ ಮೇರಿಸ್ ಕಾಲೇಜು ಅಲ್ಲದೇ ಇನ್ಫೆಂಟ್ ಜೀಸಸ್, ಮೂಗ್ತಿಹಳ್ಳಿ ದಂಬದಹಳ್ಳಿ ಸೇರಿದಂತೆ ಹಲವು ಶಾಲೆ ರಜೆ ಘೋಷಣೆ ಮಾಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ ರವೀಶ್ ಮಲ್ನಾಡ್ ಟಿ.ವಿ ಗೆ ಮಾಹಿತಿ ನೀಡಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g