ಬಿಜೆಪಿ ಮತ್ತು ಜೆಡಿಎಸ್ ಕಾಂಗ್ರೆಸ್ ಮಧ್ಯೆ ಕೋಲ್ಡ್ ವಾರ್
1 min readಚಿಕ್ಕಮಗಳೂರು : ಜಿಲ್ಲಾಧಿಕಾರಿ ಕಚೇರಿ ಮುಂದೆ ಕೂತು ಏಕಾಂಗಿಯಾಗಿ ಧರಣಿ ಮಾಡ್ತಿರೋ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ. ಸರ್… ಬನ್ನಿ ಸರ್ ಒಳಗೆ ಕೂತು ಮಾತನಾಡೋಣ ಅಂತಿರೋ ಡಿಸಿ, ಎಡಿಸಿ. ಒಳಗೆ ಏನ್ ಮಾತನಾಡೋದು. ಇಲ್ಲೇ ಮಾತನಾಡಿ ಎಲ್ಲರಿಗೂ ಗೊತ್ತಾಗಲಿ ಅಂತಿರೋ ಭೋಜೇಗೌಡ. ಅಧಿಕಾರಿಗಳು-ರಾಜಕಾರಣಿಗಳ ಈ ಹಗ್ಗಜಗ್ಗಾಟಕ್ಕೆ ವೇದಿಕೆಯಾಗಿದ್ದು ಚಿಕ್ಕಮಗಳೂರು ಜಿಲ್ಲಾಕಾರಿ ಕಚೇರಿ. ಕಾರಣವಾಗಿದ್ದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ್. ಎಸ್…. ಅಂಗಾರ ಜಿಲ್ಲಾ ಮಂತ್ರಿಯಾದ ಮೇಲೆ ನನ್ನನ್ನ ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ ಅನ್ನೋದು ಭೋಜೇಗೌಡರ ಆರೋಪ. ಅಂಗಾರ ಎಂಟು ಬಾರಿ ಶಾಸಕರಾಗಿದ್ದಾರೆ. ಪೆÇ್ರೀಟೋಕಾಲ್ ಅಂದ್ರೆ ಏನೆಂದು ನಾವು ಹೇಳಿಕೊಡಬೇಕಾ ಎಂದು ಪ್ರಶ್ನಿಸಿದ್ದಾರೆ. ಸರ್ಕಾರ ಜನರ ದುಡ್ಡಲ್ಲಿ ಕೈಗೊಬ್ಬ-ಕಾಲಿಗೊಬ್ಬ ಪಿಎ ಕೊಟ್ಟಿದ್ದಾರೆ. ಪ್ರವಾಸದ ಕಾರ್ಯಕ್ರಮದ ಕಾಫಿ ಹಾಕಲು ಏನ್ ಕಷ್ಟ ಕಿಡಿ ಕಾರಿದ್ದಾರೆ. ಅಧಿಕಾರಿಗಳ ಸಭೆಯಲ್ಲಿ ಸಂಸದರು, ಶಾಸಕರು ಇರುತ್ತಾರೆ. ನನಗೆ ಮಾಹಿತಿ ಇರಲ್ಲ. ಜನ ಕೇಳುತ್ತಾರೆ. ಜನ ಏನು ತಿಳಿದುಕೊಳ್ಳಬೇಕು ಎಂದು ಅಸಮಾಧಾನಗೊಂಡಿದ್ದಾರೆ. ಇದು ನನ್ನ ನೋಡೆಲ್ ಕ್ಷೇತ್ರ. ಅವರಿವರನ್ನ ಕರೆಯಬಾರದು ನಿಮ್ಮ ಗುಂಪುಗಾರಿಕೆಯನ್ನ ಮನೆಯಲ್ಲಿ-ಪಕ್ಷದ ಕಚೇರಿಯಲ್ಲಿ ಇಟ್ಟುಕೊಳ್ಳಿ ಎಂದು ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವ ಅಂಗಾರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ, https://www.youtube.com/channel/UCmBISI2sn_0gamb44UFj-vQ
Credits:
Music : latest 2020 6 different no copyright news background music, royalty free (black mart)
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g