May 8, 2024

MALNAD TV

HEART OF COFFEE CITY

ಸುಳ್ಳು ಆರೋಪವೇ ನನ್ನ ಎರಡು ಸೋಲಿಗೆ ಕಾರಣವಾಯ್ತು; ಮಾಜಿ ಶಾಸಕ ಡಿ.ಎನ್.ಜೀವರಾಜ್ ಅಳಲು..!

1 min read

ಚಿಕ್ಕಮಗಳೂರು: ಸುಳ್ಳು ಆರೋಪವೇ ನನ್ನ ಎರಡು ಸೋಲಿಗೆ ಕಾರಣವಾಯ್ತು ಎಂದು ಕೋರ್ಟ್ ತೀರ್ಪಿನ ಬಳಿಕ ಶೃಂಗೇರಿ ಕ್ಷೇತ್ರದ ಮಾಜಿ ಶಾಸಕ ಡಿ.ಎನ್.ಜೀವರಾಜ್ ಅಳಲು ತೋಡಿಕೊಂಡರು.ಚಿಕ್ಕಮಗಳೂರು ನಗರದ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನನ್ನ ಮೇಲೆ ಅತ್ಯಾಚಾರ ಆರೋಪ ಪ್ರಕರಣ ಹಿನ್ನಲೆ ನನ್ನ ವಿರುದ್ಧ ಮಾಡಿದ್ದ ಆರೋಪ ಸುಳ್ಳು ಎಂದು ಎನ್.ಆರ್.ಪುರ, ಜೆ.ಎಂ.ಎಫ್.ಸಿ. ನ್ಯಾಯಾಲಯ ತೀರ್ಪು ನೀಡಿದೆ.2013 ರ ನವೆಂಬರ್ 8ರಂದು ಯುವತಿ ಅರಣ್ಯ ಮತ್ತು ಮನು ಎಂಬುವವರು ಶಾಸಕ ಡಿ.ಎನ್.ಜೀವರಾಜ್ ವಿರುದ್ಧ ದೂರು ನೀಡಿದ್ದರು. ನಂತರ 5 ಕೋಟಿ ಹಣಕ್ಕೆ ಬೇಡಿಕೆ ಇಟ್ಟು ಕೊನೆಗೆ 22 ಲಕ್ಷ ನೀಡುವಂತೆ ಬೇಡಿಕೆಯಿಟ್ಟಿದ್ದರಂತೆ. ನಂತರ ಜೀವರಾಜ್ ಅವರು ಯುವತಿ ಅರಣ್ಯ, ಮನು ವಿರುದ್ಧ ಮಾನ ಹಾನಿಯ ಬೆದರಿಕೆ ಒಡ್ಡಿ, ಹಣಕ್ಕಾಗಿ ಪೀಡಿಸಿ, ಕೊಲೆ ಬೆದರಿಕೆ ಹಾಕಿದ್ದಾರೆಂದು ಪ್ರತಿ ದೂರನ್ನ ಸಹ ನೀಡಿದ್ದರು. ಅಷ್ಟೇ ಅಲ್ಲದೆ ಆಶೀಶ್ ಕುಮಾರ್ ಹಾಗೂ ನಾಗರಾಜ್ ಎಂಬುವರಿಂದಲೂ ಪ್ರತಿ ದೂರು ದಾಖಲಿಸಲಾಗಿತ್ತು.ನಂತರ ಈ ಪ್ರಕರಣವನ್ನ ಅಂದಿನ ಕಾಂಗ್ರೆಸ್ ಸರ್ಕಾರ ಸಿಐಡಿಗೆ ವಹಿಸಿತ್ತು, ಜೀವರಾಜ್ ವಿರುದ್ಧದ ಆರೋಪಕ್ಕೆ ಯಾವುದೇ ದಾಖಲೆ ಇಲ್ಲ, ಇದು ಸುಳ್ಳು ಆರೋಪ ಎಂದು ಸಿಐಡಿ ಬಿ ರಿಪೋರ್ಟ್ ಕೂಡ ತಿಳಿಸಿತ್ತು. ಐದು ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ಎನ್.ಆರ್.ಪುರ ಕೋರ್ಟಿನಿಂದ ತೀರ್ಪು ಹೊರಬೀದಿದ್ದೆ ಮಾಜಿ ಸಚಿವ ಜೀವರಾಜ್ ಅವರ ಮೇಲೆ ಮಾಡಿದ ಆರೋಪ ಸುಳ್ಳು ಎಂದು ನ್ಯಾಯಾಲಯ ಹೇಳಿ ಯುವತಿ ಅರಣ್ಯ ಎಂಬುವರಿಗೆ 2 ವರ್ಷ ಜೈಲು 5000 ದಂಡವನ್ನು ಮತ್ತು ಮನು ಎಂಬುವರಿಗೆ 3 ವರ್ಷ ಜೈಲು ಶಿಕ್ಷೆ ಮತ್ತು 19 ಸಾವಿರ ದಂಡವನ್ನ ವಿಧಿಸಿದೆ. ಈ ಪ್ರಕರಣ ಹಿನ್ನೆಲೆ ನಟರಿಗೆ ಶಿಕ್ಷೆಯಾಗಿದೆ, ಪ್ರೊಡ್ಯೂಸರ್, ಡೈರಕ್ಟರ್’ಗೆ ಭಗವಂತನ ಕೋರ್ಟಿನಲ್ಲಿ ಶಿಕ್ಷೆಯಾಗಲಿದೆ ಎಂದು ಹೆಸರೇಳದೆ ಹಾಲಿ ಶಾಸಕ ರಾಜೇಗೌಡ ವಿರುದ್ಧ ಜೀವರಾಜ್ ವಾಗ್ದಾಳಿ ನಡೆಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!