ಕಾಫಿನಾಡಲ್ಲಿ ಕೊರೋನಾ ಹೆಚ್ಚಳ : ರಸ್ತೆಗಿಳಿದ ಅಧಿಕಾರಿಗಳು : ನಿಯಮ ಪಾಲಿಸದವರಿಗೆ ಕ್ಲಾಸ್
1 min readಚಿಕ್ಕಮಗಳೂರು : ಕಾಫಿನಾಡಲ್ಲಿ ಕೊರೋನಾ ಸೋಂಕು ಹೆಚ್ಚಳವಾದ ಹಿನ್ನೆಲೆಯಲ್ಲಿ ರಸ್ತೆಗಿಳಿದ ಡಿ.ಸಿ. ರಮೇಶ್, ಎ.ಸ್ಪಿ. ಅಕ್ಷಯ್ ರವರು ಬೆಳ್ಳಂಬೆಳಗ್ಗೆಯೇ ಮಾರ್ಕೆಟ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೊರೋನಾ ೨ನೇ ಅಲೆಯ ಭೀಕರತೆಯಿಂದ ಸಮಾಜ ತತ್ತರಿಸುತ್ತಿದ್ದರು, ಮಾರ್ಕೇಟ್ ನಲ್ಲಿ ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳಿಗೆ ವರ್ತಕರು ಹಾಗೂ ಗ್ರಾಹಕರು ಸೇರಿದಂತೆ ಕೆಲವು ಜನರು ಸಾಮಾಜಿಕ ಅಂತರ ಕಾಪಾಡದ ಹಾಗೂ ಮಾಸ್ಕ್ ಧರಿಸದವರುನ್ನು ಕಂಡು ಕ್ಷಣ ಕಾಲ ಧಂಗಾದರು. ನಂತರ ಸಾಮಾಜಿಕ ಅಂತರ ಕಾಪಾಡದ ಹಾಗೂ ಮಾಸ್ಕ್ ಧರಿಸಿದವರಿಗೆ ಎಚ್ಚರಿಕೆ ನೀಡಿದರು. ಇಡೀ ಮಾರ್ಕೆಟ್ ಸುತ್ತು ಹಾಕಿದ ಜಿಲ್ಲಾಡಳಿತ, ವ್ಯಾಪಾರ-ವಹಿವಾಟಿಗೆ ಸ್ಥಳ ನಿಗದಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರಲ್ಲದೆ, ಗುಂಪು ಸೇರದಂತೆ ನೋಡಿಕೊಳ್ಳುವಂತೆ ಹಾಗೂ ಕಡ್ಡಾಯವಾಗಿ ಸಾಮಾಜಿಕ ಅಂತರಕ್ಕೆ ಸ್ಥಳ ಗುರುತು ಹಾಕಿ ವ್ಯಾಪಾರ ಮಾಡುವಂತೆ ಸೂಚನೆ ನೀಡಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g