ಅಕ್ರಮ ಭೂಮಂಜೂರು, ಎಸಿಯಿಂದ ತಹಶೀಲ್ದಾರ್ ವಿರುದ್ಧ ಎಫ್.ಐ.ಆರ್, ತಹಶೀಲ್ದಾರ್ ಅರೆಸ್ಟ್
1 min readಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಮಾಜಿ ತಹಶೀಲ್ದಾರ್ ಹಾಗೂ ಹಾಲಿ ಕಾರವಾರದ ಸೀಬರ್ಡ್ ನೌಕನೆಲೆ ವಿಶೇಷ ಭೂಸ್ವಾದೀನ ಅಧಿಕಾರಿ ಉಮೇಶ್ ಅವರನ್ನ ಕಡೂರು ಪೊಲೀಸರು ಬಂಧಿಸಿದ್ದಾರೆ. ಉಮೇಶ್, ಕಡೂರಿನಲ್ಲಿ ತಹಶೀಲ್ದಾರ್ ಆಗಿದ್ದ ವೇಳೆ ಸರ್ಕಾರದ ಕಾನೂನುಗಳನ್ನ ಗಾಳಿಗೆ ತೂರಿ ಸರ್ಕಾರಿ ಭೂಮಿಯನ್ನ ಪರಭಾರೆ ಮಾಡಿಕೊಟ್ಟ ಆರೋಪ ಇವರ ಮೇಲಿತ್ತು. ಸರ್ಕಾರಿ ಭೂಮಿಯ ಅಕ್ರಮ ದಾಖಲೆ ಮಾಡಿಕೊಟ್ಟ ಹಿನ್ನೆಲೆ ಅಸಿಸ್ಟೆಂಟ್ ಕಮಿಷನರ್ ಕಾಂತರಾಜು ತಹಶೀಲ್ದಾರ್ ಉಮೇಶ್ ವಿರುದ್ಧ ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಕಡೂರು ಪೊಲೀಸರು ಬೆಂಗಳೂರಿನಲ್ಲಿ ಉಮೇಶ್ರನ್ನ ಬಂಧಿಸಿದ್ದಾರೆ. ಉಮೇಶ್ ಕಡೂರು ತಹಶೀಲ್ದಾರ್ ಆಗಿದ್ದ ವೇಳೆ, ತಾಲೂಕಿನ ಉಳಿಗನಾರು ಗ್ರಾಮದಲ್ಲಿ ಸರ್ಕಾರದ ನಿಯಮಗಳನ್ನ ಗಾಳಿಗೆ ತೂರಿ ಹನುಮಯ್ಯ, ರತ್ನಮ್ಮ, ನಾರಾಯಣಪ್ಪ ಹಾಗೂ ಗೌರಮ್ಮ ಎಂಬುವರಿಗೆ 5 ಎಕರೆ 4 ಗುಂಟೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ದಾಖಲೆ ಮಾಡಿಕೊಟ್ಟಿದ್ದರು. ಈ ಹಿನ್ನೆಲೆ ಉಪವಿಭಾಗಾಧಿಕಾರಿ ಕಾಂತರಾಜ್ ಕಡೂರು ಠಾಣೆಯಲ್ಲಿ ತಹಶೀಲ್ದಾರ್ ಉಮೇಶ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ತಹಶೀಲ್ದಾರ್ ಉಮೇಶ್ ಸೇರಿದಂತೆ ಮೂವರು ಅಧಿಕಾರಿಗಳ ವಿರುದ್ಧವೂ ಪ್ರಕರಣ ದಾಖಲಿಸಿದ್ದರು. ತಹಶೀಲ್ದಾರ್ ಉಮೇಶ್ ಜೊತೆ, ಶಿರಸ್ತೆದಾರ್ ನಂಜುಂಡಯ್ಯ ಹಾಗೂ ರೆವೆನ್ಯೂ ಇನ್ಸ್ಪೆಕ್ಟರ್ ಬಸವರಾಜಪ್ಪ ವಿರುದ್ಧವು ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಕಡೂರು ಪೊಲೀಸರು ಆರೋಪಿಗಳ ಬಂಧನಕ್ಕೆ ಮುಂದಾಗಿದ್ದಾರೆ. ಕಡೂರು ತಾಲೂಕಿನಲ್ಲಿ ಸುಮಾರು ಮೂರೂವರೆ ಸಾವಿರ ಎಕರೆಯಷ್ಟು ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ ಎಂಬ ಮಾತುಗಳಿವೆ. ಹಾಗಾಗಿ ಈಗಾಗಲೇ ಸರ್ಕಾರ ಒಂಬತ್ತು ಜನ ವಿಶೇಷ ತಹಶೀಲ್ದಾರರನ್ನು ನೇಮಕ ಮಾಡಿ ಪ್ರಕರಣದ ಸಂಪೂರ್ಣ ತನಿಖೆಗೆ ಮುಂದಾಗಿದೆ. ಈ ಮಧ್ಯೆ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಎಮ್ಮೆದೊಡ್ಡಿ ಗ್ರಾಮದಲ್ಲಿ ರಿಸರ್ವ್ ಫಾರೆಸ್ಟ್ ಎಂದು ಮೀಸಲಿರುವ ಮೀಸಲು ಅರಣ್ಯವನ್ನ ಎಂಟು ಜನರಿಗೆ ದಾಖಲೆ ಮಾಡಿಕೊಟ್ಟ ಆರೋಪ ಅವರ ಮೇಲೆ ಇದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g