ನಾನು ಕೂಡ ಎಂ.ಎಲ್.ಸಿ. ಟಿಕೆಟ್ ಆಕಾಂಕ್ಷಿ ನಿರಂಜನ್
1 min readಚಿಕ್ಕಮಗಳೂರು ಜಿಲ್ಲೆಯಲ್ಲಿ ಎಂ.ಎಲ್.ಸಿ. ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ಸಿಗರು ಮನಸ್ಸು ಮಾಡದ ಹಿನ್ನೆಲೆ ಕಾಂಗ್ರೆಸ್ ಆಪರೇಷನ್ ಕಮಲದ ಮೂಲಕ ಬಿಜೆಪಿ ಟಿಕೆಟ್ ಆಕಾಂಕ್ಷಿಯನ್ನ ಕಾಂಗ್ರೆಸ್ ಚಿಹ್ನೆಯಡಿ ನಿಲ್ಲಿಸಲು ತೆರೆಮರೆಯ ಕಸರತ್ತು ನಡೆಸುತ್ತಿದೆ.
ಸದ್ಯ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ನಿರಂಜನ್ರನ್ನ ಕಾಂಗ್ರೆಸ್ ಸೆಳೆಯಲು ಮುಂದಾಗಿದ್ದು, ದೂರವಾಣಿ ಮೂಲಕ ಒಮ್ಮೆ ಕರೆ ಮಾಡಿ ಬನ್ನಿ ಎಂದು ಕರೆದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೇ ನೀಡಿರೋ ನಿರಂಜನ್ ಒಂದು ಬಾರಿ ಫೋನ್ ಮಾಡಿ ಕರೆದಿರುವುದು ಸತ್ಯ. ಆದರೆ, ನಾನು ಬರಲ್ಲ ಎಂದು ಹೇಳಿದ್ದೇನೆ. 25 ವರ್ಷದಿಂದ ಬಿಜೆಪಿಗೆ ದುಡಿದಿದ್ದೇವೆ. ಈಗ ಹೋಗಲು ಮನಸ್ಸು ಒಪ್ಪುವುದಿಲ್ಲ ಎಂದರು. ಈಗಾಗಲೇ ಟಿಕೆಟ್ ನಮಗೆ ಸಿಗುವುದು ಖಚಿತವೆನಿಸಿದೆ. ಕಳೆದ ಬಾರಿ ಹಾಲಿ ಎಂ.ಎಲ್.ಸಿ. ಪ್ರಾಣೇಶ್ ಕೂಡ ನನಗೆ ಬ್ಯಾಕ್ ಪೇನ್ ಇದೆ. ನಾನು ಎಲೆಕ್ಷನ್ ಮಾಡುವುದಿಲ್ಲ. ನೀವು ರೆಡಿ ಮಾಡಿಕೊಳ್ಳಿ ಎಂದು ಅವರ ಮನೆಗೆ ಹೋಗಿದ್ದಾಗ ನನಗೆ ಹೇಳಿದ್ದರು. ಹಾಗಾಗಿ, ನಾನು ಕಳೆದ ಎರಡು ವರ್ಷಗಳಿಂದ ಎಲ್ಲಾ ರೀತಿಯಲ್ಲೂ ಸಿದ್ಧತೆ ನಡೆಸಿದ್ದೇನೆ. ನಾನು ಪ್ರಬಲವಾಗಿ ಟಿಕೆಟ್ ಕೇಳುತ್ತಿದ್ದೇನೆ. ನಮ್ಮ ಮನೆಗೆ ಯಡಿಯೂರಪ್ಪ ಬಂದಾಗಲೂ ನಾನು ಕೆ.ಜೆ.ಪಿ ಹೋಗಬಹುದಿತ್ತು. ಆದರೆ, ಪಕ್ಷ ಮುಖ್ಯ. ದೊಡ್ಡವರು ಎಲ್ಲಿಗೆ ಹೋದ್ರು ನಡೆಯುತ್ತೆ. ನಾವು ಆರ್.ಎಸ್.ಎಸ್.ನಲ್ಲಿ ಶಿಸ್ತಿನಿಂದ ಬೆಳೆದ ವ್ಯಕ್ತಿ ಎಂದು ನಾನು ಹೋಗಲಿಲ್ಲ. ಅಂದು ಕೂಡ ಇವರಿಗೆ ದುಡಿದಿದ್ದೇವೆ. ರಾಜಕಾರಣ ನಿಂತ ನೀರಲ್ಲ. ಹರಿಯುವ ನೀರು. ಟಿಕೆಟ್ ಸಿಗಲಿದೆ ಎಂಬ ನಂಬಿಕೆ ಇದೆ. ಕಾಂಗ್ರೆಸ್ಸಿಗರು ಕರೆದಿರುವುದು ನಿಜ. ಟಿಕೆಟ್ ಸಿಗದಿದ್ದರೆ ಏನು ಮಾಡುತ್ತೇನೆಂದು ಈಗ ಹೇಳಲ್ಲ. ನಾನು ನಿಂತ ನೀರಾಗುವುದಿಲ್ಲ, ಹರಿಯುವ ನೀರಾಗುತ್ತೇನೆ ಎಂದಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g