ಸತ್ಯ ಹೇಳಿದ್ದೇನೆ, ಮತ್ತೆ ಸಿದ್ದು ಕಾಲೆಳೆದ ಸಿ.ಟಿ.ರವಿ…!
1 min read
ನಾನು ಸಿದ್ದರಾಮಯ್ಯನವರಿಗೆ ಖುಷಿಯಾಗುವ ಸಂಗತಿಯನ್ನೇ ಹೇಳಿದ್ದೇನೆ. ಅವರಿಗೆ ಸಿದ್ರಾಮುಲ್ಲಾಖಾನ್ ಎಂದು ಹೆಸರಿಟ್ಟವರು ಮಡಿಕೇರಿ-ಮೈಸೂರಿನ ಜನ. ಅದು ಅಸಂಸಧೀಯ ಪದವೂ ಅಲ್ಲ. ಬೈಗುಳವೂ ಅಲ್ಲ ಎಂದು ಕ್ಲಾರಿಫೈ ಮಾಡುವಾಗಲು ಶಾಸಕ ಸಿ.ಟಿ. ರವಿ ಮಾಜಿ ಸಿಎಂ ಸಿದ್ದು ವಿರುದ್ಧ ವ್ಯಂಗ್ಯವಾಡಿದ್ದಾರೆ. ದತ್ತಜಯಂತಿಯ ಅಂಗವಾಗಿ ದತ್ತಮಾಲಾಧಾರಣೆ ಬಳಿಕ ಮಾತನಾಡಿದ ಅವರು, ಸಿದ್ರಾಮುಲ್ಲಾಖಾನ್ ಹೇಳಿಕೆಯನ್ನ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರ
ಸಿ.ಟಿ. ರವಿ ಮನೆಗೆ ಮುತ್ತಿಗೆ ಎಚ್ಚರಿಕೆಗೆ ಪ್ರತಿಕ್ರಿಯೆ ನೀಡಿದರು. ಅವರಿಗೆ ಪ್ರಿಯವಾಗಿರೋದು ಟಿಪ್ಪು ಟೋಪಿ. ಅದನ್ನೇ ಹೇಳಿದ್ದೇನೆ.ದೂರದ ಸಂಗತಿಯೋ ಅಥವ ದುಃಖದ ಸಂಗತಿಯನ್ನೋ ಹೇಳಿಲ್ಲ. ಟೋಪಿ ಅವರಿಗೆ ಆನಂದ ಕೊಡುವ ಸಂಗತಿ. ಅದನ್ನೇ ಹೇಳಿದ್ದೇನೆ. ಅವರಿಗೆ ಖುಷಿ ಆಗದಿರುವುದು ಯಾವುದು. ಕೇಸರಿ ಪೇಟ-ಕುಂಕುಮ. ಅದನ್ನ ಹೇಳಿದ್ರೆ ಬೇಜಾರು ಆಗ್ತಿತ್ತೋ ಏನೋ. ಆದ್ರೆ, ನಾನು ಹೇಗಿದ್ದೀನಿ ಹಾಗೇ ಹೇಳಿದ್ದಾರೆ ಅಂತ ಖುಷಿ ಪಡುತ್ತಾರೆ ಎಂದು ಮತ್ತೆ ಕಾಲೆಳೆದು, ಸೋಶಿಯಲ್ ಮೀಡಿಯಾದಲ್ಲಿ ಕೊಟ್ಟಿರುವ ಬಿರುದಿಗಳನ್ನ ನೋಡಬೇಕು ಎಂದರು. ಇನ್ನು ಕಾಂಗ್ರೆಸ್ ಕಾರ್ಯಕರ್ತರ ಮುತ್ತಿಗೆಗೆ,
ಸದ್ಭಾವನೆಯಿಂದ ಬಂದರೆ ಅತಿಥಿಗಳೆಂದು ಸತ್ಕಾರ. ದುರ್ಬಾವನೆಯಿಂದ ಬಂದರೆ ಅದೇ ರೀತಿ ಪ್ರತಿಕ್ರಿಯೆ ಎಂದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g