May 16, 2024

MALNAD TV

HEART OF COFFEE CITY

ಬಂದೋಬಸ್ತ್ ವೇಳೆ ಉದ್ರಿಕ್ತರನ್ನ ಗುಂಪನ್ನ ಚದುರಿಸೋದು ಹೇಗೆ, ಪೊಲೀಸರಿಂದ ಅಣುಕು ಪ್ರದರ್ಶನ 

1 min read

 

 

ಚಿಕ್ಕಮಗಳೂರು.: ಪ್ರಮುಖ ಬಂದೋ ಬಸ್ತ್ ಸಂದರ್ಭಗಳಲ್ಲಿ ಉದ್ರಿಕ್ತಗೊಳ್ಳುವ ಗುಂಪನ್ನು ನಿಯಂತ್ರಿಸುವ ಬಗ್ಗೆ ಜಿಲ್ಲಾ ಡಿ.ಎ.ಆರ್. ಕ್ರೀಡಾಂಗಣದಲ್ಲಿ ಪೆÇಲೀಸರಿಂದ ಅಣಕು ಕಾರ್ಯಾಚರಣೆ ನಡೆಸಿದರು. ನಗರದ ರಾಮನಹಳ್ಳಿಯ ಸಶಸ್ತ್ರ ಮೀಸಲು ಪಡೆ ಕವಾಯತು ಮೈದಾನದಲ್ಲಿ ನಡೆದ ಪ್ರದರ್ಶನದಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು. ತರಬೇತಿಯಲ್ಲಿರುವ ಮಹಿಳಾ ಹಾಗೂ ಪುರುಷ ಪೊಲೀಸ್ ಅಭ್ಯರ್ಥಿಗಳನ್ನು ಬಳಸಿಕೊಂಡು, ಕೃತಕವಾಗಿ ಕಲ್ಲುಗಳನ್ನು ತಯಾರಿಸಿ, ಪ್ರತಿಭಟನೆ, ಕಲ್ಲು ತೂರಾಟದಂತಹ ಅಣಕು ದೃಶ್ಯವನ್ನ ಮರು ಸೃಷ್ಠಿಸಲಾಯಿತು. ಉದ್ರಿಕ್ತರನ್ನು ಚದುರಿಸಿ ಪರಿಸ್ಥಿತಿ ನಿಯಂತ್ರಿಸಲು ಸ್ಥಳದಲ್ಲಿರುವ ಪೊಲೀಸ್ ಅಧಿಕಾರಿ ಆದೇಶಿಸುವುದು, ತಕ್ಷಣ ಸಿಬ್ಬಂದಿಗಳು ಕಾರ್ಯಪ್ರವೃತ್ತರಾಗುವ ದೃಶ್ಯಗಳು ನೈಜ ಘಟನೆಯನ್ನ ಮೀರಿಸುವಂತಿದ್ದವು. ಅಶ್ರುವಾಯು ಪ್ರಯೋಗ, ಲಾಠಿ ಪ್ರಹಾರ, ಗಾಯಾಳುಗಳನ್ನು ಆಸ್ಪತ್ರೆಗೆ ಕೊಂಡೊಯ್ಯುವುದು, ಉದ್ರಿಕ್ತರನ್ನು ವಶಕ್ಕೆ ಪಡೆಯುವಂತಹ ದೃಶ್ಯಗಳು ಗಮನ ಸೆಳೆದವು. ಈ ವೇಳೆ ಸ್ಥಳದಲ್ಲಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಮಾಬ್ ಆಪರೇಷನ್ ಇಲಾಖೆಯ ಡ್ರಿಲ್‍ನ ಒಂದು ಭಾಗವಾಗಿದೆ ಎಂದರು. ಪ್ರಮುಖ ಬಂದೋಬಸ್ತ್‍ಗಳು ಬರುವ ಸಂದರ್ಭದಲ್ಲಿ ಉದ್ರಿಕ್ತಗೊಂಡವರನ್ನು ಯಾವ ರೀತಿ ಚದುರಿಸುವುದು, ಪರಿಸ್ಥಿತಿ ನಿಯಂತ್ರಿಸುವುದು, ಅಕ್ರಮ ಕೂಟ, ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದಾಗ ಯಾವ ರೀತಿ ಪ್ರತಿಕ್ರಿಯಿಸಬೇಕು ಎನ್ನುವ ಬಗ್ಗೆ ತರಬೇತಿ ನೀಡಲಾಗಿದೆ ಎಂದರು. ಡಿಸೆಂಬರ್ 6-7-8ರಂದು ನಡೆಯುವ ದತ್ತ ಜಯಂತಿ ಬಗ್ಗೆ ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ. ನಮ್ಮ ಜಿಲ್ಲೆ ಸೇರಿದಂತೆ ಹೊರಗಿನಿಂದ ಸಿಬ್ಬಂದಿಗಳನ್ನು ಕರೆಸಲಾಗುತ್ತಿದೆ. ಮೂರು ಮಂದಿ ಎಸ್ಪಿ, 1500 ಕ್ಕೂ ಹೆಚ್ಚು ಸಿಬ್ಬಂದಿಗಳು, ಕೆಎಸ್‍ಆರ್‍ಪಿ, ಡಿಎಆರ್ ಇನ್ನಿತರೆ ಪ್ಲಟೂನ್‍ಗಳನ್ನೂ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!