May 2, 2024

MALNAD TV

HEART OF COFFEE CITY

ಮಳೆಯ ಆಬ್ಬರಕ್ಕೆ ಹೊನ್ನಾಳ ಚೆಕ್ ಪೋಸ್ಟ್ ರಸ್ತೆ ಕುಸಿತ : ಬದಲಿ ಮಾರ್ಗಕ್ಕೆ ಒತ್ತಾಯ

1 min read

ಚಿಕ್ಕಮಗಳೂರು : ಕಳೆದ ಎರಡು ದಿನಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುರಿದ ಮಳೆಗೆ ಜಿಲ್ಲೆಯಲ್ಲಿ ಅಪಾರ ಹಾನಿ ಉಂಟುಮಾಡಿದೆ. ಚಿಕ್ಕಮಗಳೂರು ತಾಲೂಕಿ  ಮಲ್ಲಂದೂರು ಗ್ರಾಮಗಳಾದ  ಹೊನ್ನಾಳ.ಮುತ್ತೋಡಿ. ಶಿರವಾಸೆ ಸಂಪರ್ಕ ರಸ್ತೆ ಭೂಕುಸಿತದಿಂದ ಸಂಪರ್ಕ ಕಡಿತಗೊಂಡಿದೆ.. ಈ ಮಾರ್ಗದಲ್ಲಿ ಸಂಪರ್ಕ ಮಾಡಲು ಪರಿಯಾರ ರಸ್ತೆ ನಿರ್ಮಾಣ ಮಾಡುವಂತೆ ಜಿಲ್ಲಾಧಿಕಾರಿಗಳ ಮುಖಾಂತರ. ಜಿಲ್ಲಾ ಉಸ್ತುವಾರಿ ಸಚಿವ ಎಸ್ ಅಂಗಾರ ಅವರಿಗೆ. ಶಿರವಾಸೆ, ಗಾಳಿಗುಡ್ಡೆ, ಕೊಂಕಳಮನೆ. ಸಿದ್ದಾಪುರ ಗ್ರಾಮಸ್ಥರು ಮನವಿ ಸಲ್ಲಿದರು.

ಕಳೆದ ಜುಲೈ 15 ರಂದು ಸುರಿದ ಭಾರಿ ಮಳೆಯಿಂದ ಚಿಕ್ಕಮಗಳೂರು ಜಿಲ್ಲೆಯ ಶಿರವಾಸೆಗೆ ಸಂಪರ್ಕ ಕಲ್ಪಿಸಿಸು ರಸ್ತೆ  ಹೊನ್ನಾಳ ಚೆಕ್ ಪೋಸ್ಟ್ ರಸ್ತೆ ಕುಸಿದೆ. ಬಸ್ ಸಂಚಾರ ಹಾಗೂ ಸರಕು ಸಾಗಣಿಕೆಗೆ ಸಾಧ್ಯವಾಗುತ್ತಿಲ್ಲ.. ಈ ಸಂಚಾರಕ್ಕೆ ಬದಲಿ ಮಾರ್ಗ ಕಲ್ಪಿಸುವಂತೆ ಗ್ರಾಸ್ಥರು ಮನವಿ ಮಾಡಿದ್ದಾರೆ.

ಇದೇ ವೇಳೆ ಮಾತನಾಡಿದ. ವಾಸು ಪೂಜಾರಿ ಕಳೆದ ಎರಡು ದಿನಗಳ ಹಿಂದೆ ಬಾರಿ ಮಳೆಯಿಂದ ಹೊನ್ನಾಳಿ  ಚಕ್ ಪೋಸ್ಟ್ ನಿಂದ ಮಲ್ಲಂದೂರು ರಸ್ತೆ ಭೂ ಕುಸಿತ ಉಂಟಾಗಿದೆ. ನಾವು ಜಿಲ್ಲಾಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಸಲ್ಲಿಸುತ್ತಿದ್ದೇವೆ,  ರಸ್ತೆ ಕುಸಿತದಿಂದ ವಾಹನ ಸಂಚಾರ ಮಾಡಲು ಸಾಧ್ಯ ವಾಗುತ್ತಿಲ್ಲ. ಪ್ರವಾಸಿಗರು ಸಂಚಾರ ಸ್ಥಗಿತವಾಗಿದ.. ಇದಕ್ಕೆ ಬದಲಿ ಮಾರ್ಗ ನಿರ್ಮಾಣ ಮಾಡುವಂತೆ ಮನವಿ ಮಾಡಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!