ನಾಳೆ ನಗರಕ್ಕೆ ಗೃಹ ಸಚಿವ ಜಿ. ಪರಮೇಶ್ವರ್ ಆಗಮನ: ವಕೀಲರ ಪೊಲೀಸರ ಸಂಘರ್ಷ ಸ್ಥಳಗಳಿಗೆ ಭೇಟಿ
1 min readಚಿಕ್ಕಮಗಳೂರು: ನಾಳೆ ಗೃಹ ಸಚಿವ ಜಿ. ಪರಮೇಶ್ವರ್ ನಗರಕ್ಕೆ ಆಗಮಿಸುತ್ತಿದ್ದು ಪೊಲೀಸ್ ಹಾಗೂ ವಕೀಲರ ಸಂಘರ್ಷ ಮತ್ತು ದತ್ತಜಯಂತಿ ಕುರಿತು ಕಾವೇರಿದ ಸರಣಿ ಚರ್ಚೆಗಳು ನಡೆಯಲಿವೆ.
ರಾಜ್ಯ ಸರ್ಕಾರ ಅಸ್ಥಿತ್ವಕ್ಕೆ ಬಂದು ಏಳು ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ನಗರಕ್ಕೆ ಆಗಮಿಸುತ್ತಿದ್ದಾರೆ. ಪೊಲೀಸ್ ಹಾಗೂ ವಕೀಲರ ನಡುವಿನ ಸಂಘರ್ಷದ ವೇಳೆ ಪೊಲೀಸರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನಡುವೆ ಸಿಐಡಿ ತಂಡ ಇನ್ನೂ ಚಿಕ್ಕಮಗಳೂರಲ್ಲಿ ಬೀಡುಬಿಟ್ಟು ತನಿಖೆ ನಡೆಯುತ್ತಿರುವುದರ ಮಧ್ಯೆ ನಾಳಿನ ಗೃಹ ಸಚಿವರ ಭೇಟಿ ಹಲವು ಕುತೂಹಲಕ್ಕೆ ಕಾರಣವಾಗಿದೆ. ಪ್ರಕರಣ ನ್ಯಾಯಾಲಯದಲ್ಲಿದ್ದು ಪೊಲೀಸ್ ಹಾಗೂ ವಕೀಲರ ಸಂಘರ್ಷ ಸದ್ಯ ತಣ್ಣಗಾದಂತೆ ಕಂಡು ಬಂದರೂ ಘಟನೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಸ್ಥಳೀಯ ಅಧಿಕಾರಿಗಳಿಂದ ಪರಮೇಶ್ವರ್ ಪಡೆಯಲಿದ್ದಾರೆ. ವಕೀಲ ಪ್ರೀತಂ ಮೇಲೆ ಹಲ್ಲೆ ನಡೆದಿದ್ದ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಗೂ ಗೃಹ ಸಚಿವರು ಭೇಟಿ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಏತನ್ಮಧ್ಯೆ ದತ್ತಜಯಂತಿ ಸಹಾ ನಡೆಯುತ್ತಿರುವ ವೇಳೆಯಲ್ಲೇ ನಗರಕ್ಕೆ ಆಗಮಿಸುತ್ತಿರುವ ಡಾ. ಜಿ ಪರಮೇಶ್ವರ್ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಕಾನೂನು ಸುವ್ಯವಸ್ಥೆ ಕುರಿತು ಸಹಾ ಸಭೆ ನಡೆಸಲಿದ್ದಾರೆ, ಇದಕ್ಕಾಗಿ ಜಿಲ್ಲಾ ಪೊಲೀಸರು ಸನ್ನದ್ದರಾಗಿದ್ದು ಜಿಲ್ಲಾ ಪೊಲೀಸ್ ಕೇಂದ್ರ ಕಚೇರಿಯಲ್ಲಿ ಸಕಲ ಸಿದ್ದತೆ ನಡೆಸಲಾಗುತ್ತಿದೆ. ಪಶ್ಚಿಮ ವಲಯ ಐಜಿಪಿ ಚಂದ್ರಗುಪ್ತ ಗೃಹ ಸಚಿವರಿಗೆ ವಕೀಲರ ಸಂಘರ್ಷ ದತ್ತಜಯಂತಿ ಕುರಿತು ಇಂಚಿಂಚೂ ಮಾಹಿತಿ ಗೃಹ ಸಚಿವರಿಗೆ ನೀಡಲಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g