ಬಯಲುಸೀಮೆ ಭಾಗದಲ್ಲಿ ಭಾರಿ ಮಳೆ.. ಜನಜೀವನ ಅಸ್ತವ್ಯಸ್ತ
1 min readಚಿಕ್ಕಮಗಳೂರು: ಕಾಫಿನಾಡಿನ ಬಯಲುಸೀಮೆ ಭಾಗದಲ್ಲಿ ಭಾರಿ ಮಳೆಯಾಗಿದ್ದು, ಮಹಾಮಳೆಗೆ ಮನೆಯ ಹೆಂಚುಗಳು ತರಗೆಲೆಯಂತೆ ಹಾರಿ ಹೋಗಿ ಜನ ಜೀವನ ಅಲ್ಲೋಲ-ಕಲ್ಲೋಲವಾಗಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ದೇವನೂರು, ಕುರುಬರಹಳ್ಳಿ ಸುತ್ತಮುತ್ತ ವರುಣ ಆರ್ಭಟ ಜೋರಾಗಿದ್ದು, ಮಹಾ ಮಳೆಗೆ ಮನೆಯ ಹೆಂಚುಗಳು ತರಗೆಲೆಯಂತೆ ಹಾರಿ ಹೋಗಿವೆ. ಬೃಹತ್ ತೆಂಗಿನ ಮರಗಳು ಬುಡಸಮೇತ ಮುರಿದು ಬಿದ್ದವೆ. ಹೌದು ನಿನ್ನೆ ಸಂಜೆ ಸುರಿದ ಮಳೆಗೆ ಕಡೂರು ತಾಲೂಕು ತಲ್ಲಣಗೊಂಡಿದೆ. 20ಕ್ಕೂ ಹೆಚ್ಚು ಮನೆಯ ಹೆಂಚುಗಳು ಹಾರಿ ಹೋಗಿದ್ದು, 15ಕ್ಕೂ ಹೆಚ್ಚು ತೆಂಗಿನ ಮರಗಳು ಬುಡಸಮೇತ ಮುರಿದು ಬಿದ್ದಿವೆ. ಅಷ್ಟೇ ಅಲ್ಲದೆ ರಾಷ್ಟ್ರೀಯ ಹೆದ್ದಾರಿ 206 ರ ರಸ್ತೆ ಕೂಡ ಸಂಪೂರ್ಣ ಜಲಾವೃತವಾಗಿತ್ತು. ಈ ಹಿನ್ನಲೆ ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕದ ಅಂಗಡಿಗಳಿಗೆ ನೀರು ನುಗ್ಗಿದ್ದು ಭಾರೀ ಗಾಳಿ-ಮಳೆಗೆ ಕಡೂರು ತಾಲೂಕು ಕಂಗಾಲಾಗಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g