ಕಾಫಿನಾಡಲ್ಲಿ ಲವ್ ಜಿಹಾದ್ ಆರೋಪ, ಬಿಸಿ-ಬಿಸಿ ಚರ್ಚೆ ಮಧ್ಯೆ ಅವನೇ ನನ್ನ ಅಳಿಯ ಅಂದ್ಲು ಹುಡುಗಿ ತಾಯಿ…!
1 min read
ಕಾಫಿನಾಡಲ್ಲಿ ಲವ್ ಜಿಹಾದ್ ಆರೋಪ, ಬಿಸಿ-ಬಿಸಿ ಚರ್ಚೆ ಮಧ್ಯೆ ಅವನೇ ನನ್ನ ಅಳಿಯ ಅಂದ್ಲು ಹುಡುಗಿ ತಾಯಿ…!
ಚಿಕ್ಕಮಗಳೂರು. ಅನ್ಯಧರ್ಮಿಯ ಯುವಕ-ಯುವತಿ ಪ್ರೀತಿಸಿ ಮದುವೆಯಾಗಲು ಸಬ್ ರಿಜಿಸ್ಟರ್ ಕಚೇರಿಗೆ ಬಂದಾಗ ಹಿಂದೂಪರ ಸಂಘಟನೆ ಕಾರ್ಯಕರ್ತರು ಹಲ್ಲೆ ಮಾಡಿರುವ ಆರೋಪದಡಿ ನಾಲ್ವರು ಹಿಂದೂ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿರುವ ಘಟನೆ ನಗರದಲ್ಲಿ ನಡೆದಿದೆ. ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದ ಹಿಂದೂ ಯುವತಿ ಅದೇ ಗ್ರಾಮದ ಟಿಂಬರ್ ಕೆಲಸ ಮಾಡುತ್ತಿದ್ದ ಮುಸ್ಲಿಂ ಯುವಕನನ್ನ ಪ್ರೀತಿಸಿ ಮದುವೆಯಾಗಲು ಮುಂದಾಗಿದ್ದರು. ಇಬ್ಬರು ಪ್ರೀತಿಸುತ್ತಿದ್ದು ಮದುವೆಗೆಂದು ಸಬ್ರಿಜಿಸ್ಟರ್ ಕಚೇರಿಗೆ ಬಂದಾಗ ವಿಷಯ ತಿಳಿದ ಹಿಂದೂಪರ ಸಂಘಟನೆ ಕಾರ್ಯಕರ್ತರು ಸಬ್ ರಿಜಿಸ್ಟರ್ ಕಚೇರಿಯಲ್ಲಿ ಮಾತಿನ ಚಕಮಕಿ ನಡೆಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಮಹಿಳಾ ಠಾಣೆ ಪೊಲೀಸರು ಎಲ್ಲರನ್ನೂ ಪೊಲೀಸ್ ಠಾಣೆಗೆ ಕರೆತಂದಿದ್ದರು. ಈ ವೇಳೆ ಕೆಲ ಹಿಂದೂಪರ ಸಂಘಟನೆಯ ಕಾರ್ಯಕರ್ತರು ನೈತಿಕ ಪೆÇಲೀಸ್ ಗಿರಿ ಪ್ರದರ್ಶಿಸಿದ್ದಾರೆ ಎಂಬ ಆರೋಪಿ ಕೇಳಿಬಂದಿದೆ. ವಿಷಯ ತಿಳಿದು ಮಹಿಳಾ ಪೊಲೀಸ್ ಠಾಣೆಗೆ ಬಂದ ಎಸ್ಪಿ ಉಮಾಪ್ರಕಾಶ್ ಕೂಡ ಸುಮಾರು ಮೂರು ಗಂಟೆಗೆ ಅಧಿಕ ಹೊತ್ತು ಠಾಣೆಯಲ್ಲೇ ಮೊಕ್ಕಾಂ ಹೂಡಿದ್ದರು. ಆದರೆ, ಯುವತಿ ವಿಚಾರಣೆ ವೇಳೆ, ಅವನದ್ದು ಯಾವುದೇ ತಪ್ಪಿಲ್ಲ. ನಾವಿಬ್ಬರು ಪ್ರೀತಿಸುತ್ತಿದ್ದೇವೆ. ನಾವಿಬ್ಬರು ಮದುವೆಯಾಗುತ್ತೇವೆ. ಇದಕ್ಕೆ ಯಾರ ವಿರೋಧವೂ ಇಲ್ಲ. ನಾವಿಬ್ಬರು ಮೇಜರ್. ನನಗೆ ಯಾರೂ ಬೇಡ, ಅವನೇ ಬೇಕು ಎಂದಿದ್ದಾಳೆ. ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಯುವತಿ ತಾಯಿ ಕೂಡ ನನ್ನ ಮಗಳ ಜೀವವೇ ನನಗೆ ಮುಖ್ಯ. ನನ್ನ ಮಗಳೇ ಎಲ್ಲಾ ಕೆಲಸ ಮಾಡುತ್ತಿದ್ದಳು. ನನ್ನ ದೊಡ್ಡ ಮಗಳಿಗೆ ಮದುವೆಯಾಗಿದೆ. ಅವಳು ಕರೆದಾಗಲೂ ನಾನು ಬರುವುದಿಲ್ಲ ಎಂದು ಹೇಳಿದ್ದಾಳೆ. ನನ್ನ ಮಗಳು ನನ್ನ ಮನೆಗೆ ಬರದಿದ್ದರೂ ಪರವಾಗಿಲ್ಲ. ಅವರ ಅತ್ತೆ-ಮಾವರನ್ನ ಚೆನ್ನಾಗಿ ನೋಡಿಕೊಳ್ಳಲಿ. ಅವರು ಅವಳನ್ನ ಚೆನ್ನಾಗಿ ನೋಡಿಕೊಂಡರೆ ಸಾಕು. ನನ್ನ ಮಗಳು ಮದುವೆಯಾಗುವುದು ನನಗೂ ಇಷ್ಟ,
ನನ್ನ ಮಗಳು, ಅಳಿಯ ಇಬ್ಬರಿಗೂ ಯಾವುದೇ ತೊಂದರೆಯಾಗುವುದು ಬೇಡ. ಅವರಿಬ್ಬರು ಲಕ್ಷ್ಮೀಪುರಕ್ಕೆ ಬಂದರೆ ಸಾಕು ಎಂದು ಮಗಳ ಅನ್ಯಧರ್ಮಿಯರ ವಿವಾಹಕ್ಕೆ ತಾಯಿಯೇ ಒಪ್ಪಿಗೆ ಸೂಚಿಸಿದ್ದಾಳೆ. ಪೊಲೀಸರು ಯುವತಿಯನ್ನ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕರೆದೊಯ್ಯುವಾಗ ಪೊಲೀಸರ ಜೀಪನ್ನ ತಟ್ಟಿ ನಾನು ನನ್ನ ಮಗಳ ಜೊತೆ ಮಾತನಾಡಬೇಕು ಎಂದು ಪೊಲೀಸರ ಬಳಿ ಕಣ್ಣೀರಿಟ್ಟು ಗೋಳಾಡಿದ್ದಳು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g