ಸಿ.ಟಿ ರವಿಗೆ ಹರಿದ ಕಚ್ಚೆ ಕಳುಹಿಸುವ ಎಚ್ಚರಿಕೆ ನೀಡಿದ ಕಾಂಗ್ರೆಸ್
1 min readಮಾಜಿ ಸಿ ಎಂ ಸಿದ್ದರಾಮಯ್ಯ ಹಾಗೂ ಸಿ.ಟಿ ರವಿ ಮಧ್ಯೆ ಲೂಟಿ ರವಿ ಕಚ್ಚೆ ಹರುಕ ಹೇಳಿಕೆ ತಾರಕಕ್ಕೇರುತ್ತಿದ್ದು ಸಿ.ಟಿ ರವಿಗೆ ಹರಿದ ಕಚ್ಚೆ ಪಾರ್ಸೆಲ್ ಕಳುಹಿಸುವ ಎಚ್ಚರಿಕೆಯನ್ನು ಕಾಂಗ್ರೆಸ್ ನೀಡಿದೆ.
ಕಾಂಗ್ರೆಸ್ ಕಿಸಾನ್ ಸೆಲ್ ನಿಂದ ಹರಕು ಕಚ್ಚೆ ಪಾರ್ಸೆಲ್ ಅಭಿಯಾನದ ನಡೆಸುವ ವಾರ್ನಿಂಗ್ ನೀಡಲಾಗಿದೆ, ತನ್ನ ಕ್ಷೇತ್ರದ ಅಭಿವೃದ್ಧಿ ಕಡೆ ಗಮನ ಕೊಡದೇ ನಾಲಿಗೆ ಹರಿಬಿಡುವ ನಾಯಕ ಸಿ.ಟಿ.ರವಿ ಎಂದು ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಸುವ ಮಾತನಾಡಿದೆ, ಚಿಕ್ಕಮಗಳೂರು ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆ ಅನ್ನೋ ಭಯ ಸಿ ಟಿ ರವಿಗೆ ಶುರುವಾಗಿದೆ. ಆ ಹೆದರಿಕೆಯಿಂದ ಸಿದ್ದರಾಮಯ್ಯ ವಿರುದ್ಧ ಸಿ.ಟಿ. ರವಿ ಅಸಂಬದ್ಧ ಹೇಳಿಕೆ ನೀಡುತ್ತಿದ್ದಾರೆ ಎಂದು ಸಚಿನ್ ಮೀಗಾ ಹೇಳಿದ್ದಾರೆ, ಸಿ ಟಿ ರವಿ ಕೂಡಲೇ ಕ್ಷಮೆ ಕೇಳದಿದ್ರೆ ಹರಕು ಕಚ್ಚೆ ಕಳುಹಿಸುವುದಾಗಿ ಸಚಿನ್ ಮೀಗಾ ಎಚ್ಚರಿಕೆ ಕೊಟ್ಟಿದ್ದಾರೆ, ಅಲ್ಲದೆ ಕರ್ನಾಟಕ ಕಾಂಗ್ರೆಸ್ ಕಿಸಾನ್ ಘಟಕದ ವತಿಯಿಂದ ಕಚ್ಚೆಗಳ ಪಾರ್ಸಲ್ ಅಭಿಯಾನ ರಾಜ್ಯಾದ್ಯಂತ ವಿಸ್ತಾರಿಸುವ ಎಚ್ಚರಿಕೆಯನ್ನು ನೀಡಿದ್ದಾರೆ
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g