ಆನೆಗಳ ದಾಳಿ, ದಾಂದಲೆ, ಅಬ್ಬರ ನೋಡೇ ಇರ್ತೀರಾ… ಆದ್ರೆ ಮರಿಗಳ ರಕ್ಷಣೆಗೆ ಹೇಗೆ ಹೋರಾಡ್ತಾವೆ ಗೊತ್ತ..?
1 min readಚಿಕ್ಕಮಗಳೂರು: ತಂತಿ ಬೇಲಿಗೆ ಸಿಕ್ಕ ಮರಿ ಆನೆಯನ್ನ ನಾಲ್ಕು ಕಾಡಾನೆಗಳು ರಕ್ಷಣೆ ಮಾಡಿರುವ ಅಪರೂಪದ ಘಟನೆ ಚಿಕ್ಕಮಗಳೂರು ತಾಲೂಕಿನ ಹೊರಹೊಲಯ ಉಕ್ಕುಂದ ಗ್ರಾಮದ ಬಳಿ ನಡೆದಿದೆ. ಚಿಕ್ಕಮಗಳೂರು ತಾಲೂಕಿನ ಹೊರಹೊಲಯ ಉಕ್ಕುಂದ ಗ್ರಾಮದ ಬಳಿ ತಂತಿ ಬೇಲಿಗೆ ಸಿಕ್ಕ ಮರಿ ಆನೆಯನ್ನ ಆನೆಗಳ ಹಿಂಡು ಹೇಗೆ ರಕ್ಷಣೆ ಮಾಡಿವೆ. ಮರಿ ಆನೆಗೆ ಸುತ್ತುವರೆದು ಸೊಂಡಿಲಲ್ಲ ಎಳೆದು, ಕಾಲಲ್ಲಿ ತಳ್ಳಿ ಬಿದ್ದ ಮರಿಯನ್ನ ಹೇಗೆ ಆನೆಗಳು ಎಬ್ಬಿಸಿರುವ ಅಪರೂಪದ ವಿಡಿಯೋ ಲಭ್ಯವಾಗಿದೆ. ಚಿಕ್ಕಮಗಳೂರು ತಾಲೂಕಿನ ಉಕ್ಕುಂದ ಬಳಿ ತಂತಿ ಬೇಲಿಗೆ ಸಿಕ್ಕ ಮರಿಯನ್ನ ನಾಲ್ಕು ಆನೆಗಳು ಸೇರಿ ರಕ್ಷಿಸಿದ್ದಾವೆ. ಮರಿಗಾಗಿ 15 ನಿಮಿಷಗಳ ಕಾಲ ಕಾಡಾನೆಗಳ ಹಿಂಡು ಹೋರಾಟ ಮಾಡಿ ಕೊನೆಗೂ ತಂತಿ ಬೇಲಿಯಿಂದ ಮರಿಯನ್ನ ಬಚಾವ್ ಮಾಡಿದವು. ಸುಸ್ತಾಗಿ, ತೋಟದಲ್ಲಿದ್ದ ಡ್ರಮ್ ನಲ್ಲಿ ನೀರು ಕುಡಿದು ಆಯಾಸವನ್ನು ನೀಗಿಸಿಕೊಂಡವು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g