ಮಾನವ ಹಕ್ಕುಗಳ ಮಹಾ ಮೈತ್ರಿ ಸಂಸ್ಥಾಪಕರ ದಿನಾಚರಣೆ
ಚಿಕ್ಕಮಗಳೂರು : ಮಾನವ ಹಕ್ಕುಗಳ ಮಹಾ ಮೈತ್ರಿಯ ಸಂಸ್ಥಾಪಕರಾದ ಕೊಲ್ಲಡಿ ಬಾಲಕೃಷ್ಣನ್ ರವರ ಹುಟ್ಟು ಹಬ್ಬದ ಪ್ರಯುಕ್ತ ಸಂಸ್ಥಾಪಕರ ದಿನಾಚರಣೆ ಜೊತೆಯಲ್ಲಿ ಕಾನೂನು ಅರಿವು ಕಾರ್ಯಕ್ರಮ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ನಗರದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಇಂದು ನಡೆಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ವಕೀಲರಾದ ತೇಜಸ್ವಿಯವರು ಸಂವಿಧಾನದ ಬಗ್ಗೆ ಅರಿವು ಮೂಡಿಸಿದರು. ಮಾನವ ಹಕ್ಕುಗಳ ಬಗ್ಗೆ ಎಲ್ಲರಿಗೂ ಅರಿವಿರಬೇಕಾದ ಅವಶ್ಯಕತೆ ಇದೆ. ಮಾನವ ಹಕ್ಕು ಎನ್ನುವುದು ಸಮುದ್ರವಿದ್ದಂತೆ. ನಮ್ಮ ಸಂವಿಧಾನ ನಮಗೆ ಹಕ್ಕುಗಳನ್ನು ನೀಡಿದ್ದು ಜೊತೆಯಲ್ಲಿ ಕರ್ತವ್ಯವನ್ನು ನೀಡಿದೆ. ಇವುಗಳನ್ನು ಪಾಲಿಸಬೇಕಾದ ಜವಾಬ್ದಾರಿ ನಮ್ಮದಾಗಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಮಾನವ ಹಕ್ಕುಗಳ ಮಹಾ ಮೈತ್ರಿಯ ಶೃಂಗೇರಿ ವಿಭಾಗದ ಅಧ್ಯಕ್ಷ ಗಿರೀದರ್, ದಯಾನಂದ್, ದುಗ್ಗಪ್ಪಗೌಡ, ಮರೀಗೌಡ, ಚಂದ್ರಶೇಖರ್, ಕಿರಣ್ ಕುಮಾರ್, ಉಪಸ್ಥಿತರಿದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g