April 29, 2024

MALNAD TV

HEART OF COFFEE CITY

ದೇಗುಲಕ್ಕೆ ದೇಣಿಗೆ ನೀಡಿದ ಅಜ್ಜಿ

1 min read

ಚಿಕ್ಕಮಗಳೂರು : ಆಕೆ ಎಂಬತ್ತರ ವೃದ್ಧೆ. ಮನೆ, ದೇವಸ್ಥಾನ, ಬೀದಿ-ಬೀದಿ ಅಲೆದು ಭಿಕ್ಷೆ ಬೇಡಿ ಬದುಕಿನ ಬಂಡಿ ಸಾಗಿಸ್ತಿದ್ಲು. ನಿಷ್ಕಲ್ಮಶ ಮನಸ್ಸು. ಕರುಣಾಮಯಿ. ಕೊಟ್ಟಷ್ಟು ಪಡೆದುಕೊಳ್ತಿದ್ದ ಸಂತೃಪ್ತೆ. ಸಾಯಿ ಬಾಬಾ ಮಂದಿರವೇ ಆಕೆಯ ಅರಮನೆ. ದೈವಿ ಭಕ್ತೆ ಕೂಡ. ಉಳ್ಳವರು ದಾನ ಮಾಡೋಕೆ ಹಿಂದೆ-ಮುoದೆ ನೋಡೋ ಜನ ಒಂದೆಡೆ. ರಾಮ-ಕೃಷ್ಣನ ಲೆಕ್ಕದಲ್ಲಿ ದೇವರ ದುಡ್ಡನ್ನು ನುಂಗಿಹಾಕೋ ಜನ ಮತ್ತೊಂದೆಡೆ. ಆದ್ರೆ, ಆ ವೃದ್ಧೆ ಜೀವಮಾನವಿಡಿ ಭಿಕ್ಷೆ ಬೇಡಿ ಕೂಡಿಟ್ಟ ಹಣವನ್ನ ಆಂಜನೇಯನ ಪಾದಕ್ಕೆ ಸುರಿದಿದ್ದಾಳೆ. ಪೈಸೆ-ಪೈಸೆ ಸೇರ್ಸಿ ಕೂಡಿಟ್ಟ 20 ಸಾವಿರ ಹಣವನ್ನ ಆಂಜನೇಯ ದೇವಾಲಯಕ್ಕೆ ನೀಡಿದ್ದಾಳೆ. ಸಾವ್ರ ಜನ ಲಕ್ಷ ಕೊಟ್ರು ಈ 20 ಸಾವಿರಕ್ಕೆ ಸಮವಲ್ಲ. ಆಂಜನೇಯನಿಗೂ ಇದೇ 20 ಸಾವಿರದ ಮೇಲೆಯೇ ಪ್ರೀತಿ. ಯಾರು ಆ ತುಂಬು ಹೃದಯದ ಹೃದಯವಂತ ಭಿಕ್ಷುಕಿ ಅಂತೀರಾ… ಈ ಸ್ಟೋರಿ ನೋಡಿ..

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!