ಗೌರಿಗದ್ದೆ ಆಶ್ರಮದಲ್ಲಿ ಅರಣ್ಯ ಅಧಿಕಾರಿಗಳ ಸರ್ಚಿಂಗ್..!
1 min readಚಿಕ್ಕಮಗಳೂರು: ಹುಲಿ ಚರ್ಮದ ಮೇಲೆ ವಿನಯ್ ಗುರೂಜಿ ಕುಳಿತುಕೊಂಡಿರೋ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿತ್ತು. ಫೋಟೋ ವೈರಲ್ ಆದ ಬೆನ್ನಲ್ಲೇ ಈ ಬಗ್ಗೆ ವಿನಯ್ ಗುರೂಜಿ ಅವರು ಸ್ಪಷ್ಟನೆ ನೀಡಿದ್ದಾರೆ.
ರಾಜ್ಯದಲ್ಲಿ ಹುಲಿ ಉಗುರಿನ ಸುದ್ದಿಯು ಸಾಕಷ್ಟು ಸದ್ದು ಮಾಡುತ್ತಿದ್ದೆ. ಈ ಹಿನ್ನಲೆಯಲ್ಲಿ ಆ ಹುಲಿ ಚರ್ಮವನ್ನು 2 ವರ್ಷದ ಹಿಂದೆ ಶಿವಮೊಗ್ಗ ಮೂಲದ ವ್ಯಕ್ತಿ ಅಮರೇಂದ್ರ ಎಂಬುವವರು ನನಗೆ ನೀಡಿದ್ದರು. ಅದು ಅವರ ತಾತನ ಕಾಲದಿಂದಲೂ ಮನೆಯಲ್ಲಿ ಇತ್ತು. ಮನೆಯಲ್ಲಿ ಇರಬಾರದು ಅಂತ ನಮಗೆ ತಂದು ಕೊಟ್ಟಿದ್ದರು. ಅದಕ್ಕೆ ಎಲ್ಲಾ ದಾಖಲೆ ಕೂಡ ಇದೆ. ಅರಣ್ಯ ಅಧಿಕಾರಿಗಳು ಅವರಿಗೆ ದಾಖಲೆ ನೀಡಿದ್ದರು. ಒಂದೇ ಒಂದು ಫೋಟೋ ತೆಗೆದಿದ್ದು, ಅದು ಸಾಕಷ್ಟು ವೈರಲ್ ಆಗಿತ್ತು. ಅದಕ್ಕೆ ಆ ಚರ್ಮವನ್ನ ಅವರಿಗೆ ನೀಡಿದ್ದೇವು. ಅವರು ಅದನ್ನ ಸರ್ಕಾರಕ್ಕೆ ಹಿಂದಿರುಗಿಸಿದ್ದಾರೆ. ಹುಲಿ ಚರ್ಮದ ಕುರಿತು ಪ್ರತಿಯೊಂದಕ್ಕೂ ಎಲ್ಲಾ ದಾಖಲೆ ಇದೆ. ಅಧಿಕಾರಿಗಳು ಆಶ್ರಮಕ್ಕೆ ಬಂದಿದ್ದರು. ಎಲ್ಲಾ ದಾಖಲೆ ಅವರಿಗೆ ನೀಡಿದ್ದೇವೆ. ತನಿಖೆಗೆ ಕರೆದರೂ ಹೋಗುತ್ತೇನೆ ಎಂದಿದ್ದಾರೆ. ವಿನಯ್ ಗುರೂಜಿ ಅವರು ಈ ರೀತಿ ಹೇಳಿಕೆ ಕೊಟ್ಟ ಬಳಿಕ ಅವರ ಗೌರಿಗದ್ದೆ ಆಶ್ರಮಕ್ಕೆ ಕೊಪ್ಪ ವಿಭಾಗದ ಡಿ ಎಫ್ ಓ ನಂದೀಶ್ ನೇತೃತ್ವದಲ್ಲಿ ತಂಡ ಭೇಟಿನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಈ ಹಿನ್ನಲೆ ಡಿ.ಎಫ್.ಓ. ನಂದೀಶ್ ನೇತೃತ್ವದ ತಂಡದಿಂದ ವಿಚಾರಣೆ ನಡೆದಿದ್ದು, ಬೆಂಗಳೂರು ಕೇಂದ್ರ ಕಚೇರಿಯಿಂದ ಪರಿಶೀಲನೆಗೆ ಸೂಚನೆ ಬಂದ ಹಿನ್ನೆಲೆ ಆಶ್ರಮದಲ್ಲಿ ಸ್ಥಳ ಪರಿಶೀಲನೆ ಮಾಡಿದ್ದೇವೆ. ಸ್ಥಳ ಮಹಜರು ಪ್ರಕ್ರಿಯೆ ಕೂಡ ನಡೆಯುತ್ತಿದೆ. ವಿನಯ್ ಗುರೂಜಿ ಅವರಿಂದಲೂ ಹುಲಿ ಚರ್ಮದ ವಿಚಾರ ಮಾಹಿತಿ ಪಡೆದಿದ್ದೇವೆ. ವಿಚಾರಣೆ ವೇಳೆ ಎರಡು ವರ್ಷದ ಹಿಂದಿನ ಹುಲಿ ಚರ್ಮದ ಫೋಟೋ ಎಂದು ಹೇಳಿದ್ದಾರೆ. ಯಾರು ಕೊಟ್ಟಿದ್ದು, ಎಲ್ಲಿಂದ ಬಂತು ಎಲ್ಲಾ ಮಾಹಿತಿ ನೀಡಿದ್ದಾರೆ. ಶಿವಮೊಗ್ಗದ ಅಮರೇಂದ್ರ ಎಂಬುವರು ಉಡುಗೊರೆ ನೀಡಿದ್ದು ಎಂದು ಮಾಹಿತಿ ನೀಡಿದ್ದಾರೆ. ಹುಲಿ ಚರ್ಮದ ಫೋಟೋ ಸಂಬಂಧ ಎಲ್ಲಾ ಮಾಹಿತಿ ನೀಡಿದ್ದಾರೆ. ಪರಿಶೀಲನೆ ನಡೆಸಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡುತ್ತೇವೆ ಎಂದು ವಿನಯ್ ಗುರೂಜಿ ಆಶ್ರಮದಲ್ಲಿ ಡಿ.ಎಫ್.ಓ. ನಂದೀಶ್ ಹೇಳಿಕೆ ನೀಡಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g