April 29, 2024

MALNAD TV

HEART OF COFFEE CITY

ಫೈನಾನ್ಸ್ ಸಾಲ: ಮನೆಯೇ ಬಿಟ್ಟುಕೊಡಬೇಕಾದ ಕುಟುಂಬ ಬೀದಿಪಾಲು

1 min read

ಚಿಕ್ಕಮಗಳೂರು: ಖಾಸಗಿ ಫೈನಾನ್ಸ್ ನಲ್ಲಿ ಸಾಲ ಪಡೆಯುವವರು ಈ ಸುದ್ದಿ ಸಂಪೂರ್ಣ ಓದಲೇಬೇಕು. ಸಾಲ ಕಟ್ಟಿಲ್ಲ ಅಂದ್ರೆ ನೋಡಿ ನಿಮ್ಮ ಮನೆ ಸೀಜ್ ಆಗೋದು ಗ್ಯಾರೆಂಟಿ ಆಮೇಲೆ ನೀವು ಬೀದಿ ಪಾಲು, ಜಾಸ್ತಿ ಮಾತಾಡಿದ್ರೆ ಕೋರ್ಟ್ ಇಲ್ಲ ಪೊಲೀಸು ಮನುಷತ್ವ ಇಲ್ವಾ ಅಂದ್ರೆ ಅದೆಲ್ಲಾ ಕೇಳೊಕೆ ಹೋಗ್ಬೇಡಿ…ಇದು ನಾಲ್ಕೇ ವರ್ಷಕ್ಕೆ ಪಡೆದುಕೊಂಡ ಸಾಲದಷ್ಟೆ, ಬಡ್ಡಿ ಡಬಲ್ ಆಗಿರುವ ಕಥೆ ,,,

ಚಿಕ್ಕಮಗಳೂರು ತಾಲೂಕಿನ ವಡೇರಳ್ಳಿಯ ರೈತ ರಂಗಸ್ವಾಮಿ ಇಕ್ವಿಟಾಸ್ ಎಂಬ ಖಾಸಗಿ ಫೈನಾನ್ಸ್ ನಲ್ಲಿ ಪಡೆದ ಸಾಲಕ್ಕೆ ಇದೀಗ ಸ್ವಂತ ಮನೆಯನ್ನೇ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಮನೆಯಲ್ಲಿದ್ದ 9 ಜನ ಸೂರಿಲ್ಲದೇ ಬದುಕುವ ಪರಿಸ್ಥಿತಿಗೆ ಬಂದಿದ್ದಾರೆ. 2019 ರಲ್ಲಿ ಮನೆಯ ಮೇಲೆ ಪಡೆದ ಸಾಲಕ್ಕೆ ಇದೀಗ ನಾಲ್ಕೇ ವರ್ಷದಲ್ಲಿ ಇದ್ದ ಒಂದು ಮನೆಯನ್ನೇ ಕಳೆದುಕೊಳ್ಳುವಂತಾಗಿದೆ. ಆರೂವರೆ ಲಕ್ಷ ರೂಪಾಯಿ ಸಾಲ ಪಡೆದಿದ್ದ ರಂಗಸ್ವಾಮಿ ಇದೀಗ 14 ಲಕ್ಷ ಕಟ್ಟುವಂತಾಗಿದೆ. ಸಾಲ ಕಟ್ಟಿಲ್ಲ ಎಂಬ ಕಾರಣಕ್ಕೆ ವಡೇರಳ್ಳಿಯ ರಂಗಸ್ವಾಮಿ ಮನೆ ಹರಾಜಿಗೆ ಇಟ್ಟಿದ್ದಾರೆ ಇಕ್ವಿಟಾಸ್ ಫೈನಾನ್ಸ್ ನವರು. ಚೆಕ್ ಬೌನ್ಸ್ , ಪೆನಾಲ್ಟಿ ಹೀಗೆ ಬಡ್ಡಿ ಚಕ್ರ ಬಡ್ಡಿ ಸೇರಿಸಿ ಮನೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಏನೇ ಪರಿಪರಿಯಾಗಿ ಬೇಡಿಕೊಂಡರು ಸಮಯ ಕೊಡದ ಫೈನಾನ್ಸ್ ವಿರುದ್ಧ ರೈತ ಸಂಘದ ಮೊರೆ ಹೋಗಿದ್ದಾರೆ ರಂಗಸ್ವಾಮಿ ಇದೇ 17 ರಂದು ಫೈನಾನ್ಸ್ ಕಂಪನಿ ಬಳಿ ಪ್ರತಿಭಟನೆಗೆ ರೈತ ಮುಖಂಡ ಗುರುಶಾಂತಪ್ಪ ಕರೆ ನೀಡಿದ್ದಾರೆ. ಅಷ್ಟರೊಳಗೆ ಸಮಸ್ಯೆ ಬಗೆಹರಿಸಿಕೊಳ್ಳಲು ಹೇಳಿರುವ ರೈತ ಮುಖಂಡರು ಮುಂದೆ ಯಾರಿಂದಲೂ ಯಾವುದೇ ವಸೂಲಿ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!