ವಿದ್ಯುತ್ ಶಕ್ತಿಯನ್ನ ಖಾಸಗೀಕರಣ ಮಾಡಲು ಹೊರಟಿರುವ ಕೇಂದ್ರ ಸರ್ಕಾದ ವಿರುದ್ಧ ರೈತ ಸಂಘ ಆಕ್ರೋಶ
ರೈತರು ಲಕ್ಷಾಂತರ ಎಕರೆಗೆ ನೀರಾವರಿ ಕಲ್ಪಿಸುವ ಮೂಲಕ ದೇಶದ ಜನರಿಗೆ ತರಕಾರಿ, ಆಹಾರ ಹಾಗೂ ವಾಣಿಜ್ಯ ಬೆಳೆ ಕಲ್ಪಿಸಿಕೊಟ್ಟು, ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಆದರೆ, ಸರ್ಕಾರ ಅಂತಹ ರೈತರ ಬದುಕಿನ ಮೇಲೆ ಬರೆ ಎಳೆಯಲು ಮುಂದಾಗಿದೆ ಎಂದು ರೈತ ಸಂಘ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಸರ್ಕಾರ ವಿದ್ಯುತ್ ಶಕ್ತಿಯನ್ನ ಖಾಸಗೀಕರಣ ಮಾಡಲು ಹೊರಟಿದ್ದಾರೆ. ವಿದ್ಯುತ್ ಖಾಸಗೀಕರಣ ಮಾಡಿದ ಕೂಡಲೇ ದರ ಹೆಚ್ಚಾಗುತ್ತೆ. ದರ ಹೆಚ್ಚಾದ ಕೂಡಲೇ ರೈತರು ನಷ್ಟ ಅನುಭವಿಸುತ್ತಾರೆ. ರೈತರು ವೈಜ್ಞಾನಿಕ ಬೆಲೆ ನಿಗದಿ ಮಾಡಿ ಎಂದು ಹೇಳಿದ್ದಾರೆ. ಆದರೆ, ಸರ್ಕಾರ ಖಾಸಗೀಕರಣ ಮಾಡ ಹೊರಟಿದೆ. ಕೂಡಲೇ ಖಾಸಗೀಕರಣ ಮಾಡುವುದನ್ನ ನಿಲ್ಲಿಸಬೇಕೆಂದು ಆಗ್ರಹಿಸಿದ್ದಾರೆ. ಇವತ್ತು ಕೇಂದ್ರ ಸರ್ಕಾರ ಮತ್ತೆ ರೈತರ ಮೇಲೆ ಬರೆ ಎಳೆಯುತ್ತಿದೆ. ಭೂತಾನ್ ನಿಂದ 17, 500 ಲಕ್ಷ ಕ್ವಿಂಟಾಲ್ ಅಡಿಕೆಯನ್ನ ಆಮದು ಮಾಡಿಕೊಳ್ಳುವ ಮೂಲಕ ದೇಶದ ಅಡಿಕೆ ಬೆಳೆಗಾರರ ಭವಿಷ್ಯದ ಮೇಲೆ ಬರೆ ಹಾಕುತ್ತಿದೆ. ಈಗ ದೇಶದ ಅಡಿಕೆ ಬೆಳೆಗಾರರಿಗೆ ಸ್ವಲ್ಪ ಬೆಲೆ ಸಿಗುತ್ತಿದೆ. ಸಿಗುವ ಬೆಲೆಯೂ ಕೇಂದ್ರದ ಆಮದು ನೀತಿಯಿಂದ ಹಾಳಾಗುತ್ತಿದೆ. ಇದರಿಂದ ಬೆಳೆಗಾರರು ಹಾಳಾಗುತ್ತಾರೆ.
ಅಡಿಕೆಗೆ ಬರುವ ಬೇರುರೋಗ, ಹಳದಿ ರೋಗಕ್ಕೆ ಔಷಧಿ ಕಂಡುಹಿಡಿಯಿರಿ ಎಂದು ಬೆಳೆಗಾರರು 20 ವರ್ಷದಿಂದ ಹೋರಾಡುತ್ತಿದ್ದಾರೆ. ಗೋರಖ್ ಸಿಂಗ್ ವರದಿ ಜಾರಿಗೆ ತನ್ನಿ ಎಂದರೂ ಸರ್ಕಾರ ಇದ್ಯಾವುದನ್ನೂ ಮಾಡದೆ ನೇರವಾಗಿ ರೈತರ ಬವಿಷ್ಯ ಮೇಲೆ ಪರಿಣಾಮ ಬೀರುವ ಆಮದು ನೀತಿ ಜಾರಿಗೆ ತರಲು ಮುಂದಾಗಿದೆ ಎಂದು ಕೇಂದ್ರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g