ಹುಲ್ಲು ತಗೆದುಕೊಂಡು ಹೋಗುತ್ತಿದ್ದ ವಾಹನಕ್ಕೆ ವಿದ್ಯುತ್ ತಂತಿ ಸ್ಪರ್ಷ, ಸುಟ್ಟು ಕರಕಲಾದ ಮೇವು
1 min read
ಬಾಳೆಹೊನ್ನೂರು: ಸಮೀಪದ ಖಾಂಡ್ಯ ಹೊಬಳಿ ಬಿದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಜ್ಜಿನಿ ಗ್ರಾಮದಿಂದ ಹುಲ್ಲು ಕೊಂಡೊಯ್ಯುತ್ತಿದ್ದ ವಾಹನಕ್ಕೆ ಆಕಸ್ಮಿಕವಾಗಿ ವಿದ್ಯುತ್ ಲೈನ್ ತಗುಲಿ ಬೆಂಕಿ ಹಿಡಿದು ಹುಲ್ಲು ಸುಟ್ಟು ಹೋದ ಘಟನೆ ನಡೆದಿದೆ.
ಉಜ್ಜಿನಿಯ ರೈತರೊಬ್ಬ ಭತ್ತದ ಗದ್ದೆಯಿಂದ ಕಟಾವು ಮಾಡಿದ ಹುಲ್ಲನ್ನು ಪಿಕಪ್ ವಾಹನದಲ್ಲಿ ತುಂಬಿಸಿಕೊಂಡು ಬೊಗಸೆ ಗ್ರಾಮಕ್ಕೆ ಕೊಂಡೊಯ್ಯುವ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ವಾಹನದಲ್ಲಿದ್ದ ಹುಲ್ಲಿಗೆ ಬೆಂಕಿ ಹತ್ತಿಕೊಂಡು ಉರಿದು ನಷ್ಟ ಸಂಭವಿಸಿದೆ. ತಕ್ಷಣ ಗ್ರಾಮಸ್ಥರು ಒಗ್ಗೂಡಿ ಬೆಂಕಿ ನಂದಿಸುವಲ್ಲಿ ಸಹಕರಿಸಿದರು.
ಉಜ್ಜಿನಿ ಗ್ರಾಮದ ಕೆಲವೆಡೆ ಜಮೀನಿನ ಸಮೀಪ ಹಾದುಹೋಗಿರುವ ವಿದ್ಯುತ್ ಲೈನ್ ಕೈಗೆಟುಕುವಂತಿದ್ದು, ಈ ಬಗ್ಗೆ ಹಲವಾರು ಬಾರಿ ಮೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರೂ ಸಹ ವಿದ್ಯುತ್ ಲೈನ್ ಸ್ಥಳಾಂತರಿಸಿಲ್ಲ ಹಾಗೂ ಸರಿಪಡಿಸಿಲ್ಲ. ಮಲೆನಾಡಿನಲ್ಲಿ ಇದೀಗ ಹೆಚ್ಚಾಗಿ ಭತ್ತದ ಕೊಯ್ಲು ನಡೆದು ವಾಹನದಲ್ಲಿ ಹುಲ್ಲು ಸಾಗಾಟ ನಡೆಸುತ್ತಿದ್ದು, ಇಂತಹ ಅನಾಹುತ ಪದೇ ಪದೆ ಸಂಭವಿಸುವ ಸಾಧ್ಯತೆಯಿದೆ. ಇನ್ನು ಮುಂದೆ ಇಂತಹ ಅನಾಹುತ ಸಂಭವಿಸುವ ಮೊದಲು ಮೆಸ್ಕಾಂನವರು ಸೂಕ್ತ ಕ್ರಮಕೈಗೊಂಡು ವಿದ್ಯುತ್ ಲೈನ್ ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g