April 29, 2024

MALNAD TV

HEART OF COFFEE CITY

ಡೈನಾಮೈಟ್ ಸ್ಫೋಟ; ವ್ಯಕ್ತಿಗೆ ಗಂಭೀರ ಗಾಯ

1 min read

ಚಿಕ್ಕಮಗಳೂರು: ಕಡೂರು ತಾಲೂಕು ಸೇವಾಪುರ ಗ್ರಾಮದಲ್ಲಿ ಡೈನಾಮೈಟ್ ಸ್ಫೋಟಗೊಂಡು ರೈತ ಕಾಲು ಕಳೆದುಕೊಂಡಿರುವ ಘಟನೆ ನಡೆದಿದೆ.

ರೈತನು ಹೊಲದಿಂದ ಬರುವಾಗ ದಿಢೀರ್ ಡೈನಾಮೈಟ್ ಸ್ಫೋಟಗೊಂಡ ಹಿನ್ನಲೆ ಸೇವಾಪುರ ಗ್ರಾಮದ ರೈತ ಸಿದ್ದನಾಯ್ಕ್ ಎಂಬುವವರ ಸ್ಥಿತಿ ಗಂಭೀರವಾಗಿದೆ. ಡೈನಾಮೈಟ್ ಸ್ಫೋಟಗೊಂಡ ಪರಿಣಾಮ ರೈತನ ಕಾಲಿಗೆ ಬಡಿದು ಮೂಳೆಗಳು ಪುಡಿಯಾಗಿವೆ, ಗಾಯಾಳು ಸಿದ್ದಾನಾಯ್ಕ್ ನನ್ನು ಕಡೂರು ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಎಡಗಾಲಿನ ಮೂಳೆ ಪುಡಿಯಾಗಿದ್ದು, ಕಾಲು, ಕೈ, ಎದೆ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಸಿದ್ದಾನಾಯ್ಕ್ ಏಳಲಾಗದೆ ನಿನ್ನೆ ಸಂಜೆಯಿಂದ ಕ್ವಾರಿಯಲ್ಲೇ ಬಿದ್ದಿದ್ದಾರೆ. ಎಡಗಾಲು ಚಿಕಿತ್ಸೆಗೆ ಆಗುವುದಿಲ್ಲ, ಕಾಲು ಬರುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಚೀಲನಹಳ್ಳಿಯಲ್ಲಿ ಕ್ವಾರಿಗೆ ಅನುಮತಿ ಪಡೆದಿರೋ ವ್ಯಕ್ತಿ, ಇದೀಗಾ ತಂಗಲಿ ಗ್ರಾಮ ಪಂಚಾಯಿತಿಯಲ್ಲಿ ಗಣಿಗಾರಿಕೆ ಮಾಡುತ್ತಿದ್ದಾರೆಂದು ಸ್ಥಳಿಯರ ಆರೋಪ ಮಾಡಿದ್ದು, ಈ ಸಂಬಂಧ ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!