ಡಾ. ರಾಜ್ ಕುಟುಂಬದ ಮತ್ತೊಂದು ಕುಡಿ ಬೆಳ್ಳಿತೆರೆಗೆ ನಿಂಬಿಯಾ ಬನಾದ ಮ್ಯಾಗ ಚಿತ್ರದ ಮೂಲಕ ಷಣ್ಮುಖ ನಟನೆ
1 min readವರನಟ ಡಾ. ರಾಜ್ ಕುಮಾರ್ ಕುಟುಂಬದ ಮತ್ತೊಂದು ಕುಡಿ ಷಣ್ಮುಖ ಗೋವಿಂದರಾಜ್ ನಟನೆಯ ‘ನಿಂಬಿಯಾ ಬನಾದ ಮ್ಯಾಗ’ ಚಿತ್ರದ ಹಾಡಿನ ಚಿತ್ರೀಕರಣ ಮಲ್ಲಂದೂರಿನ ಮಳಲೂರಮ್ಮ ಜಾತ್ರೆ ವೇಳೆ ನಡೆಯಿತು. ಎಂ.ಜಿ.ಪಿ ಎಕ್ಸ್. ಎಂಟರ್ ಪ್ರೈಸಸ್ ಅಡಿ ವಿ. ಮಾದೇಶ್ ನಿರ್ಮಾಣದ ಚಿತ್ರದಲ್ಲಿ ತಾಯಿ ಮಗನ ಭಾಂದವ್ಯದ ಕಥಾನಕವಿದೆ. ಮಲೆನಾಡಿನ ವಾತಾವರಣ ಆಧಾರಿತ ಸಿನೆಮಾ ಇದಾಗಿದ್ದು ಈಗಾಗಲೇ ಬೆಂಗಳೂರು ಉಡುಪಿಗಳಲ್ಲಿ ಚಿತ್ರೀಕರಣ ನಡೆಸಿರುವ ಚಿತ್ರತಂಡ ಮುಂದಿನ 15 ದಿನಗಳು ಚಿಕ್ಕಮಗಳೂರು ಸುತ್ತಮುತ್ತ ಮೂರನೇ ಹಂತದ ಶೂಟಿಂಗ್ ನಡೆಸುತ್ತಿದೆ. ಚಿತ್ರಕ್ಕೆ ಕಡಬ ಅಶೋಕ್ ನಿರ್ದೇಶನವಿದ್ದು ಸಿದ್ದು ಛಾಯಾಗ್ರಾಹಕರಾಗಿದ್ದಾರೆ. ವಿಶೇಷ ಪಾತ್ರದಲ್ಲಿ ಎಸ್ ನಾರಾಯಣ್ ಪುತ್ರ ಪಂಕಜ್ ನಾರಾಯಣ್ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಚಿಕ್ಕಮಗಳೂರಿನ ಹಿರಿಯ ಛಾಯಾಗ್ರಾಹಕ, ಡಾ.ರಾಜ್ ಕುಮಾರ್ ಅಪ್ಪಟ ಅಭಿಮಾನಿ ಎ.ಎನ್ ಮೂರ್ತಿ ಈ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ. ಊರಿನ ಪಟೇಲರ ಪಾತ್ರದಲ್ಲಿ ನಟಿಸಿರುವ ಮೂರ್ತಿ ಖಡಕ್ ಡೈಲಾಗ್ ಗಳೊಂದಿಗೆ ಚಿತ್ರದಲ್ಲಿ ಮಿಂಚಲಿದ್ದಾರೆ. ಹಿರಿಯ ನಟ ರಾಮಕೃಷ್ಣ , ಭವ್ಯ ಸೇರಿದಂತೆ ಹಲವು ಕಲಾವಿದರು ‘ನಿಂಬಿಯಾ ಬನಾದ ಮ್ಯಾಗ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g